ಹೊಸದಿಲ್ಲಿ: ‘ಡಿಸ್ನಿ ಸ್ಟಾರ್’, ‘ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್’ ಮತ್ತು ‘ಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾ ಲಿಮಿಟೆಡ್’ ಸೇರಿದಂತೆ ಪ್ರಮುಖ ವಾಹಿನಿಗಳು ಕೇಬಲ್ ಆಪರೇಟರ್ಗಳಿಗೆ ಸಿಗ್ನಲ್ ತಡೆ ಹಿಡಿದಿವೆ.
ಹೊಸ ಸುಂಕದ ಆದೇಶದ (ಎನ್ಟಿಒ) ಅಡಿಯಲ್ಲಿ, ಪರಿಷ್ಕೃತ ದರದ ಒಪ್ಪಂದಕ್ಕೆ ಸಹಿ ಹಾಕದ ಕಾರಣಕ್ಕೆ ವಾಹಿನಿಗಳು ಈ ನಿರ್ಧಾರಕ್ಕೆ ಬಂದಿವೆ.
‘ಎನ್ಟಿಒ’ ಅಡಿಯಲ್ಲಿ ಪರಿಷ್ಕೃತ ದರವು ಶೇಕಡ 25 ರಿಂದ 35ಕ್ಕೆ ಹೆಚ್ಚಳಗೊಳ್ಳುತ್ತದೆ. ಗ್ರಾಹಕರ ಮೇಲೆ ಹೊರೆ ಬೀಳುತ್ತದೆ ಎಂದು ಡಿಜಿಟಲ್ ಕೇಬಲ್ ಟೆಲಿವಿಷನ್ ಆಪರೇಟರ್ಗಳ ಸಂಘ ‘ಆಲ್ ಇಂಡಿಯಾ ಡಿಜಿಟಲ್ ಕೇಬಲ್ ಫೆಡರೇಶನ್ (ಎಐಡಿಸಿಎಫ್)’ ಆರೋಪಿಸಿದ್ದು, ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದೆ.
ಪರಿಷ್ಕೃತ ದರಕ್ಕೆ ಸಹಿ ಹಾಕುವಂತೆ ಮನರಂಜನಾ ವಾಹಿನಿಗಳು ಫೆ.15 ರಂದು ಕೇಬಲ್ ಆಪರೇಟರ್ಗಳು/ಮಲ್ಟಿ ಸಿಸ್ಟಮ್ ಆಪರೇಟರ್ಗಳಿಗೆ ನೋಟಿಸ್ ಜಾರಿ ಮಾಡಿದ್ದವು. ಆದರೆ, ಕೇಬಲ್ ಆಪರೇಟರ್ಗಳು ನೋಟಿಸ್ ಅನ್ನು ನಿರ್ಲಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಮನರಂಜನಾ ವಾಹಿನಿಗಳು ಸಿಗ್ನಲ್ ನಿಲ್ಲಿಸಿವೆ. ವಾಹಿನಿಗಳ ಈ ಕ್ರಮದಿಂದಾಗಿ ದೇಶದಾದ್ಯಂತ ಸುಮಾರು 4.5 ಕೋಟಿ ಕೇಬಲ್ ಟಿವಿ ಕುಟುಂಬಗಳಿಗೆ ಸೇವೆಯಲ್ಲಿ ಅಡಚಣೆಯಾಗಿದೆ.
‘ಮನರಂಜನಾ ವಾಹಿಗಳು ಪ್ರಸ್ತಾಪಿಸಿದ ಪರಿಷ್ಕೃತ ದರದಲ್ಲಿ ವಿಪರೀತ ಏರಿಕೆಯಾಗಿದೆ. ಇದರಿಂದ ಗ್ರಾಹಕರಿಗೆ ಶೇ 60ರಷ್ಟು ಹೊರಾಂಗಲಿದೆ’ ಎಂದು ಕೇಬಲ ಟಿ.ವಿ ಆಪರೇಟರ್ಗಳು ಹೇಳಿದ್ದಾರೆ.
ಫೆಬ್ರುವರಿಯಲ್ಲಿ ಜಾರಿಗೆ ಬಂದಿರುವ ಎನ್ಟಿಒ 3.0ರಲ್ಲಿ ಜನಪ್ರಿಯ ವಾಹಿನಿಗಳ ದರದಲ್ಲಿ ಶೇಕಡ 15 ರಷ್ಟು ಹೆಚ್ಚಳವಾಗಿದೆ.
ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್ನವರು: ಪ್ರತಿಪಕ್ಷ…
ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…
ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…
ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…
ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…