ಕ್ರೀಡೆ

BBL: ಅಪಾಯಕಾರಿ ಪಿಚ್‌ನಿಂದ ಅರ್ಧದಲ್ಲೇ ನಿಂತ ಪಂದ್ಯ

ಮೆಲ್ಬೋರ್ನ್‌ : ಬಿಗ್‌ ಬ್ಯಾಷ್‌ ಲೀಗ್‌ ೨೦೨೩ ಟೂರ್ನಿಯಲ್ಲಿನ ಮೆಲ್ಬೋರ್ನ್‌ ರೇನಿಗೇಡ್ಸ್‌ ಮತ್ತು ಪರ್ತ್‌ ಸ್ಕಾಚರ್ಸ್‌ ನಡುವಿನ ಪಂದ್ಯ ಪಿಚ್‌ ಅಪಾಯಕಾರಿಯಾಗಿ ವರ್ತಿಸುತ್ತಿದೆ ಎಂಬ ಕಾರಣಕ್ಕೆ ರದ್ದಾಗಿದೆ. ಪಿಚ್‌ ಸಹಕಾರಿಯಲ್ಲದೇ ವರ್ತಿಸುತ್ತಿದ್ದನ್ನು ಅಂಪೈರ್‌ಗಳು ಗಮನಿಸಿ ಪಂದ್ಯವನನು ಅರ್ಧಕ್ಕೆ ನಿಲ್ಲಿಸಿದ ಘಟನೆ ಭಾನುವಾರ ನಡೆದಿದೆ. ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಪಾಯಕಾರಿ ಪಿಚ್‌ ಎಂದು ಪಂದ್ಯವೊಂದನ್ನು ರದ್ದುಪಡಿಸಲಾಗಿದೆ.

ಮೆಲ್ಬೋರ್ನ್‌ನ ಗೀಲಾಂಗ್‌ ಮೈದಾನದಲ್ಲಿ ಪರ್ತ್‌ ಬ್ಯಾಟಿಂಗ್‌ ಮಾಡುವಾಗ ಹಲವು ಬಾರಿ ಚೆಂಡು ದಿಢೀರನೇ ಪುಟಿದೇಳುತ್ತಿತ್ತು. ಇದನ್ನು ಗಮನಿಸಿದ ಅಂಪೈರ್‌ಗಳು ೬.೫ ಓವರ್‌ಗಳಿಗೆ ಪಂದ್ಯ ನಿಲ್ಲಿಸಲು ನಿರ್ಧರಿಸಿದರು. ಬ್ಯಾಟ್ಸ್‌ಮನ್‌ಗಳ ಸುರಕ್ಷತೆ ದೃಷ್ಠಿಯಿಂದ ಈ ಪಂದ್ಯವನ್ನು ರದ್ದುಗೊಳಿಸಿದರು.

ಪಿಚ್‌ ತೇವಾಂಶದಿಂದ ಕೂಡಿದ ಸ್ಥಳವಾದ್ದರಿಂದ ಸಮಸ್ಯೆಯು ಗಂಭೀರವಾಗಿದ್ದು, ಬ್ಯಾಟರ್‌ಗಳಿಗೆ ಅಪಾಯದ ಅಂಶವಾಗಿತ್ತು. ಪಿಚ್‌ನಲ್ಲಿ ಅಲ್ಲಲ್ಲಿ ಕುಳಿಗಳು ಕಾಣಿಸುತ್ತಿತ್ತು. ಪ್ರತಿಬಾರಿಯೂ ಚೆಂಡು ಹಾಕಿದಾಗೆಲ್ಲಾ ಚೆಂಡು ತೀವ್ರ ತಿರುವುಗಳನ್ನು ಪಡೆಯುತ್ತಿತ್ತು.

ಪಂದ್ಯದ ಹಿಂದಿನ ದಿನ ಸುರಿದ ಮಳೆಗೆ ಸ್ಟೇಡಿಯಂ ಒದ್ದೆಯಾಗಿತ್ತು. ನೀರು ಪಿಚ್‌ಗೆ ಹಾಕಲಾಗಿದ್ದ ಹೊದಿಕೆಯನ್ನು ಮೀರಿ ಒಳಗೆ ಸೋರಿಕೆಯಾಗಿತ್ತು ಅದರಿಂದ ಈ ಪಿಚ್‌ ಅಪಾಯಕಾರಿಯಾಗಿ ಪರಿಣಮಿಸಿತು ಎಂದು ಹೇಳಲಾಗಿದೆ.

