ಕ್ರೀಡೆ

ಸ್ಮೃತಿ ಮಂಧಾನಗೆ ಭಾವಿ ಪತಿಯಿಂದ ಮೋಸ ಆಗಿದ್ಯಾ..? ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ; ಆರ್‌ಸಿಬಿ ನಾಯಕಿ ಭಾವುಕ

ಬೆಂಗಳೂರು : ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ನಾಯಕಿ, ಕನ್ನಡಿಗರ ಮನೆಗೆ ಮೊದಲ ಬಾರಿಗೆ ಐಪಿಎಲ್ ಕಪ್ ಗೆಲ್ಲಿಸಿ ಕೊಟ್ಟಿದ್ದ ಸ್ಮೃತಿ ಮಂಧಾನ ಜೀವನ ಅಲ್ಲೋಲ ಕಲ್ಲೋಲ ಆಗಿ ಹೋಗಿದೆ. ಸ್ಮೃತಿ ಮಂಧಾನ ಮದುವೆ ದಿಢೀರ್ ನಿಂತು ಹೋದ ನಂತರ ಭಾರಿ ದೊಡ್ಡ ಸಂಚಲನ ಕೂಡ ಸೃಷ್ಟಿಯಾಗಿದೆ. ಸ್ಮೃತಿ ಮಂಧಾನ ಅಭಿಮಾನಿಗಳು ಕೂಡ ಈಗ ಕಣ್ಣೀರು ಹಾಕುತ್ತಾ, ತಮ್ಮ ನೆಚ್ಚಿನ ಆಟಗಾರ್ತಿಗೆ ಮೋಸ ಆಯ್ತಲ್ಲಾ ಅಂತಾ ಭಾವುಕರಾಗಿದ್ದಾರೆ.

ಇಂತಹ ಸಮಯದಲ್ಲೇ ಆರ್‌ಸಿಬಿ ನಾಯಕಿ ತಂದೆಯ ಸಾವು ಬದುಕಿನ ಹೋರಾಟ, ಭಾವಿ ಗಂಡನಿಂದನೇ ಮಹಾನ್ ಮೋಸ ಆಗಿದ್ಯಾ? ಎಂಬ ಚರ್ಚೆಯಾಗುತ್ತಿವೆ.

ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರರೂ ಆಗಿರುವ ಸ್ಮೃತಿ ಮಂಧಾನ, ಮಹಿಳಾ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಅಂತಾ ಅಭಿಮಾನಿಗಳು ಹೊಗಳುತ್ತಾರೆ. ಹೀಗೆಲ್ಲಾ ಭಾರಿ ದೊಡ್ಡ ಹೆಸರು ಮಾಡಿರುವ ಸ್ಮೃತಿ ಮಂಧಾನ ಅವರ ಮದುವೆ ದಿಢೀರ್ ಮುರಿದು ಹೋಗಿತ್ತು, ಆ ನಂತರ ಸಂಚಲನ ಸೃಷ್ಟಿಯಾಗಿತ್ತು. ಅಲ್ಲದೆ ಭಾವಿ ಗಂಡನಿಗೆ ಬೇರೆ ಬೇರೆ ಹುಡುಗಿಯರ ಜೊತೆ ಆತ್ಮೀಯ ಸ್ನೇಹ ಇತ್ತು ಎಂಬ ಆರೋಪ ಕೇಳಿಬಂದಿತ್ತು.

