ಕ್ರೀಡೆ

ತವರು ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ಮುಂಬೈ: ಭಾರತ ಕ್ರಿಕೆಟ್‌ ತಂಡವು ತವರಿನಲ್ಲಿ ಆಡುವ 2025-26ನೇ ಸಾಲಿನ ಸರಣಿಯ ವೇಳಾಪಟ್ಟಿಯನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ.

2025ರ ಮೊದಲ ಋತುವಿನಲ್ಲಿ ಭಾರತ 4 ಟೆಸ್ಟ್‌ ಪಂದ್ಯಗಳನ್ನು ಅಹಮದಾಬಾದ್‌, ಕೋಲ್ಕತ್ತಾ, ನವದೆಹಲಿ ಮತ್ತು ಗುವಾಹಟಿಯಲ್ಲಿ ನಡೆಯಲಿದೆ.

ವೆಸ್ಟ್‌ಇಂಡೀಸ್‌ ವಿರುದ್ಧ ಆಕ್ಟೋಬರ್‌ 6ರಿಂದ ಆರಂಭವಾಗಲಿರುವ ಎರಡು ಟೆಸ್ಟ್‌ ಪಂದ್ಯಗಳನ್ನು ಭಾರತ ತಂಡವು ಅಹಮದಾಬಾದ್‌ ಮತ್ತು ಕೋಲ್ಕತ್ತದಲ್ಲಿ ಆಡಲಿದೆ.

ನವೆಂಬರ್‌ 18ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಟೆಸ್ಟ್‌ ಸರಣಿಯು ಐತಿಹಾಸಿಕವಾಗಿರುತ್ತದೆ. ಟೆಸ್ಟ್‌ ಪಂದ್ಯಗಳ ಜೊತೆಗೆ ಮೂರು ಏಕದಿನ ಮತ್ತು ಐದು ಟಿ20 ಸರಣಿಯನ್ನು ಆಡಲಿದೆ.

ವೇಳಾಪಟ್ಟಿ:

ವೆಸ್ಟ್‌ ಇಂಡಿಸ್‌, ಭಾರತ ಪ್ರವಾಸ:

* ಅಕ್ಟೋಬರ್‌ 6ರಿಂದ ಮೊದಲ ಟೆಸ್ಟ್‌- ಅಹಮದಾಬಾದ್‌

* ಅಕ್ಟೋಬರ್‌ 14ರಿಂದ ಎರಡನೇ ಟೆಸ್ಟ್‌- ಕೋಲ್ಕತ್ತ

ದಕ್ಷಿಣ ಆಫ್ರಿಕಾ, ಭಾರತ ಪ್ರವಾಸ:

* ನವೆಂಬರ್‌ 18ರಿಂದ ಮೊದಲ ಟೆಸ್ಟ್‌- ನವದೆಹಲಿ

* ನವೆಂಬರ್‌ 26ರಿಂದ ಎರಡನೇ ಟೆಸ್ಟ್‌- ಗುವಾಹಟಿ

* ನವೆಂಬರ್‌ 30ರಂದು ಮೊದಲ ಏಕದಿನ ಪಂದ್ಯ- ರಾಂಚಿ

* ಡಿಸೆಂಬರ್ 3ರಂದು ಎರಡನೇ ಏಕದಿನ ಪಂದ್ಯ- ರಾಯ್ಪುರ

* ಡಿಸೆಂಬರ್‌ 6ರಂದು ಮೂರನೇ ಏಕದಿನ ಪಂದ್ಯ- ವಿಶಾಖಪಟ್ಟಣ

* ಡಿಸೆಂಬರ್‌ 9ರಂದು ಮೊದಲ ಟಿ20 ಪಂದ್ಯ- ಕಟಕ್‌

* ಡಿಸೆಂಬರ್‌ 11ರಂದು ಎರಡನೇ ಟಿ20 ಪಂದ್ಯ- ಚಂಡೀಗಢ

* ಡಿಸೆಂಬರ್ 14ರಂದು ಮೂರನೇ ಟಿ20 ಪಂದ್ಯ- ಧರ್ಮಶಾಲಾ

* ಡಿಸೆಂಬರ್ 17ರಂದು ನಾಲ್ಕನೇ ಟಿ20 ಪಂದ್ಯ- ಲಖನೌ

* ಡಿಸೆಂಬರ್‌ 19ರಂದು ಐದನೇ ಟಿ20 ಪಂದ್ಯ- ಅಹಮದಾಬಾದ್

 

