ಕ್ರೀಡೆ

ನಾನು ಇರ್ಫಾನ್‌ ಪಠಾಣ್‌ ಪ್ರೀತಿಸುತ್ತಿದ್ದಾಗ ಗೌತಮ್‌ ನನ್ನ ಹಿಂದೆ ಬಿದ್ದಿದ್ರು; ನಟಿಯ ʼಗಂಭೀರʼ ಆರೋಪ

ಕಳೆದ ಕೆಲ ದಿನಗಳ ಹಿಂದಷ್ಟೇ ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್‌ ಕಶ್ಯಪ್‌ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ನಟಿ ಪಾಯಲ್‌ ಘೋಷ್‌ ಇದೀಗ ಕ್ರಿಕೆಟಿಗರ ಬಗ್ಗೆಯೂ ಸಹ ಕಾಮೆಂಟ್‌ ಮಾಡಿದ್ದಾರೆ. ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಪಾಯಲ್‌ ಘೋಷ್‌ ಗೌತಮ್‌ ಗಂಭೀರ್‌ ತನ್ನ ಹಿಂದೆ ಬಿದ್ದಿದ್ದರು ಎಂಬುದಾಗಿ ಹೇಳಿಕೊಂಡಿದ್ದಾರೆ.

“ನಾನು 2011ರಿಂದ ಇರ್ಫಾನ್‌ ಪಠಾಣ್‌ ಜತೆ ಐದು ವರ್ಷಗಳ ಕಾಲ ಡೇಟ್‌ ಮಾಡಿದ್ದೆ. ಆ ಸಮಯದಲ್ಲಿ ನನ್ನ ಹಿಂದೆ ಗೌತಮ್‌ ಗಂಭೀರ್‌ ಹಾಗೂ ಅಕ್ಷಯ್‌ ಕುಮಾರ್‌ ಬಿದ್ದಿದ್ದರು. ಆದರೆ ನಾನು ಇರ್ಫಾನ್‌ ಪಠಾಣ್‌ ಅವರನ್ನು ಮಾತ್ರ ಪ್ರೀತಿಸಿದ್ದೆ. ನಾನು ಆತನನ್ನು ಬಿಟ್ಟು ಬೇರೆ ಯಾರನ್ನೂ ಸಹ ಇಷ್ಟಪಡಲಿಲ್ಲ. ನಾನು ಇರ್ಫಾನ್‌ ಪಠಾಣ್‌ಗೆ ಎಲ್ಲವನ್ನೂ ಹೇಳಿದ್ದೆ. ಗೌತಮ್‌ ಗಂಭೀರ್‌ ನನಗೆ ಕೊಟ್ಟಿದ್ದ ಮಿಸ್‌ ಕಾಲ್‌ಗಳನ್ನೂ ಸಹ ತೋರಿಸಿದ್ದೆ. ಇರ್ಫಾನ್‌ ಪಠಾಣ್‌ಗೂ ಸಹ ಇದು ಗೊತ್ತಿತ್ತು ಹಾಗೂ ಅವರು ಆಗಾಗ ನನ್ನ ಮೊಬೈಲ್‌ ಚೆಕ್‌ ಮಾಡುತ್ತಿದ್ದರು. ಪುಣೆಯಲ್ಲಿ ಒಂದು ದೇಶಿ ಕ್ರಿಕೆಟ್‌ ಪಂದ್ಯ ನಡೆಯುವಾಗ ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ ಹಾಗೂ ಯೂಸುಫ್‌ ಪಠಾಣ್‌ ಎದುರಿಗೆ ಇರ್ಫಾನ್‌ ಪಠಾಣ್‌ ಈ ಬಗ್ಗೆ ಮಾತನಾಡಿದ್ದರು. ಅಕ್ಷಯ್‌ ಕುಮಾರ್‌ ನನ್ನ ಜತೆ ಯಾವತ್ತೂ ಅನುಚಿತವಾಗಿ ವರ್ತಿಸಿಲ್ಲ, ಅವರು ದೊಡ್ಡ ಸ್ಟಾರ್.‌ ಅವರ ಬಗ್ಗೆ ನನಗೆ ಗೌರವವಿದೆ” ಎಂದು ಪಾಯಲ್‌ ಘೋಷ್‌ ಬರೆದುಕೊಂಡಿದ್ದಾರೆ.

andolana

Recent Posts

ಕಾಂಗ್ರೆಸ್‌ನಿಂದ ಎಂಎಲ್‌ಸಿ ಅಬ್ದುಲ್‌ ಜಬ್ಬಾರ್‌ ಅಮಾನತು

ಬೆಂಗಳೂರು: ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಅವರನ್ನು ಕಾಂಗ್ರೆಸ್‌ನಿಂದ ಅಮಾನತುಗೊಳಿಸಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಆದೇಶ ಹೊರಡಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ…

34 mins ago

ಬಿಹಾರದ ಮೊದಲ ಬಿಜೆಪಿ ಸಿಎಂ ಆಗಿ ಸಾಮ್ರಾಟ್‌ ಚೌಧರಿ ಪ್ರಮಾಣವಚನ ಸ್ವೀಕಾರ

ಪಾಟ್ನಾ: ಬಿಹಾರದ ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್‌ ಚೌಧರಿ ಪ್ರಮಾಣವಚನ ಸ್ವೀಕರಿಸಿದರು. ಪಾಟ್ನಾದ ಲೋಕಭವನದಲ್ಲಿ ರಾಜ್ಯಪಾಲ ಸೈಯದ್‌…

57 mins ago

ಶ್ರೀರಂಗಪಟ್ಟಣದ ಮುತ್ತು ಮಾರಮ್ಮ ದೇವಿ ಕರಗ: ಕೊಂಡದಲ್ಲಿ ಬಿದ್ದು ಇಬ್ಬರಿಗೆ ಗಾಯ

ಶ್ರೀರಂಗಪಟ್ಟಣ : ಶ್ರೀರಂಗಪಟ್ಟಣದ ಟೌನ್‌ನಲ್ಲಿ ನಡೆದ ಮುತ್ತು ಮಾರಮ್ಮ ದೇವಿ ಕರಗದ ವೇಳೆ ಕೊಂಡದಲ್ಲಿ ಬಿದ್ದು ಇಬ್ಬರು ಗಾಯಗೊಂಡ ಘಟನೆ…

2 hours ago

ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಮಂಡ್ಯ: ಜಿಲ್ಲೆಯ ನಾಗಮಂಗಲದ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬಹುಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ…

2 hours ago

ಅಂಡಮಾನ್‌ ಸಮುದ್ರದಲ್ಲಿ ಮುಳುಗಿದ ವಲಸಿಗರಿದ್ದ ದೋಣಿ: 250 ಜನ ಕಣ್ಮರೆ

ಢಾಕಾ: ಭಾರೀ ಬಿರುಗಾಳಿಯಿಂದ ಅಂಡಮಾನ್‌ ಸಮುದ್ರದಲ್ಲಿ ಜನದಟ್ಟಣೆಯಿಂದ ತುಂಬಿದ್ದ ದೋಣಿ ಮುಳುಗಿ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ…

3 hours ago

ಹನೂರು| ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ: ರೈತ ಮುಖಂಡರ ಆಕ್ರೋಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದ ನೀರಿನ…

3 hours ago