ಕ್ರೀಡೆ

ತವರು ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ಮುಂಬೈ: ಭಾರತ ಕ್ರಿಕೆಟ್‌ ತಂಡವು ತವರಿನಲ್ಲಿ ಆಡುವ 2025-26ನೇ ಸಾಲಿನ ಸರಣಿಯ ವೇಳಾಪಟ್ಟಿಯನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ.

2025ರ ಮೊದಲ ಋತುವಿನಲ್ಲಿ ಭಾರತ 4 ಟೆಸ್ಟ್‌ ಪಂದ್ಯಗಳನ್ನು ಅಹಮದಾಬಾದ್‌, ಕೋಲ್ಕತ್ತಾ, ನವದೆಹಲಿ ಮತ್ತು ಗುವಾಹಟಿಯಲ್ಲಿ ನಡೆಯಲಿದೆ.

ವೆಸ್ಟ್‌ಇಂಡೀಸ್‌ ವಿರುದ್ಧ ಆಕ್ಟೋಬರ್‌ 6ರಿಂದ ಆರಂಭವಾಗಲಿರುವ ಎರಡು ಟೆಸ್ಟ್‌ ಪಂದ್ಯಗಳನ್ನು ಭಾರತ ತಂಡವು ಅಹಮದಾಬಾದ್‌ ಮತ್ತು ಕೋಲ್ಕತ್ತದಲ್ಲಿ ಆಡಲಿದೆ.

ನವೆಂಬರ್‌ 18ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಟೆಸ್ಟ್‌ ಸರಣಿಯು ಐತಿಹಾಸಿಕವಾಗಿರುತ್ತದೆ. ಟೆಸ್ಟ್‌ ಪಂದ್ಯಗಳ ಜೊತೆಗೆ ಮೂರು ಏಕದಿನ ಮತ್ತು ಐದು ಟಿ20 ಸರಣಿಯನ್ನು ಆಡಲಿದೆ.

ವೇಳಾಪಟ್ಟಿ:

ವೆಸ್ಟ್‌ ಇಂಡಿಸ್‌, ಭಾರತ ಪ್ರವಾಸ:

* ಅಕ್ಟೋಬರ್‌ 6ರಿಂದ ಮೊದಲ ಟೆಸ್ಟ್‌- ಅಹಮದಾಬಾದ್‌

* ಅಕ್ಟೋಬರ್‌ 14ರಿಂದ ಎರಡನೇ ಟೆಸ್ಟ್‌- ಕೋಲ್ಕತ್ತ

ದಕ್ಷಿಣ ಆಫ್ರಿಕಾ, ಭಾರತ ಪ್ರವಾಸ:

* ನವೆಂಬರ್‌ 18ರಿಂದ ಮೊದಲ ಟೆಸ್ಟ್‌- ನವದೆಹಲಿ

* ನವೆಂಬರ್‌ 26ರಿಂದ ಎರಡನೇ ಟೆಸ್ಟ್‌- ಗುವಾಹಟಿ

* ನವೆಂಬರ್‌ 30ರಂದು ಮೊದಲ ಏಕದಿನ ಪಂದ್ಯ- ರಾಂಚಿ

* ಡಿಸೆಂಬರ್ 3ರಂದು ಎರಡನೇ ಏಕದಿನ ಪಂದ್ಯ- ರಾಯ್ಪುರ

* ಡಿಸೆಂಬರ್‌ 6ರಂದು ಮೂರನೇ ಏಕದಿನ ಪಂದ್ಯ- ವಿಶಾಖಪಟ್ಟಣ

* ಡಿಸೆಂಬರ್‌ 9ರಂದು ಮೊದಲ ಟಿ20 ಪಂದ್ಯ- ಕಟಕ್‌

* ಡಿಸೆಂಬರ್‌ 11ರಂದು ಎರಡನೇ ಟಿ20 ಪಂದ್ಯ- ಚಂಡೀಗಢ

* ಡಿಸೆಂಬರ್ 14ರಂದು ಮೂರನೇ ಟಿ20 ಪಂದ್ಯ- ಧರ್ಮಶಾಲಾ

* ಡಿಸೆಂಬರ್ 17ರಂದು ನಾಲ್ಕನೇ ಟಿ20 ಪಂದ್ಯ- ಲಖನೌ

* ಡಿಸೆಂಬರ್‌ 19ರಂದು ಐದನೇ ಟಿ20 ಪಂದ್ಯ- ಅಹಮದಾಬಾದ್

 

 

 

ಆಂದೋಲನ ಡೆಸ್ಕ್

Recent Posts

ಮಾನವ ಕಲಿಯಬೇಕಾದ ಬದುಕಿನ ಪಾಠಗಳು

ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ  ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…

2 hours ago

ಸಾವಿರಾರು ಹೆರಿಗೆ ಮಾಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಗೀತಾ ‘ಮಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…

2 hours ago

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…

2 hours ago

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…

2 hours ago

ಓದುಗರ ಪತ್ರ: ಸ್ಥಾನ…ಮಾನ !

ಸ್ಥಾನ...ಮಾನ ! ಅಳೆದೂ ಸುರಿದು ಅಲ್ಲಿಂದಿಲ್ಲಿಗೆ ಓಡಾಡಿ ಕೊಟ್ಟೂ ಕೊಡಲಾಗದೆ ಬಿಟ್ಟೂ ಇರಲಾಗದೆ ಉಳಿಸಿಕೊಂಡಿರುವುದು ಒಂದೇ ಒಂದು ಮಂತ್ರಿ ಸ್ಥಾನ…

2 hours ago

ಓದುಗರ ಪತ್ರ: ಸಚಿವ ಸ್ಥಾನ: ಹಿರಿಯರ ನಿರ್ಲಕ್ಷ್ಯ ಸರಿಯಲ್ಲ

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಮಂತ್ರಿಮಂಡಲ ವಿಸ್ತರಣೆಯಾಗಿ ೨೦ ಸ್ಥಾನಗಳ ಪೈಕಿ ೧೯ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ…

2 hours ago