 

 

ಆಂದೋಲನ ಡೆಸ್ಕ್

Recent Posts

ಹಳೆ ಕೆಸರೆಯ ಕಸ ವಿಲೇವಾರಿ ಘಟಕದಲ್ಲಿ ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಕಸದ ರಾಶಿ

ಮೈಸೂರು: ನಗರದ ಹೊರವಲಯದ ಹಳೆ ಕೆಸರೆ ಸಮೀಪದಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಕಸದ…

22 mins ago

ಓದುಗರ ಪತ್ರ: ಓವೆಲ್ ಮೈದಾನದಲ್ಲಿ ಆಸನಗಳನ್ನು ದುರಸ್ತಿ ಮಾಡಿ

ಮೈಸೂರಿನ ಕ್ರಾಫರ್ಡ್ ಹಾಲ್ ಎದುರಿನ ಓವೆಲ್ ಮೈದಾನದಲ್ಲಿ ಕ್ರೀಡಾಪಟುಗಳು ಪ್ರತಿನಿತ್ಯ ಕ್ರೀಡಾಭ್ಯಾಸ ನಡೆಸುತ್ತಾರೆ. ಸಾರ್ವಜನಿಕರೂ ಬೆಳಿಗ್ಗೆ ಹಾಗೂ ಸಂಜೆಯ ವೇಳೆ…

3 hours ago

ಓದುಗರ ಪತ್ರ: ಒಳಮೀಸಲಾತಿ; ಸಮಾನ ಅವಕಾಶ ಕಲ್ಪಿಸಿ

ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಒಳಮೀಸಲಾತಿಯಲ್ಲಿ ಎಡಗೈ ಮತ್ತು ಬಲಗೈ ಪಂಗಡಗಳಿಗೆ ಸಮಾನವಾಗಿ ಸೌಲಭ್ಯ ಕಲ್ಪಿಸಬೇಕು.…

3 hours ago

ಓದುಗರ ಪತ್ರ: ನ್ಯಾಯಾಲಯದ ಬಳಿ ಸಿಗ್ನಲ್ ಲೈಟ್ ಅಳವಡಿಸಿ

ಮೈಸೂರಿನ ವಿವಿಧ ವೃತ್ತಗಳಲ್ಲಿ ಹೊಸದಾಗಿ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿದ್ದಾರೆ. ಆದರೆ ಚಾಮರಾಜಪುರಂನ ನ್ಯಾಯಾಲಯದ ಬಳಿ ವಾಹನ ಸಂಚಾರ ಹೆಚ್ಚಾಗಿದ್ದು, ನ್ಯಾಯಾಲಯದ…

3 hours ago

ಓದುಗರ ಪತ್ರ: ನಂದಿ ಭವನ ಮುಂಭಾಗದ ಮೋರಿ ಶುಚಿಗೊಳಿಸಿ

ಚಾಮರಾಜನಗರ ಪಟ್ಟಣದಲ್ಲಿರುವ ನಂದಿ ಭವನದಲ್ಲಿ ಮದುವೆ ಮತ್ತು ಇತರ ಸಮಾರಂಭಗಳು ನಡೆಯುತ್ತವೆ. ಕಾರ್ಯಕ್ರಮಗಳು ಮುಗಿದ ಮೇಲೆ ಉಳಿದ ಆಹಾರ ಪದಾರ್ಥಗಳನ್ನು…

3 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ವಾಟ್ಸಾಪ್ ಹೇಳಿಕೆ, ಡೀಪ್ ಫೇಕ್ ಹಾವಳಿ, ಪಾಪರಾಜಿಗಳ ನಿಯಂತ್ರಣದತ್ತ

ನಕಲಿ ವಿಡಿಯೋಗಳ ಹಾವಳಿ, ಕೃತಕ ಬುದ್ಧಿಮತ್ತೆ ಬಳಸಿ ಡೀಪ್‌ಫೇಕ್, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವುದನ್ನು ತಡೆಯುವ…

3 hours ago