ಕ್ರೀಡೆ

ಏಕದಿನ ಪಂದ್ಯದಲ್ಲಿ ದ್ವಿಶತಕ: ಟೀಂ ಇಂಡಿಯಾ ಆಯ್ಕೆಗಾರರ ಬಗ್ಗೆ ಯೋಚಿಸಿಲ್ಲವೆಂದ ಪೃಥ್ವಿ ಶಾ!

ಲಂಡನ್: ಕೌಂಟಿ ಮೈದಾನದಲ್ಲಿ ನಡೆದ ಸಾಮರ್‌ಸೆಟ್ ವಿರುದ್ಧದ ಏಕದಿನ ಕಪ್ ಪಂದ್ಯದಲ್ಲಿ ನಾರ್ಥಾಂಪ್ಟನ್‌ಶೈರ್‌ಗಾಗಿ ಹಲವಾರು ಲಿಸ್ಟ್ ಎ ದಾಖಲೆಗಳನ್ನು ಮುರಿದ ಟೀಮ್ ಇಂಡಿಯಾದ ಡ್ಯಾಶಿಂಗ್ ಓಪನರ್ ಪೃಥ್ವಿ ಶಾ, ಟೀಂ ಇಂಡಿಯಾ ಆಯ್ಕೆ ಸಮಿತಿಯ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದರು.

ಪೃಥ್ವಿ ಶಾ ಅವರ ಬೃಹತ್ ಇನ್ನಿಂಗ್ಸ್ ಆಡಿದ್ದು 153 ಎಸೆತಗಳಲ್ಲಿ 28 ಬೌಂಡರಿ ಹಾಗೂ 11 ಸಿಕ್ಸರ್‌ಗಳ ನೆರವಿನಿಂದ 244 ರನ್ ಗಳಿಸಿದ್ದು ನಾರ್ಥಾಂಪ್ಟನ್‌ಶೈರ್ 8 ವಿಕೆಟ್‌ಗೆ 415 ರನ್ ಗಳಿಸಿ 87 ರನ್‌ಗಳ ಜಯ ಸಾಧಿಸಿತು. ಅವರ ಇನ್ನಿಂಗ್ಸ್ ಯಾವುದೇ ಲಿಸ್ಟ್ A ಪಂದ್ಯದಲ್ಲಿ ಆರನೇ ಅತಿ ಹೆಚ್ಚು ವೈಯಕ್ತಿಕ ದಾಖಲೆ ರನ್ ಆಗಿದೆ.

ಏಕದಿನದಲ್ಲಿ ದ್ವಿಶತಕ ಸಿಡಿಸಿದ ಪೃಥ್ವಿ ಶಾ : ಪೃಥ್ವಿ ಶಾ ನಾರ್ಥಾಂಪ್ಟನ್‌ಶೈರ್‌ಗೆ ಕೊನೆಯ ಎರಡು ಅವಕಾಶಗಳಲ್ಲಿ 34 ಮತ್ತು 26 ರನ್ ಗಳಿಸಿದರು. ನಂತರ ಗೇರ್ ಬದಲಾಯಿಸಿದ ಅವರು ಮೊದಲು 81 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ನಂತರ ಕೇವಲ 129 ಎಸೆತಗಳಲ್ಲಿ ದ್ವಿಶತಕ ಬಾರಿಸಿದರು.

ಪೃಥ್ವಿ ಶಾ, ‘ವಾಸ್ತವವಾಗಿ ಭಾರತೀಯ ಆಯ್ಕೆದಾರರು ಏನು ಯೋಚಿಸುತ್ತಾರೆ ಎಂದು ನಾನು ಯೋಚಿಸುತ್ತಿಲ್ಲ, ಆದರೆ ನಾನು ಇಲ್ಲಿ ಉತ್ತಮ ಸಮಯವನ್ನು ಕಳೆಯಲು ಬಯಸುತ್ತೇನೆ. ಇಲ್ಲಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲು ಬಯಸುತ್ತೇನೆ. ನಾರ್ಥಾಂಪ್ಟನ್‌ಶೈರ್ ನನಗೆ ಈ ಅವಕಾಶವನ್ನು ನೀಡಿದೆ. ಅವರು ನಿಜವಾಗಿಯೂ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ನಾನು ಅದನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ ಎಂದರು.