ಪಂದ್ಯ ನಡೆಯುತ್ತಿರುವಾಗ ಕಾಮೆಂಟಿ ಮಾಡುತ್ತಿದ್ದ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌, ಆಸೀಸ್‌ ವಿಕೆಟ್‌ ಕೀಪರ್ ಗಿಲ್‌ಕ್ರಿಸ್ಟ್‌ ಬಳಿ ಈ ಪಿಚ್‌ ನಿಜವಾಗಿಯೂ ಬ್ಯಾಟರ್‌ಗಳಿಗೆ ಅಪಾಯವಾಗಲಿದೆಯೇ, ಅಥವಾ ಬ್ಯಾಟಿಂಗ್‌ ಮಾಡಲು ಮಾತ್ರ ಕಷ್ಟವಾಗಲಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗಿಲ್‌ಕ್ರಿಸ್ಟ್‌ ಪಿಚ್‌ ನೈಜ ಅಪಾಯ ಎಂದು ನನಗನಿಸುತ್ತದೆ ಎಂದರು.

ಇದಾದ ಬಳಿಕ ಪಂದ್ಯ ರದ್ದುಗೊಳಿಸಲಾಯಿತು.

andolanait

Recent Posts

ದೂರ ಗ್ರಾಮಕ್ಕೆ ನಟ ಪ್ರಭುದೇವ ಭೇಟಿ

ದೂರ: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೂರ ಗ್ರಾಮಕ್ಕೆ ಖ್ಯಾತ ನಟ, ನಿರ್ದೇಶಕ ಪ್ರಭುದೇವ ಶನಿವಾರ ಆಗಮಿಸಿದ್ದರು. ಅವರು ಮೊದಲು…

24 mins ago

ಸೌದಿ ಅರಾಮ್ಕೊ ತೈಲ ಕಂಪನಿಯ ಹೆಲಿಕಾಪ್ಟರ್‌ ಪತನ: 14 ಮಂದಿ ದುರ್ಮರಣ

ರಿಯಾಧ್:‌ ಸೌದಿ ಅರಾಮ್ಕೊ ತೈಲ ಕಂಪನಿಗೆ ಸೇರಿದ ಹೆಲಿಕಾಪ್ಟರ್‌ ಅಪಘಾತಕ್ಕೀಡಾಗಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ. ಸೌದಿ ಅರೇಬಿಯಾದ ರಾಸ್‌…

1 hour ago

ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣ: ಕೆಂಪಯ್ಯನಹುಂಡಿ ಗ್ರಾಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

ಟಿ.ನರಸೀಪುರ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಕೆಂಪಯ್ಯನಹುಂಡಿ ಗ್ರಾಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ…

2 hours ago

ಮೈಸೂರಿನ ಎರಡು ಪ್ರಮುಖ ಹೋಟೆಲ್‌ಗಳಿಗೆ ಬಾಂಬ್‌ ಬೆದರಿಕೆ ಕರೆ: ಕೆಲಕಾಲ ಆತಂಕ ಸೃಷ್ಟಿ

ಮೈಸೂರು: ನಗರದ ಪ್ರಮುಖ ಎರಡು ಹೋಟೆಲ್‌ಗಳನ್ನು ಬಾಂಬ್ ಮೂಲಕ ಸ್ಛೋಟಿಸುವುದಾಗಿ ಇ-ಮೇಲ್ ಮೂಲಕ ವ್ಯಕ್ತಿಯೊಬ್ಬ ಬೆದರಿಕೆ ಒಡ್ಡಿದ್ದು, ಕೆಲಕಾಲ ಆತಂಕ…

3 hours ago

ಜಮೀನಿನಲ್ಲಿ ಯುವತಿಗೆ ಹಾವು ಕಡಿತ

ಹನೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯುವತಿಯೊಬ್ಬರಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಅಜ್ಜೀಪುರ ಗ್ರಾಮದಲ್ಲಿ ನಡೆದಿದೆ.…

3 hours ago

ಸರಗೂರು: ಹುಲಿ ದಾಳಿಗೆ ಕರು ಬಲಿ

ಸರಗೂರು: ಮೈಸೂರು ಜಿಲ್ಲೆಯಲ್ಲಿ ಮತ್ತೆ ಹುಲಿ ಉಪಟಳ ಹೆಚ್ಚಾಗಿದ್ದು, ಹುಲಿ ದಾಳಿಗೆ ಕರುವೊಂದು ಬಲಿಯಾಗಿರುವ ಘಟನೆ ಸರಗೂರು ತಾಲ್ಲೂಕಿನ ಹೆಗ್ಗನೂರು…

4 hours ago