ಕ್ರೀಡೆ

ವಿಶೇಷ ಒಲಿಂಪಿಕ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನ: 50 ಪದಕಗಳ ಗಡಿ ದಾಟಿದ ಭಾರತ!

ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್‌ನಲ್ಲಿ ಭಾರತೀಯ ಪಡೆ ತನ್ನ ಪದಕದ ಭರಾಟೆಯನ್ನು ಮುಂದುವರೆಸಿದ್ದು, ಬರ್ಲಿನ್‌ನಲ್ಲಿ 50 ಪದಕಗಳ ಗಡಿ ದಾಟಿತು.

ಟೂರ್ನಿಯ ಕೊನೆ ದಿನ ಸ್ಪೆಷಲ್ ಒಲಿಂಪಿಕ್ಸ್ ಭಾರತ 15 ಚಿನ್ನ, 27 ಬೆಳ್ಳಿ, 13 ಕಂಚು ಸೇರಿದಂತೆ ಅಥ್ಲೆಟಿಕ್ಸ್, ಸೈಕ್ಲಿಂಗ್, ಪವರ್‌ಲಿಫ್ಟಿಂಗ್, ರೋಲರ್ ಸ್ಕೇಟಿಂಗ್ ಮತ್ತು ಈಜು. ಐದು ವಿವಿಧ ಕ್ರೀಡೆಗಳಲ್ಲಿ 55 ಪದಕಗಳನ್ನು ಗಳಿಸಿದೆ. ಈಜಿನಲ್ಲಿ ಐದು ಪದಕಗಳ (3 ಚಿನ್ನ, 1 ಬೆಳ್ಳಿ ಮತ್ತು 1 ಕಂಚು) ಮತ್ತು ಸೈಕ್ಲಿಂಗ್ ಕೋರ್ಸ್‌ನಲ್ಲಿ ಆರು ಪದಕ (3 ಚಿನ್ನ, 2 ಬೆಳ್ಳಿ, ಒಂದು ಕಂಚು) ದಾಖಲಿಸಿದೆ.
ಸೈಕ್ಲಿಂಗ್ ತಂಡದ ಪ್ರತಿಯೊಬ್ಬ ಸದಸ್ಯರೂ 5 ಕಿಮೀ ರೋಡ್ ರೇಸ್‌ನಲ್ಲಿ ಕಂಚಿನ ಪದಕದೊಂದಿಗೆ ನೀಲ್ ಯಾದವ್ ಮೊದಲಿಗರಾಗಿ ಪದಕ ಗೆದ್ದರು. ನಂತರ ಯಾದವ್, ಶಿವಾನಿ ಮತ್ತು ಇಂದು ಪ್ರಕಾಶ್ 1 ಕಿಮೀ ಟೈಮ್ ಟ್ರಯಲ್‌ನಲ್ಲಿ ಚಿನ್ನ ಗೆದ್ದರೆ, ಕಲ್ಪನಾ ಜೆನಾ ಮತ್ತು ಜಯಶೀಲ ಅರ್ಬುತರಾಜ್ ಬೆಳ್ಳಿ ಪಡೆದರು.
ಈಜು: ಫ್ರೀಸ್ಟೈಲ್ ಈಜುಪಟುಗಳಾದ ದೀಕ್ಷಾ ಜಿತೇಂದ್ರ ಶಿರಗಾಂವ್ಕರ್, ಪೂಜಾ ಗಿರಿಧರರಾವ್ ಗಾಯಕವಾಡ ಮತ್ತು ಪ್ರಶದ್ಧಿ ಕಾಂಬಳೆ ಅವರು ಚಿನ್ನ ಗೆದ್ದುಕೊಂಡಿದ್ದರಿಂದ ಭಾರತದ ಪದಕಗಳು ಸುಮಾರು ದ್ವಿಗುಣಗೊಂಡವು. ಮಾಧವ್ ಮದನ್ ಚಿನ್ನದ ಪದಕ ಗಳಿಸುವ ಮೂಲಕ ತಮ್ಮ ಖಾತೆಗೆ ಮತ್ತೊಂದು ಪದಕವನ್ನು ಸೇರಿಸಿದರು. ಮುರಳಿ ಮತ್ತು ಸಿದ್ಧಾಂಥ್. ಕುಮಾರ್ 25 ಮೀಟರ್ ಫ್ರೀಸ್ಟೈಲ್ ನಲ್ಲಿ ಕಂಚು ಗೆದ್ದರು.
ಇನ್ನುಳಿದಂತೆ ಸೋನೆಪತ್‌ನ ಸಾಕೇತ್ ಕುಂದು ಮಿನಿ ಜಾವೆಲಿನ್ ಬಿ ಲೆವೆಲ್‌ನಲ್ಲಿ ಬೆಳ್ಳಿ ಗೆದ್ದರು. ಲಿಟಲ್ ಏಂಜಲ್ಸ್ ಶಾಲೆಯ ವಿದ್ಯಾರ್ಥಿಯು ಬಹು-ಕ್ರೀಡಾ ಅಥ್ಲೀಟ್ ಆಗಿದ್ದು, ಅವರು ಟೇಬಲ್ ಟೆನ್ನಿಸ್, ಫಿಗರ್ ಸ್ಕೇಟಿಂಗ್ ಮತ್ತು ಅಥ್ಲೆಟಿಕ್ಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದ್ದಾರೆ.
andolanait