ಹೌದು, ಸ್ಮೃತಿ ಮಂಧಾನ ಅವರು ತಮ್ಮ ಮದುವೆ ನಿಂತು ಹೋದ ನಂತರ ಹೊರಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸ್ಮೃತಿ ಮಂಧಾನ ಮನೆಯಲ್ಲೇ ಕೂತು ಕಣ್ಣೀರು ಹಾಕುತ್ತಿದ್ದಾರೆ, ಭಾವುಕರಾಗಿ ಅಳುತ್ತಿದ್ದಾರೆ ಎಂಬ ಸುದ್ದಿಗಳು ಅವರ ಅಭಿಮಾನಿಗಳ ಎದೆಯಲ್ಲಿ ತಲ್ಲಣದ ಬೆಂಕಿ ಜ್ವಾಲೆಯನ್ನೇ ಸೃಷ್ಟಿಸಿವೆ. ಹೀಗಿದ್ದಾಗಲೇ ಆರ್‌ಸಿಬಿ ನಾಯಕಿ ತಂದೆಯ ಸಾವು- ಬದುಕಿನ ಹೋರಾಟ, ಭಾವಿ ಗಂಡನಿಂದನೇ ಮಹಾನ್ ಮೋಸ ಆಗಿದ್ಯಾ ಎಂದು ಚರ್ಚೆಯಾಗುತ್ತಿದೆ.

ಸ್ಮೃತಿ ಮಂಧಾನ ಅವರಿಗೆ ಮಹಾಮೋಸ ಆಯ್ತಾ…

ಕನ್ನಡಿಗರ ಮನೆ ಮಗಳು ಸ್ಮೃತಿ ಮಂಧಾನ ಅವರಿಗೆ ಇದೀಗ ಮಹಾನ್ ಮೋಸ ಆಗಿದೆ ಎಂಬ ಆರೋಪವನ್ನ ಮಾಡಲಾಗುತ್ತಿದೆ. ಅದರಲ್ಲೂ ಆರ್‌ಸಿಬಿ ನಾಯಕಿ ತಂದೆಯು ಆಸ್ಪತ್ರೆಯಿಂದ ಮನೆಗೆ ವಾಪಸ್ ಬಂದಿದ್ದರೂ, ಸ್ಮೃತಿ ಮಂಧಾನ ಅವರ ತಂದೆ ಆರೋಗ್ಯ ತುಂಬಾ ಸೂಕ್ಷ್ಮವಾಗಿದೆ ಎಂಬ ವರದಿಗಳು ಮತ್ತಷ್ಟು ಚಿಂತೆ ತರಿಸಿವೆ. ಇಷ್ಟೆಲ್ಲಾ ಆತಂಕ ಹುಟ್ಟಿಸುವ ಗಾಳಿ ಸುದ್ದಿಗಳ ನಡುವೆಯೇ, ಭಾವಿ ಗಂಡನಿಂದನೇ ಮಹಾನ್ ಮೋಸ ಆಗಿದ್ಯಾ? ಎಂಬ ಚರ್ಚೆ ಕೂಡ ಜೋರಾಗಿದೆ. ಅಂದಹಾಗೆ ಸ್ಮೃತಿ ಮಂಧಾನ ಅವರು ಮದುವೆ ಆಗಬೇಕಿದ್ದ ಹುಡುಗ ಅಂದರೆ ಸ್ಮೃತಿ ಮಂಧಾನ ಅವರ ಭಾವಿ ಗಂಡ ಹಾರ್ದಿಕ್ ಪಾಂಡ್ಯ ಮಾಜಿ ಹೆಂಡತಿಯ ಜೊತೆಗೆ ರಾತ್ರಿ ವೇಳೆ ಕಾರಿನಲ್ಲಿ ಕುಳಿತು ಹಾಡು ಹೇಳುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ ಈ ವಿಡಿಯೋ ಹಳೆಯದ್ದು ಎಂಬ ವಿಚಾರ ಗೊತ್ತಾದ ನಂತರ ಕೂಡ, ಇದೀಗ ಬೇರೆ ಬೇರೆ ಹುಡುಗಿ ಜೊತೆಗೆ ಅವರಿಗೆ ಆತ್ಮೀಯ ಸ್ನೇಹ ಇತ್ತು ಎಂಬ ಆರೋಪವನ್ನ ಸೋಷಿಯಲ್ ಮೀಡಿಯಾದಲ್ಲಿ ಈಗ ಮಾಡಲಾಗುತ್ತಿದೆ.