ಕೆಲವೊಮ್ಮೆ ನೀವು ಅದೃಷ್ಟವಂತರಾಗಿರಬೇಕು : ಪೃಥ್ವಿ ಶಾ, ‘ಅಲ್ಲಿ ಸೂರ್ಯನ ಬೆಳಕಿತ್ತು. ಒಂದು ಮಾದರಿ ಭಾರತೀಯ ಹವಾಗುಣ ಎದುರಾದಂತೆ ಕಂಡುಬಂದಿತು. ಇದೇ ಕಾರಣಕ್ಕೆ ಇನ್‌ಸೈಡ್‌ ಎಡ್ಜ್ ಆದರೂ ಕೂಡ ನಾನು ಔಟ್‌ ಆಗಲಿಲ್ಲ. ಆನಂತರ ನಾನು ಆತ್ಮವಿಶ್ವಾಸದಿಂದ ಆಡಲು ಶುರು ಮಾಡಿದೆ. ಕೆಲವೊಮ್ಮೆ ಈ ರೀತಿಯ ಅದೃಷ್ಟ ಕೈ ಹಿಡಿಯಬೇಕಾಗುತ್ತದೆ. ಇಂದು ಅದೃಷ್ಟ ನನ್ನದಾಗಿತ್ತು. ಅದನ್ನು ಬಳಸಿಕೊಂಡೆ ಎಂದು ಹೇಳಿಕೊಂಡಿದ್ದಾರೆ.

 

194 ರನ್‌ಗಳ ಬೃಹತ್ ಜೊತೆಯಾಟ : 2021ರ ಫೆಬ್ರವರಿಯಲ್ಲಿ ನಡೆದ ವಿಜಯ್ ಹಝಾರೆ ಟ್ರೋಫಿ ವೇಳೆ ಮುಂಬೈ ತಂಡದ ಪರ ಅಬ್ಬರಿಸಿದ್ದ ಪೃಥ್ವಿ ಶಾ 152 ಎಸೆತಗಳಲ್ಲಿ 227 ರನ್‌ ಬಾರಿಸಿದ್ದರು. ಇದೀಗ ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿನ ತಮ್ಮ ವೈಯಕ್ತಿಕ ರನ್ ಅನ್ನು ಮತ್ತಷ್ಟು ಸುಧಾರಿಸಿದ್ದಾರೆ.

andolanait

Recent Posts

ಸಂಪ್‌ಗೆ ಬಿದ್ದು ಎರಡು ವರ್ಷದ ಮಗು ಸಾವು

ಮಂಡ್ಯ: ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ…

9 hours ago

ಬಸ್-ಲಾರಿ ನಡುವೆ ಡಿಕ್ಕಿ; ಹಲವರಿಗೆ ಗಾಯ

ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ ಮೈಸೂರು-ಊಟಿ ರಸ್ತೆಯ ಗುಂಡ್ಲುಪೇಟೆ ತಾಲ್ಲೂಕಿನ ಮಳವಳ್ಳಿ ಗೇಟ್ ಬಳಿ ಗೂಡ್ಸ್ ಲಾರಿ ಹಾಗೂ ಕೆಎಸ್ಆರ್‌ಟಿಸಿ ಬಸ್…

9 hours ago

ಸಿಡಿಲು ಬಡಿದು ರೈತ ಸಾವು

ಬೆಟ್ಟದಪುರ: ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಸಂಗರಶೆಟ್ಟಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಎಸ್.ಟಿ.ಆನಂದ್ (೬೦)…

10 hours ago

ಟಾಟಾ ಏಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಗುಂಡ್ಲುಪೇಟೆ: ಟಾಟಾ ಏಸ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯ…

10 hours ago

ಒಂದು ವಾರ ವಿದೇಶಕ್ಕೆ ಹಾರಿದ ಪ್ರಧಾನಿ ಮೋದಿ: ಫ್ರಾನ್ಸ್, ಸ್ಲೋವಾಕಿಯಾ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಫ್ರಾನ್ಸ್ ಮತ್ತು ಸ್ಲೊವಾಕಿಯಾಕ್ಕೆ ಒಂದು ವಾರದ ಭೇಟಿಗಾಗಿ ತೆರಳಿದ್ದಾರೆ. ಈ ಸಂದರ್ಭದಲ್ಲಿ…

11 hours ago

ಉಡುಪಿ ಶ್ರೀಕೃಷ್ಣಮಠಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ

ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ…

12 hours ago