ಕ್ರೀಡೆ

ತವರು ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ಮುಂಬೈ: ಭಾರತ ಕ್ರಿಕೆಟ್‌ ತಂಡವು ತವರಿನಲ್ಲಿ ಆಡುವ 2025-26ನೇ ಸಾಲಿನ ಸರಣಿಯ ವೇಳಾಪಟ್ಟಿಯನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ.

2025ರ ಮೊದಲ ಋತುವಿನಲ್ಲಿ ಭಾರತ 4 ಟೆಸ್ಟ್‌ ಪಂದ್ಯಗಳನ್ನು ಅಹಮದಾಬಾದ್‌, ಕೋಲ್ಕತ್ತಾ, ನವದೆಹಲಿ ಮತ್ತು ಗುವಾಹಟಿಯಲ್ಲಿ ನಡೆಯಲಿದೆ.

ವೆಸ್ಟ್‌ಇಂಡೀಸ್‌ ವಿರುದ್ಧ ಆಕ್ಟೋಬರ್‌ 6ರಿಂದ ಆರಂಭವಾಗಲಿರುವ ಎರಡು ಟೆಸ್ಟ್‌ ಪಂದ್ಯಗಳನ್ನು ಭಾರತ ತಂಡವು ಅಹಮದಾಬಾದ್‌ ಮತ್ತು ಕೋಲ್ಕತ್ತದಲ್ಲಿ ಆಡಲಿದೆ.

ನವೆಂಬರ್‌ 18ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಟೆಸ್ಟ್‌ ಸರಣಿಯು ಐತಿಹಾಸಿಕವಾಗಿರುತ್ತದೆ. ಟೆಸ್ಟ್‌ ಪಂದ್ಯಗಳ ಜೊತೆಗೆ ಮೂರು ಏಕದಿನ ಮತ್ತು ಐದು ಟಿ20 ಸರಣಿಯನ್ನು ಆಡಲಿದೆ.

ವೇಳಾಪಟ್ಟಿ:

ವೆಸ್ಟ್‌ ಇಂಡಿಸ್‌, ಭಾರತ ಪ್ರವಾಸ:

* ಅಕ್ಟೋಬರ್‌ 6ರಿಂದ ಮೊದಲ ಟೆಸ್ಟ್‌- ಅಹಮದಾಬಾದ್‌

* ಅಕ್ಟೋಬರ್‌ 14ರಿಂದ ಎರಡನೇ ಟೆಸ್ಟ್‌- ಕೋಲ್ಕತ್ತ

ದಕ್ಷಿಣ ಆಫ್ರಿಕಾ, ಭಾರತ ಪ್ರವಾಸ:

* ನವೆಂಬರ್‌ 18ರಿಂದ ಮೊದಲ ಟೆಸ್ಟ್‌- ನವದೆಹಲಿ

* ನವೆಂಬರ್‌ 26ರಿಂದ ಎರಡನೇ ಟೆಸ್ಟ್‌- ಗುವಾಹಟಿ

* ನವೆಂಬರ್‌ 30ರಂದು ಮೊದಲ ಏಕದಿನ ಪಂದ್ಯ- ರಾಂಚಿ

* ಡಿಸೆಂಬರ್ 3ರಂದು ಎರಡನೇ ಏಕದಿನ ಪಂದ್ಯ- ರಾಯ್ಪುರ

* ಡಿಸೆಂಬರ್‌ 6ರಂದು ಮೂರನೇ ಏಕದಿನ ಪಂದ್ಯ- ವಿಶಾಖಪಟ್ಟಣ

* ಡಿಸೆಂಬರ್‌ 9ರಂದು ಮೊದಲ ಟಿ20 ಪಂದ್ಯ- ಕಟಕ್‌

* ಡಿಸೆಂಬರ್‌ 11ರಂದು ಎರಡನೇ ಟಿ20 ಪಂದ್ಯ- ಚಂಡೀಗಢ

* ಡಿಸೆಂಬರ್ 14ರಂದು ಮೂರನೇ ಟಿ20 ಪಂದ್ಯ- ಧರ್ಮಶಾಲಾ

* ಡಿಸೆಂಬರ್ 17ರಂದು ನಾಲ್ಕನೇ ಟಿ20 ಪಂದ್ಯ- ಲಖನೌ

* ಡಿಸೆಂಬರ್‌ 19ರಂದು ಐದನೇ ಟಿ20 ಪಂದ್ಯ- ಅಹಮದಾಬಾದ್

 

 

 

ಆಂದೋಲನ ಡೆಸ್ಕ್

Recent Posts

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

34 mins ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

2 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

2 hours ago

ಮಂಡ್ಯ ಭಾಗದ ರೈತರ ಅಭಿವೃದ್ಧಿಗೆ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಸ್ಥಾಪನೆ: ಎನ್ ಚಲುವರಾಯಸ್ವಾಮಿ

ಮಂಡ್ಯ: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿಫಾರಂನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು…

2 hours ago

ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿರುತ್ತದೆ ಎಂದ ಸಚಿವ ಎಂ.ಬಿ.ಪಾಟೀಲ್‌

ಬೆಂಗಳೂರು: ಆರ್‌.ಅಶೋಕ್‌ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಇಳಿಸದೇ ಹೋದರೆ ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್‌…

2 hours ago

ಭಾರತ-ರಷ್ಯಾ ನಡುವೆ ಹಲವು ಒಪ್ಪಂದಗಳಿಗೆ ಸಹಿ

ನವದೆಹಲಿ: ಭಾರತ-ರಷ್ಯಾ ಉಭಯ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನವದೆಹಲಿಯ…

3 hours ago