Recent Posts

ಮಾರುಕಟ್ಟೆ ಬಂದ್ ಭೀತಿ; ಹೊಗೆಸೊಪ್ಪು ತಂದ ರೈತರ ಪರದಾಟ

ಮಂಜು ಕೋಟೆ ಕೋಟೆ: ಹೆಬ್ಬಾಳ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬೇಲ್‌ಗಳ ರಾಶಿ; ಮಳೆ ಬಂದರೆ ನಷ್ಟದ ಆತಂಕ ಎಚ್.ಡಿ.ಕೋಟೆ: ಮಾರುಕಟ್ಟೆ…

2 mins ago

ಬಂಡೀಪಾಳ್ಯದಲ್ಲಿ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ ಶೀಘ್ರ ಆರಂಭ

ಕೆ.ಬಿ.ರಮೇಶನಾಯಕ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ರೈತರಿಗೆ ಅನುಕೂಲ ರೈತರು ರೇಷ್ಮೆ ಬೆಳೆಯತ್ತ ಮುಖ ಮಾಡಿರುವ ಪರಿಣಾಮ ಉತ್ಪಾದನೆಯಲ್ಲಿ ಹೆಚ್ಚಳ…

7 mins ago

ನೂರು ಸಾವಿರದ ಗಡಿ ದಾಟಿದ ಆಂದೋಲನ ಇನ್ ಸ್ಟಾ ಪೇಜ್ ಹಿಂಬಾಲಕರು

‘ಆಂದೋಲನ’ ಪತ್ರಿಕೆಯ ಹೊಸ ಡಿಜಿಟಲ್ ಮೈಲಿಗಲ್ಲಿಗೆ ಹರಿದು ಬಂದ ಹಾರೈಕೆಗಳು " ಒಂದು ಲಕ್ಷ ಹಿಂಬಾಲಕರು ತಲುಪಿರುವುದು ಕೂಡ ಹೊಸ…

11 mins ago

ದುಸ್ಥಿತಿಯಲ್ಲಿ ಸರ್ಕಾರಿ ಮಹಾರಾಜ ಸಂಸ್ಕೃತ ಪಾಠಶಾಲೆ ಕಟ್ಟಡ

ಪ್ರಶಾಂತ್ ಎಸ್. ಮೈಸೂರು: ಸಂಸ್ಕೃತ, ವೇದ, ಆಗಮ ಮತ್ತು ಶಾಸ್ತ್ರಗಳನ್ನು ಬೋಽಸುವ ಪ್ರಮುಖ ಸಾಂಪ್ರದಾಯಿಕ ಶಿಕ್ಷಣ ನೀಡುತ್ತಿರುವ ನಗರದ ಸರ್ಕಾರಿ…

19 mins ago

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ(ಡಿಎ)ಯನ್ನು ಶೇ.1.50ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2026 ಜನವರಿ 1ರಿಂದ ಅನ್ವಯವಾಗುವಂತೆ…

12 hours ago