ಕ್ರೀಡೆ

“ಧೋನಿ ನಾಯಕರಾಗಿದ್ದರೆ ಆರ್‌ ಸಿಬಿ ಮೂರು ಸಲ ಐಪಿಎಲ್‌ ಕಪ್‌ ಗೆಲ್ಲುತ್ತಿತ್ತು’

ನವದೆಹಲಿ: ಒಂದು ವೇಳೆ ಮಹೇಂದ್ರ ಸಿಂಗ್‌ ಧೋನಿ ಆರ್‌ಸಿಬಿ ತಂಡದ ನಾಯಕರಾಗಿದ್ದರೆ, ತಂಡ ಇಷ್ಟರಲ್ಲಿ ಮೂರು ಸಲ ಚಾಂಪಿಯನ್‌ ಆಗಿರುತ್ತಿತ್ತು ಎಂದಿದ್ದಾರೆ ಪಾಕಿಸ್ತಾನದ ಲೆಜೆಂಡ್ರಿ ವೇಗಿ ವಾಸಿಮ್‌ ಅಕ್ರಮ್‌!

ಐಪಿಎಲ್‌ನ ಅತ್ಯಂತ ನತದೃಷ್ಟ ತಂಡಗಳಲ್ಲಿ ಒಂದಾದ ರಾಯಲ್‌ ಚಾಲೆಂಜರ್ ಬೆಂಗಳೂರು, 2009, 2011 ಮತ್ತು 2016ರಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿತ್ತು. ಆದರೆ ಮೂರೂ ಸಲ ರನ್ನರ್ ಅಪ್‌ ಸ್ಥಾನಕ್ಕೆ ಸಮಾಧಾನಪಟ್ಟಿತ್ತು. ಒಂದು ವೇಳೆ ಮಹೇಂದ್ರ ಸಿಂಗ್‌ ಧೋನಿ ಆರ್‌ಸಿಬಿ ತಂಡದ ನಾಯಕರಾಗಿದ್ದರೆ, ತಂಡ ಇಷ್ಟರಲ್ಲಿ ಮೂರು ಸಲ ಚಾಂಪಿಯನ್‌ ಆಗಿರುತ್ತಿತ್ತು ಎಂಬುದಾಗಿ ಕ್ರಿಕೆಟ್‌ ವೆಬ್‌ಸೈಟ್‌ ಜತೆಗಿನ ಸಂದರ್ಶನವೊಂದರಲ್ಲಿ ಅಕ್ರಮ್‌ ಅಭಿಪ್ರಾಯಪಟ್ಟಿದ್ದಾರೆ.

“ಅಪಾರ ಅಭಿಮಾನಿಗಳ ಬೆಂಬಲವನ್ನು ಹೊಂದಿರುವ ಆರ್‌ಸಿಬಿ ಈವರೆಗೆ ಒಮ್ಮೆಯೂ ಚಾಂಪಿಯನ್‌ ಆಗದಿದೇ ಇರುವುದು ದೌರ್ಭಾಗ್ಯ. ಕ್ರಿಕೆಟಿನ ಆಧುನಿಕ ಯುಗದ ಶ್ರೇಷ್ಠ ಆಟಗಾರ ವಿರಾಟ್‌ ಕೊಹ್ಲಿ ಅವರನ್ನು ಹೊಂದಿರುವ ತಂಡವಿದು. ಹಿಂದೆ ಗೇಲ್‌, ಎಬಿಡಿ ಅವರಂಥ ಸ್ಫೋಟಕ ಆಟಗಾರರಿದ್ದರು. ಆದರೂ ಗೆಲುವು ಮರೀಚಿಕೆಯೇ ಆಗಿದೆ. ಆ ಮೂರು ಫೈನಲ್‌ಗ‌ಳ ವೇಳೆ ಧೋನಿಯವರ ನಾಯಕತ್ವ ಹೊಂದಿದ್ದೇ ಆದಲ್ಲಿ ಆರ್‌ಸಿಬಿ ಖಂಡಿತವಾಗಿಯೂ ಕಪ್‌ ಗೆಲ್ಲುತ್ತಿತ್ತು’ ಎಂದಿದ್ದಾರೆ.

