ಬೆಂಗಳೂರು : ಆಧುನಿಕ ಗರಡಿ ಮನೆ ತಗಡಾ ರಹೋಗೆ ಫಿಟ್ನೆಸ್ ಸ್ಟಾರ್ಟಪ್ ಗೆ ಮಹೇಂದ್ರ ಸಿಂಗ್ ಧೋನಿ ಹೂಡಿಕೆ ಮಾಡಲಿದ್ದಾರೆ. ತಗ್ಡಾ ರಹೋ ವ್ಯಾಯಾಮ ಶಾಲೆಯು ಸಾಂಪ್ರದಾಯಿಕ ಶೈಲಿಯ ವ್ಯಾಯಾಮ ಪದ್ದತಿಗೆ ಆಧುನಿಕ ಸ್ಪರ್ಷ ನೀಡುವ ಕಂಪನಿಯಾಗಿದೆ.
ಈ ಬಗ್ಗೆ ಮಾತನಾಡಿರುವ ಮಹೇಂದ್ರ ಸಿಂಗ್ ಧೋನಿ ತಗ್ಡಾ ರಹೋ ತುಂಬಾ ಕುತೂಹಲಕಾರಿ ಎನಿಸುತ್ತದೆ. ಜನರು ಮರೆತು ಹೋಗಿರುವ ದೈಹಿಕ ಕಸರತ್ತನ್ನು ಮರಳಿ ತರುತ್ತಿದೆ ಎಂದಿದ್ದಾರೆ.
ತಗ್ಡಾ ರಹೋ ಮಾದರಿಯ ತರಬೇತಿಯನ್ನು ಈಗಾಗಲೇ ಲಕ್ನೋ ಸೂಪರ್ ಜೇಂಟ್ಸ್ ಹರ್ಯಾಣ ಸ್ಟೀಲರ್ಸ್ ಕಬಡ್ಡಿ ತಂಡ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.
ಸಾಂಪ್ರದಾಯಿಕ ಗರಡಿಮನೆಗಳಲ್ಲಿರುವ ವ್ಯಾಯಾಮ ಸಲಕರಣೆಗಳನ್ನು ಬಳಸಿ ಫಿಟ್ನೆಸ್ ತರಬೇತಿ ಕೊಡಲಾಗುತ್ತದೆ.
ಈ ರೀತಿಯ ವ್ಯಾಯಾಮ ಶಾಲೆಯನ್ನು ಮನಿಶ್ ಮಲ್ಹೋತ್ರಾ ಅವರು ಸ್ಥಾಪನೆ ಮಾಡಿದ್ದಾರೆ. ಇದರ ಮುಖ್ಯ ಶಾಖೆಯು ಬೆಂಗಳೂರಿನಲ್ಲಿದೆ.
ಇದರ ತರಬೇತಿ ಕೇಂದ್ರಗಳನ್ನು ಡಗ್ ಔಟ್ ಎಂದು ಕರೆಯಲಾಗುತ್ತದೆ. ಈಗಾಗಲೇ ಇದರಲ್ಲಿ ಬಹಳ ಜನರು ತರಬೇತಿ ಪಡೆದುಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಅಲಸೂರಿನ ಎಸ್ ಯುಎಫ್ಸಿ ಗ್ರೌಂಡ್ಸ್ ಹಾಗೂ ಎಚ್ಎಸ್ಆರ್ ಲೇಔಟ್ ನಲ್ಲಿ ಇದರ ಎರಡು ಶಾಖೆಗಳಿವೆ.
ಇಲ್ಲಿ ಗರಡಿ ಮನೆಯಲ್ಲಿ ಬಳಸಲಾಗುತ್ತಿದ್ದ ಸಾಂಪ್ರದಾಯಿಕ ಸಲಕರಣೆಗಳನ್ನು ಬಳಸಿಕೊಂಡು ಆಧುನಿಕ ಶೈಲಿಯ ವ್ಯಾಯಾಮವನ್ನು ಕಲಿಸಲಾಗುತ್ತದೆ.
ಮುಂದಿನ ವರ್ದಲ್ಲಿ ನಾಲ್ಕರಿಂದ ಐದು ರಾಜ್ಯಗಳಿಗೆ ಈ ಡಗ್ ಹೌಸ್ ವ್ಯವಾಹರವನ್ನು ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗಿದೆ.
ಹುಣಸೂರು: ತಾಲ್ಲೂಕಿನ ಬಿಳಿಕೆರೆ ಗ್ರಾಮದ ಕೆರೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಡಿಶಾ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿಕೊಂಡು ನಿತ್ರಾಣಗೊಂಡಿದ್ದ ಹೆಣ್ಣಾನೆ ಚಿಕಿತ್ಸೆಗೆ…
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಳೆ ಮತದಾನ ನಡೆಯಲಿದೆ. ನಾಳೆ ಉತ್ತರ ಬಂಗಾಳದ ಎಲ್ಲಾ 152…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಕ್ಕಾಗಿ ಚುನಾವಣಾ ಆಯೋಗವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ…
ಬೆಂಗಳೂರು: ನಾಳೆ ಮಧ್ಯಾಹ್ನ 12 ಗಂಟೆಗೆ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.…
ನವದೆಹಲಿ: ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರ ಸ್ಥಳಾಂತರ ನಿರ್ಧಾರವನ್ನು ಪ್ರಸಾರ ಭಾರತಿ ಹಿಂತೆಗೆದುಕೊಂಡಿದೆ. ಉತ್ತರ ಕರ್ನಾಟಕ ಜನರ ಒತ್ತಾಸೆ, ಅಭಿಲಾಷೆಯಂತೆ…