ಕ್ರೀಡೆ

ಭಾರತ vs ಆಸ್ಟ್ರೇಲಿಯಾ ದ್ವಿತೀಯ ಟೆಸ್ಟ್:‌ ಹೀನಾಯ ಸೋಲು ಕಂಡ ಟೀಮ್‌ ಇಂಡಿಯಾ

ಅಡಿಲೇಡ್‌ ಓವಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್‌ ಗವಾಸ್ಕರ್ ಟ್ರೋಫಿಯ ದ್ವಿತೀಯ ಪಂದ್ಯದಲ್ಲಿ ಟೀಮ್‌ ಇಂಡಿಯಾ ಹೀನಾಯ ಸೋಲನ್ನು ಕಂಡು ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿನ ತನ್ನ ಕಳಪೆ ಅಭಿಯಾನವನ್ನು ಮುಂದುವರಿಸಿದೆ.

ಮೊದಲ ಇನ್ನಿಂಗ್ಸ್‌ ಹಾಗೂ ಎರಡನೇ ಇನ್ನಿಂಗ್ಸ್‌ ಎರಡರಲ್ಲೂ ಕಳಪೆ ಪ್ರದರ್ಶನ ನೀಡಿದ ಭಾರತ ಆಸ್ಟ್ರೇಲಿಯಾಗೆ 19 ರನ್‌ಗಳ ಗುರಿಯನ್ನು ನೀಡಿತ್ತು. ಈ ಅತ್ಯಲ್ಪ ಗುರಿಯನ್ನು ಯಾವುದೇ ವಿಕೆಟ್‌ ಕಳೆದುಕೊಳ್ಳದೇ ಬಾರಿಸಿದ ಆಸ್ಟ್ರೇಲಿಯಾ 10 ವಿಕೆಟ್‌ಗಳ ಭರ್ಜರಿ ಗೆಲುವನ್ನು ಕಂಡು ಪರ್ತ್‌ ಟೆಸ್ಟ್‌ ಸೋಲಿಗೆ ಸೇಡು ತೀರಿಸಿಕೊಂಡಿದೆ. ಈ ಮೂಲಕ 5 ಪಂದ್ಯಗಳ ಈ ಸರಣಿ 1-1 ಸಮಬಲ ಸಾಧಿಸಿದೆ.

ಸ್ಕೋರ್‌ಕಾರ್ಡ್‌ ಮುಂದಿದೆ:

ಭಾರತದ ಮೊದಲ ಇನ್ನಿಂಗ್ಸ್ (180/10): ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ ಡಕ್‌ಔಟ್‌ ಆದರೆ, ಕೆಎಲ್‌ ರಾಹುಲ್‌ 37 ರನ್ ಗಳಿಸಿದರು. ಇನ್ನುಳಿದಂತೆ ಶುಭ್‌ಮನ್‌ ಗಿಲ್‌ 31, ವಿರಾಟ್ ಕೊಹ್ಲಿ 7, ರಿಷಭ್‌ ಪಂತ್‌ 21, ರೋಹಿತ್‌ ಶರ್ಮಾ 3, ನಿತಿಶ್‌ ರೆಡ್ಡಿ 42, ರವಿಚಂದ್ರನ್‌ ಅಶ್ವಿನ್‌ 22, ಹರ್ಷಿತ್‌ ರಾಣಾ ಡಕ್‌ಔಟ್‌, ಜಸ್‌ಪ್ರೀತ್‌ ಬುಮ್ರಾ ಡಕ್‌ಔಟ್‌ ಮತ್ತು ಮೊಹಮ್ಮದ್‌ ಸಿರಾಜ್‌ ಅಜೇಯ 4 ರನ್‌ ಕಲೆಹಾಕಿದರು.

ಆಸ್ಟ್ರೇಲಿಯಾ ಪರ ಮಿಚೆಲ್‌ ಸ್ಟಾರ್ಕ್‌ 6 ವಿಕೆಟ್‌ ಪಡೆದು ಭಾರತದ ಪಾಲಿಗೆ ಕಂಟಕವಾಗಿ ಪರಿಣಮಿಸಿದರೆ, ಪ್ಯಾಟ್‌ ಕಮಿನ್ಸ್‌ ಹಾಗೂ ಬೋಲ್ಯಾಂಡ್‌ ತಲಾ ಎರಡು ವಿಕೆಟ್‌ ಪಡೆದರು.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ (337/10):‌ ಉಸ್ಮಾನ್‌ ಖವಾಜಾ 13, ಮೆಕ್‌ಸ್ವೀನಿ 39, ಲ್ಯಾಬುಶೆನ್‌ 64, ಸ್ಟೀವನ್‌ ಸ್ಮಿತ್‌ 2, ಟ್ರಾವಿಸ್‌ ಹೆಡ್‌ 141, ಮಿಚೆಲ್‌ ಮಾರ್ಷ್‌ 9, ಅಲೆಕ್ಸ್‌ ಕ್ಯಾರಿ 15, ಪ್ಯಾಟ್‌ ಕಮಿನ್ಸ್‌ 12, ಮಿಚೆಲ್‌ ಸ್ಟಾರ್ಕ್‌ 18, ಬೋಲಾಂಡ್‌ ಡಕ್‌ಔಟ್‌ ಹಾಗೂ ನಾಥನ್‌ ಲಿಯಾನ್‌ ಅಜೇಯ 4 ರನ್‌ ಗಳಿಸಿದರು.