“ಧೋನಿ ಕ್ರಿಕೆಟ್‌ನ ವಿಶ್ವದ ಮಹಾನ್‌ ಹಾಗೂ ಜಾಣ ನಾಯಕರಲ್ಲೊಬ್ಬರು. ಅವರಿಗೆ ತಂಡವನ್ನು ಮುನ್ನಡೆಸುವುದೊಂದು ಹವ್ಯಾಸವೇ ಆಗಿದೆ. ಆಟಗಾರರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಅವರನ್ನು ಹೇಗೆ ಹುರಿದುಂಬಿಸಬೇಕು, ಅವರ ಆಟವನ್ನು ಹೇಗೆ ಹೊರತೆಗೆಯಬೇಕು ಎಂಬುದೆಲ್ಲ ಚೆನ್ನಾಗಿ ಕರಗತವಾಗಿದೆ. ಖಂಡಿತವಾಗಿಯೂ ಧೋನಿ ಕೂಲ್‌ ಅಲ್ಲ, ಹೊರಗಿನಿಂದ ಹಾಗೆ ತೋರಿಸಿಕೊಳ್ಳುತ್ತಾರೆ, ಅಷ್ಟೇ. ಆಟಗಾರರಲ್ಲಿ ಆತ್ಮವಿಶ್ವಾಸ ಮೂಡಿಸುವ ವಿಧಾನ ಅವರ ಹೆಚ್ಚುಗಾರಿಕೆ,’ ಎಂದು ಅಕ್ರಮ್‌ ಹೇಳಿದ್ದಾರೆ.

andolanait

Recent Posts

ಮಡಿಕೇರಿ ನ್ಯಾಯಾಲಯಕ್ಕೆ ಬಾಂಬ್‌ ಬೆದರಿಕೆ

ಮಡಿಕೇರಿ: ಮಡಿಕೇರಿ ನ್ಯಾಯಾಲಯಕ್ಕೆ ಬಾಂಬ್‌ ಬೆದರಿಕೆ ಕರೆ ಬಂದಿದ್ದು, ಸಿಬ್ಬಂದಿ ಕೆಲಕಾಲ ಆತಂಕ್ಕೀಡಾಗಿದ್ದರು. ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಬಾಂಬ್‌…

9 mins ago

ನಟ ದರ್ಶನ್‌ 49ನೇ ಹುಟ್ಟುಹಬ್ಬಕ್ಕೆ ಪತ್ನಿ ವಿಜಯಲಕ್ಷ್ಮೀ ಶುಭಾಶಯ

ನಟ ದರ್ಶನ್‌ ಅವರಿಗೆ ಇಂದು 49ನೇ ಹುಟ್ಟುಹಬ್ಬದ ಸಂಭ್ರಮ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ ಬೆಂಗಳೂರಿನ…

21 mins ago

ಹನೂರು| ಭೈರನತ್ತ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಣಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರನತ್ತ ಗ್ರಾಮದಲ್ಲಿ ಕಳೆದ…

41 mins ago

ಈಶಾ ಫೌಂಡೇಶನ್‌ ಬಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಅವಘಡ

ಚಿಕ್ಕಬಳ್ಳಾಪುರ: ಮಹಾಶಿವರಾತ್ರಿ ಸಂಭ್ರಮದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್‌ಗೆ ಆಗಮಿಸಿದ್ದರು. ಎಲ್ಲೆಡೆ ಶಿವನಾಮ ಸ್ಮರಣೆ ಕೇಳಿಬರುತ್ತಿದೆ. ಈ…

4 hours ago

ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಮತ್ತೆ ವಾಗ್ದಾಳಿ

ನವದೆಹಲಿ: ಭಾರತ-ಅಮೇರಿಕಾ ಮಧ್ಯಂತರ ವ್ಯಾಪಾರ ಒಪ್ಪಂದ ಕುರಿತು ಕೇಂದ್ರ ಸರ್ಕಾರದ ಒಪ್ಪಂದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕ…

4 hours ago

ಬಾಂಗ್ಲಾ ನೂತನ ಪ್ರಧಾನಿ ಪ್ರಮಾಣ ವಚನಕ್ಕೆ ಭಾರತದ ಪ್ರತಿನಿಧಿಯಾಗಿ ಸ್ಪೀಕರ್‌ ಓಂ ಬಿರ್ಲಾ

ನವದೆಹಲಿ: ಬಾಂಗ್ಲಾದೇಶದ ನೂತನ ಸರ್ಕಾರದ ಪ್ರಧಾನಿಯಾಗಿ ತಾರಿಕ್‌ ರೆಹಮಾನ್‌ ಅವರು ಪ್ರಮಾಣವಚನ ಸ್ವೀಕರಿಸಲಿರುವ ಕಾರ್ಯಕ್ರಮದಲ್ಲಿ ಭಾರತದ ಪರವಾಗಿ ಲೋಕಸಭಾ ಸ್ಪೀಕರ್‌…

4 hours ago