ಕ್ರೀಡೆ

ಏಕದಿನ ಪಂದ್ಯದಲ್ಲಿ ದ್ವಿಶತಕ: ಟೀಂ ಇಂಡಿಯಾ ಆಯ್ಕೆಗಾರರ ಬಗ್ಗೆ ಯೋಚಿಸಿಲ್ಲವೆಂದ ಪೃಥ್ವಿ ಶಾ!

ಲಂಡನ್: ಕೌಂಟಿ ಮೈದಾನದಲ್ಲಿ ನಡೆದ ಸಾಮರ್‌ಸೆಟ್ ವಿರುದ್ಧದ ಏಕದಿನ ಕಪ್ ಪಂದ್ಯದಲ್ಲಿ ನಾರ್ಥಾಂಪ್ಟನ್‌ಶೈರ್‌ಗಾಗಿ ಹಲವಾರು ಲಿಸ್ಟ್ ಎ ದಾಖಲೆಗಳನ್ನು ಮುರಿದ ಟೀಮ್ ಇಂಡಿಯಾದ ಡ್ಯಾಶಿಂಗ್ ಓಪನರ್ ಪೃಥ್ವಿ ಶಾ, ಟೀಂ ಇಂಡಿಯಾ ಆಯ್ಕೆ ಸಮಿತಿಯ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದರು.

ಪೃಥ್ವಿ ಶಾ ಅವರ ಬೃಹತ್ ಇನ್ನಿಂಗ್ಸ್ ಆಡಿದ್ದು 153 ಎಸೆತಗಳಲ್ಲಿ 28 ಬೌಂಡರಿ ಹಾಗೂ 11 ಸಿಕ್ಸರ್‌ಗಳ ನೆರವಿನಿಂದ 244 ರನ್ ಗಳಿಸಿದ್ದು ನಾರ್ಥಾಂಪ್ಟನ್‌ಶೈರ್ 8 ವಿಕೆಟ್‌ಗೆ 415 ರನ್ ಗಳಿಸಿ 87 ರನ್‌ಗಳ ಜಯ ಸಾಧಿಸಿತು. ಅವರ ಇನ್ನಿಂಗ್ಸ್ ಯಾವುದೇ ಲಿಸ್ಟ್ A ಪಂದ್ಯದಲ್ಲಿ ಆರನೇ ಅತಿ ಹೆಚ್ಚು ವೈಯಕ್ತಿಕ ದಾಖಲೆ ರನ್ ಆಗಿದೆ.

ಏಕದಿನದಲ್ಲಿ ದ್ವಿಶತಕ ಸಿಡಿಸಿದ ಪೃಥ್ವಿ ಶಾ : ಪೃಥ್ವಿ ಶಾ ನಾರ್ಥಾಂಪ್ಟನ್‌ಶೈರ್‌ಗೆ ಕೊನೆಯ ಎರಡು ಅವಕಾಶಗಳಲ್ಲಿ 34 ಮತ್ತು 26 ರನ್ ಗಳಿಸಿದರು. ನಂತರ ಗೇರ್ ಬದಲಾಯಿಸಿದ ಅವರು ಮೊದಲು 81 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ನಂತರ ಕೇವಲ 129 ಎಸೆತಗಳಲ್ಲಿ ದ್ವಿಶತಕ ಬಾರಿಸಿದರು.

ಪೃಥ್ವಿ ಶಾ, ‘ವಾಸ್ತವವಾಗಿ ಭಾರತೀಯ ಆಯ್ಕೆದಾರರು ಏನು ಯೋಚಿಸುತ್ತಾರೆ ಎಂದು ನಾನು ಯೋಚಿಸುತ್ತಿಲ್ಲ, ಆದರೆ ನಾನು ಇಲ್ಲಿ ಉತ್ತಮ ಸಮಯವನ್ನು ಕಳೆಯಲು ಬಯಸುತ್ತೇನೆ. ಇಲ್ಲಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲು ಬಯಸುತ್ತೇನೆ. ನಾರ್ಥಾಂಪ್ಟನ್‌ಶೈರ್ ನನಗೆ ಈ ಅವಕಾಶವನ್ನು ನೀಡಿದೆ. ಅವರು ನಿಜವಾಗಿಯೂ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ನಾನು ಅದನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ ಎಂದರು.

ಕೆಲವೊಮ್ಮೆ ನೀವು ಅದೃಷ್ಟವಂತರಾಗಿರಬೇಕು : ಪೃಥ್ವಿ ಶಾ, ‘ಅಲ್ಲಿ ಸೂರ್ಯನ ಬೆಳಕಿತ್ತು. ಒಂದು ಮಾದರಿ ಭಾರತೀಯ ಹವಾಗುಣ ಎದುರಾದಂತೆ ಕಂಡುಬಂದಿತು. ಇದೇ ಕಾರಣಕ್ಕೆ ಇನ್‌ಸೈಡ್‌ ಎಡ್ಜ್ ಆದರೂ ಕೂಡ ನಾನು ಔಟ್‌ ಆಗಲಿಲ್ಲ. ಆನಂತರ ನಾನು ಆತ್ಮವಿಶ್ವಾಸದಿಂದ ಆಡಲು ಶುರು ಮಾಡಿದೆ. ಕೆಲವೊಮ್ಮೆ ಈ ರೀತಿಯ ಅದೃಷ್ಟ ಕೈ ಹಿಡಿಯಬೇಕಾಗುತ್ತದೆ. ಇಂದು ಅದೃಷ್ಟ ನನ್ನದಾಗಿತ್ತು. ಅದನ್ನು ಬಳಸಿಕೊಂಡೆ ಎಂದು ಹೇಳಿಕೊಂಡಿದ್ದಾರೆ.

