ಕ್ರೀಡೆ

ಚಾಂಪಿಯನ್ಸ್‌ ಟ್ರೋಫಿ: ಫೈನಲ್‌ ಪ್ರವೇಶಿಸಿದ ಭಾರತ

ದುಬೈ: ಚೇಸಿಂಗ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ 84(98), ಅವರ ಅತ್ಯಮೂಲ ಅರ್ಧಶತಕದ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೊದಲ ತಂಡವಾಗಿ ಫೈನಲ್‌ ಪ್ರವೇಶಿಸಿದೆ.

ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ತಂಡ 49.3 ಓವರ್‌ಗಳಲ್ಲಿ 264 ರನ್‌ಗೆ ಆಲೌಟ್‌ ಆಯಿತು. ತಂಡದ ಪರ ಆರಂಭಿಕ ಆಟಗಾರ ಟ್ರಾವಿಸ್‌ ಹೆಡ್‌ 39(33) ಬಿರುಸಿನ ಆರಂಭ ನೀಡಿದರು. ನಂತರ, ನಾಯಕ ಸ್ಟೀವ್‌ ಸ್ಮಿತ್‌ 73(96) ಹಾಗೂ ಅಲೆಕ್ಸ್‌ ಕ್ಯಾರಿ 61(57) ಇಬ್ಬರು ಅರ್ಧಶತಕ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ.

ಭಾರತ ತಂಡದ ಪರ ಮೊಹಮ್ಮದ್‌ ಶಮಿ 3 ವಿಕೆಟ್‌ ಪಡೆದರೆ, ವರುಣ್‌ ಚಕ್ರವರ್ತಿ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್‌ ಹಾಗೂ ಹಾರ್ದಿಕ್‌ ಮತ್ತು ಅಕ್ಷರ್‌ ತಲಾ ಒಂದು ವಿಕೆಟ್‌ ಪಡೆದರು.

ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಭಾರತ ತಂಡ 48.1 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 267 ರನ್‌ ಬಾರಿಸುವ ಮೂಲಕ ಫೈನಲ್‌ ತಲುಪಿತು.

ವಿರಾಟ್‌ ಕೊಹ್ಲಿ 84(98), ಶ್ರೇಯಸ್‌ ಅಯ್ಯರ್‌ 45(62), ಕೆಎಲ್‌ ರಾಹುಲ್‌ ಔಟಗದೇ 42(34), ಹಾರ್ದಿಕ್‌ ಪಾಂಡ್ಯ  28(24) ರನ್‌ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.

ಆಸ್ಟ್ರೇಲಿಯಾ ತಂಡದ ಪರ ನಾಥನ್‌ ಎಲ್ಲಿಸ್‌ ಮತ್ತು ಆಡಂ ಜಂಪಾ ತಲಾ 2 ವಿಕೆಟ್‌ ಪಡೆದರೆ, ಉಳಿದಂತೆ ಡ್ವಾರ್ಶಿಸ್‌ ಮತ್ತು ಕೊನೊಲಿ ತಲಾ ಒಂದು ವಿಕೆಟ್‌ ಪಡೆದರು.

ಆಂದೋಲನ ಡೆಸ್ಕ್

Recent Posts

ಪೋಕ್ಸೋ ಕೇಸ್‌| ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪಗೆ ಬಿಗ್‌ ರಿಲೀಫ್‌: ‌ಸೆಷನ್ಸ್‌ ಕೋರ್ಟ್‌ ಸಮನ್ಸ್‌ ಆದೇಶಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್‌ ಕೋರ್ಟ್‌ ನೀಡಿರುವ ಸಮನ್ಸ್ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ಹೊರಡಿಸಿದ್ದು, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ…

21 mins ago

ಕ್ಯಾತಮಾರನಹಳ್ಳಿ ಮಸೀದಿ ಬಂದ್‌ ವಿಚಾರ: ಮೈಸೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ

ಮೈಸೂರು: ಕ್ಯಾತಮಾರನಹಳ್ಳಿ ಮಸೀದಿ ಬಂದ್‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಸೂಚನೆ ಮೇರೆಗೆ ಇಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ…

33 mins ago

ರಾಜ್ಯ ಸರ್ಕಾರದಿಂದ ವಿಮಾ ಮೊತ್ತ ಏರಿಕೆ ಮಾಡಲು ಚಿಂತನೆ: ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು: ರಾಜ್ಯ ಸರ್ಕಾರದಿಂದ ಬಿಪಿಎಲ್‌ ಕಾರ್ಡ್‌ ಹೊಂದಿದ ವಿಕಲಚೇತನರಿಗೆ ಮುಂರುವ ದಿನಗಳಲ್ಲಿ ವಿಮಾ ಮೊತ್ತನ್ನು ಐದು ಲಕ್ಷ ರೂ.ಗೆ ಏರಿಕೆ…

49 mins ago

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್:‌ ತಪ್ಪೊಪ್ಪಿಕೊಂಡ ನಟಿ ರನ್ಯಾ ರಾವ್‌

ಬೆಂಗಳೂರು: ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಪಡೆದುಕೊಳ್ಳುತ್ತಿದ್ದು, ಆರೋಪಿ ರನ್ಯಾ ರಾವ್‌ ಈಗ ತಪ್ಪೊಪ್ಪಿಕೊಂಡಿದ್ದಾರೆ ಎಂಬ…

59 mins ago

ಚಂಡೀಗಢ: ಅಪರಿಚಿತ ವ್ಯಕ್ತಿಗಳಿಂದ ಶಿವಸೇನಾ ನಾಯಕನ ಹತ್ಯೆ

ಚಂಡೀಗಢ: ಬೈಕ್‌ನಲ್ಲಿ ಬೆನ್ನಟ್ಟಿ ಶಿವಸೇನಾ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ಮೊಗಾದಲ್ಲಿ ನಡೆದಿದೆ. ದಾಳಿಯಲ್ಲಿ ಓರ್ವ ಬಾಲಕ…

1 hour ago

ಅಪ್ಪು ಸಿನಿಮಾ ರಿ-ರಿಲೀಸ್‌: ಅಭಿಮಾನಿಗಳೊಂದಿಗೆ ತನ್ನದೇ ಚಿತ್ರ ವೀಕ್ಷಿಸಿದ ರಕ್ಷಿತಾ

ಬೆಂಗಳೂರು: ದಿವಂಗತ ನಟ ಪುನೀತ್‌ ರಾಜ್‌ ಕುಮಾರ್‌ ಅವರ 50 ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ಸಿನಿಮಾ ರಿ-ರಿಲೀಸ್‌…

1 hour ago