ಏನದು ಸ್ಕ್ರೀನ್‌ಶಾಟ್‌?

ಪಲಾಶ್ ಮತ್ತು ಮೇರಿ ಡಿ’ಕೋಸ್ಟಾ ಎಂಬ ಮಹಿಳೆಯ ನಡುವೆ ನಡೆದ ಚಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮೇರಿ ಡಿ’ಕೋಸ್ಟಾ ಸ್ವತಃ, ಪಲಾಶ್ ಮೇ 2025 ರಲ್ಲಿ ತನ್ನೊಂದಿಗೆ ಫ್ಲರ್ಟ್ ಮಾಡಲು ಪ್ರಯತ್ನಿಸಿದ್ದರು ಎಂದು ಬಹಿರಂಗಪಡಿಸಿದರು. ಆದಾಗ್ಯೂ, ಮೇರಿ ತಾನು ಪಲಾಶ್ ಅವರನ್ನು ಎಂದಿಗೂ ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ. ಈಗ, ಪಲಾಶ್‌ಗೆ ಸಂಬಂಧಿಸಿದ ಹಲವಾರು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಆದರೆ, ಈ ಬಗ್ಗೆ ಸ್ಮೃತಿ ಮತ್ತು ಪಲಾಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆಂದೋಲನ ಡೆಸ್ಕ್

Recent Posts

ಉಡುತೊರೆ ಹಳ್ಳ ಜಲಾಶಯದ 490 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ: ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಿದ ಪುಟಾಣಿಗಳು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಉಡುತೊರೆ ಹಳ್ಳ ಜಲಾಶಯ ಸೇರಿದಂತೆ ಪ್ರಮುಖ ಕೆರೆಕಟ್ಟೆಗಳಿಗೆ ಕಾವೇರಿ…

1 hour ago

ಹನೂರು| ಕುಡಿಯುವ ನೀರಿನ ಸಮಸ್ಯೆ ಉದ್ಭವ: ಅಧಿಕಾರಿಗಳ ವಿರುದ್ಧವೇ ದೂರು ನೀಡಿದ ಗ್ರಾಮಸ್ಥರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಸಂಬಂಧಪಟ್ಟವರು ಸರಿಯಾಗಿ ಸ್ಪಂದಿಸುತ್ತಿಲ್ಲ.…

2 hours ago

ಯಾವುದೇ ಕಾರಣಕ್ಕೂ ಟಿ.ನರಸೀಪುರ ರೇಷ್ಮೆ ಕಾರ್ಖಾನೆ ಮುಚ್ಚಲ್ಲ: ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಕ್ರೀಡಾಂಗಣಕ್ಕಾಗಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಈ ಕುರಿತು ಮಾತನಾಡಿದ…

3 hours ago

ಹಾಸನ: ಕೆರೆಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಹಾಸನ: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಜಿಲ್ಲೆಯ ಆಲೂರು…

3 hours ago

ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದ ಸಾರಂಗ: ಅರಣ್ಯ ಇಲಾಖೆಯಿಂದ ರಕ್ಷಣೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಿಸಿಲ ಬೇಗೆ ತಾಳಲಾರದೆ ನೀರು ಕುಡಿಯಲು ಹೋದ ಸಾರಂಗ ಕೆಸರು…

3 hours ago

ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯ ಮುಂಚೂಣಿಯಲ್ಲಿದೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಮುಂದಿನ ಎರಡು ವರ್ಷಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳ ಅಭಿವೃದ್ಧಿಗಿಂತ ಮುಂಚೂಣಿಯಲ್ಲಿರಲಿದ್ದು, ಇದಕ್ಕೆ ಶ್ರಮಿಸುತ್ತಿರುವ ಸ್ಥಳೀಯ…

3 hours ago