 

194 ರನ್‌ಗಳ ಬೃಹತ್ ಜೊತೆಯಾಟ : 2021ರ ಫೆಬ್ರವರಿಯಲ್ಲಿ ನಡೆದ ವಿಜಯ್ ಹಝಾರೆ ಟ್ರೋಫಿ ವೇಳೆ ಮುಂಬೈ ತಂಡದ ಪರ ಅಬ್ಬರಿಸಿದ್ದ ಪೃಥ್ವಿ ಶಾ 152 ಎಸೆತಗಳಲ್ಲಿ 227 ರನ್‌ ಬಾರಿಸಿದ್ದರು. ಇದೀಗ ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿನ ತಮ್ಮ ವೈಯಕ್ತಿಕ ರನ್ ಅನ್ನು ಮತ್ತಷ್ಟು ಸುಧಾರಿಸಿದ್ದಾರೆ.

andolanait

Recent Posts

ಕೊಲೆ | ಶವವನ್ನು ಪಾಳು ಮನೆ ಮುಂದೆ ಎಸೆದು ಹೋದ ದುಷ್ಕರ್ಮಿ

ಮಳವಳ್ಳಿ : ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಆತನ ಪಾಳು ಮನೆ ಮುಂದೆ ಎಸೆದು ಹೋಗಿರುವ ದುಷ್ಕೃತ್ಯವೊಂದು ಮಳವಳ್ಳಿ…

3 hours ago

ಟಿ-20 ವಿಶ್ವಕಪ್‌ : ಇಟಲಿ ಮಣಿಸಿ ದಾಖಲೆ ಬರೆದ ಸ್ಕಾಟ್ಲೆಂಡ್‌

ಕೋಲ್ಕತ್ತಾ : ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಸೋಮವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಇಟಲಿ ವಿರುದ್ಧ…

3 hours ago

ಈ ಊರಲ್ಲಿ ಕುಡಿದು ಗಲಾಟೆ ಮಾಡಿದ್ರೆ, ಹೆಣ್ಣು ಮಕ್ಕಳ ವಿಡಿಯೋ ಮಾಡಿದೆ ಬೀಳುತ್ತೆ 30 ಸಾವಿರ ದಂಡ

ನಂಜನಗೂಡು : ಗ್ರಾಮದೇವತೆ ಜಾತ್ರೇಲಿ ಕುಡಿದು ಗಲಾಟೆ ಮಾಡಿದ್ರೆ, ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ರೆ 30 ಸಾವಿರ ದಂಡ ವಿಧಿಸುವ…

3 hours ago

2027 ಸೆ.3ಕ್ಕೆ ಅಟ್ಲಾಂಟಾದಲ್ಲಿ 9ನೇ ನಾವಿಕ ವಿಶ್ವ ಸಮ್ಮೇಳನ

ಬೆಂಗಳೂರು : ದುಬೈನ ಕರ್ನಾಟಕ ಸಂಘದೊಂದಿಗೆ ನವೆಂಬರ್ 22 ರಂದು ನಾವಿಕ ರಾಜ್ಯೋತ್ಸವ ಮತ್ತು ನಾಟಕೋತ್ಸವವನ್ನು ಆಯೋಜಿಸಲಾಗಿದೆ ಎಂದು ನಾವು…

4 hours ago

ಉಕ್ಕು ಉದ್ಯಮಕ್ಕೆ ಮತ್ತಷ್ಟು ಬಲ ; ₹11,887 ಕೋಟಿ ಹೂಡಿಕೆ

ಹೊಸದಿಲ್ಲಿ : ಭಾರತ ಸರ್ಕಾರವು ಸ್ಪೆಶಾಲಿಟಿ ಸ್ಟೀಲ್ (ವಿಶೇಷ ಉಕ್ಕು) ಉತ್ಪಾದನೆಗೆ ಸಂಬಂಧಿಸಿ ಹೊಸದಾಗಿ ಉತ್ತೇಜನಾ (ಪಿಎಲ್ಐ) ಯೋಜನೆ 1.2…

4 hours ago

ಬಂಡೀಪುರದಲ್ಲಿ ಅಂತರಾಷ್ಟ್ರೀಯ ಬಿಗ್‌ ಕ್ಯಾಟ್‌ ಶೃಂಗಸಭೆ : 23 ದೇಶದ ವಿಜ್ಞಾನಿಗಳು ಭಾಗಿ

ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿಯಲ್ಲಿ ಅಂತರಾಷ್ಟ್ರೀಯ ಬಿಗ್ ಕ್ಯಾಟ್ಸ್ ಅಲಯನ್ಸ್ ಶೃಂಗಸಭೆಯಲ್ಲಿಂದು…

5 hours ago