ಭಾರತದ ಪರ ಜಸ್‌ಪ್ರೀತ್‌ ಬುಮ್ರಾ 4 ವಿಕೆಟ್‌, ಮೊಹಮ್ಮದ್‌ ಸಿರಾಜ್‌ 4 ವಿಕೆಟ್‌, ನಿತಿಶ್‌ ರೆಡ್ಡಿ ಹಾಗೂ ರವಿಚಂದ್ರನ್‌ ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಭಾರತ ಎರಡನೇ ಇನ್ನಿಂಗ್ಸ್:‌ ಯಶಸ್ವಿ ಜೈಸ್ವಾಲ್‌ 24, ಕೆಎಲ್‌ ರಾಹುಲ್‌ 7, ಶುಭ್‌ಮನ್‌ ಗಿಲ್‌ 28, ವಿರಾಟ್‌ ಕೊಹ್ಲಿ 11, ರೋಹಿತ್‌ ಶರ್ಮಾ 6, ರಿಷಭ್‌ ಪಂತ್‌ 28, ನಿತಿಶ್‌ ರೆಡ್ಡಿ 42, ರವಿಚಂದ್ರನ್‌ ಅಶ್ವಿನ್‌ 7, ಹರ್ಷಿತ್‌ ರಾಣಾ ಡಕ್‌ಔಟ್‌, ಮೊಹಮ್ಮದ್‌ ಸಿರಾಜ್ 7 ಮತ್ತು ಜಸ್‌ಪ್ರೀತ್‌ ಬುಮ್ರಾ ಅಜೇಯ 2 ರನ್‌ ಗಳಿಸಿದರು.

ಆಸ್ಟ್ರೇಲಿಯಾ ಪರ ನಾಯಕ ಪ್ಯಾಟ್‌ ಕಮಿನ್ಸ್‌ 5 ವಿಕೆಟ್‌, ಸ್ಕಾಟ್‌ ಬೋಲ್ಯಾಂಡ್‌ 3 ಮತ್ತು ಮಿಚೆಲ್‌ ಸ್ಟಾರ್ಕ್‌ 2 ವಿಕೆಟ್‌ ಪಡೆದರು.

ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ ( 19/0): ನಾಥನ್‌ ಮೆಕ್‌ಸ್ವೀನಿ ಅಜೇಯ 10 ರನ್‌ ಮತ್ತು ಉಸ್ಮಾನ್‌ ಖವಾಜಾ ಅಜೇಯ 9 ರನ್.‌

ಪಂದ್ಯಶ್ರೇಷ್ಠ: ಟ್ರಾವಿಸ್‌ ಹೆಡ್‌

 

andolana

Recent Posts

ಬಿಡದಿ ಹೋರಾಟಕ್ಕೆ ಜೆನ್‌-ಝೀ ಗಳು ಬರಲಿ ; ದೇವನೂರು ಮಹದೇವ ಕರೆ

ಮೈಸೂರು: ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಆಕಾಂಕ್ಷೆ ಪ್ರಭುತ್ವಕ್ಕೆ ಇರಬೇಕು. ಭೂಮಿ ನೀಡುವ ರೈತರ ಬದುಕಿನ ಹೊಣೆಗಾರಿಕೆಯನ್ನು ಸರ್ಕಾರ ವಹಿಸಿಕೊಳ್ಳುತ್ತದೆಯೇ…

6 hours ago

ಕನ್ನಡ ಭಾಷ ಶಿಕ್ಷಕರ ಪ್ರತ್ಯೇಕ ನೇಮಕಕ್ಕೆ ಸರ್ಕಾರ ಅಸ್ತು ; ಸ್ವಾಗತಾರ್ಹ

ಮೈಸೂರು : ಶಾಲಾ ಶಿಕ್ಷಣ ಇಲಾಖೆಯ ಜಿಪಿಎಸ್‌ಟಿಆರ್ ಹಾಗೂ ಎಚ್‌ಎಸ್‌ಟಿಆರ್ ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳನ್ನು ಪ್ರತ್ಯೇಕವಾಗಿ…

10 hours ago

ಶೀಘ್ರದಲ್ಲೇ ರಾಜ್ಯದಲ್ಲಿ ಗುಟ್ಕಾ ನಿಷೇಧ ಆದೇಶ ವಾಪಸ್?‌

ಬೆಂಗಳೂರು: ಗುಟ್ಕಾ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ವಾಪಸ್‌ ಪಡೆಯುವ ಸಾಧ್ಯತೆಯಿದೆ. ಆಡಳಿತರೂಢ ಕಾಂಗ್ರೆಸ್‌ ಶಾಸಕರಿಂದಲೇ ಸರ್ಕಾರದ ನಿರ್ಧಾರಕ್ಕೆ…

14 hours ago

6 ದಿನಗಳಾದರೂ ಸಿಗದ ಟೆಕ್ಕಿ ಅದ್ವೈತ್‌ ಸುಳಿವು: ಶಿವಗಂಗೆ ಬೆಟ್ಟದಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್‌ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…

16 hours ago

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.‌ಅಶೋಕ್‌ ಹಾಗೂ ಸಿಎಂ ಡಿ.ಕೆ.ಶಿವಕುಮಾರ್‌…

17 hours ago

ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗಕ್ಕೆ ನುಗ್ಗಿದ ನೀರು: 7 ಮಂದಿ ಕಾರ್ಮಿಕರು ಸಾವು

ಡೆಹ್ರಾಡೂನ್:‌ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…

18 hours ago