ಮೈಸೂರು ವಿ.ವಿ. 100ನೇ ಘಟಿಕೋತ್ಸವ: ಉನ್ನತ ಶಿಕ್ಷಣದ ಮಹತ್ವ ತಿಳಿಸಿದ ಪ್ರಧಾನಿ ಮೋದಿ
ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಭಾಷಣ ಮಾಡಿದರು.
ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ʻಎಲ್ಲರಿಗೂ ದಸರಾ ಮಹೋತ್ಸವದ ಶುಭಾಶಯಗಳು… ಪದವಿ ಸ್ವೀಕರಿಸಿದ ಎಲ್ಲ ಅಭ್ಯರ್ಥಿಗಳಿಗೂ ಅಭಿನಂದನೆಗಳು…ʼ ಎಂದು ಮಾತನಾಡಿದರು.
#WATCH PM at Mysore University convocation, “Efforts in higher education aimed not only towards opening new institutes but also to ensure governance reforms & gender, social participation. IIMs given more power. National Medical Commission formed for transparency in education…” pic.twitter.com/QP2KwJrjsa
— ANI (@ANI) October 19, 2020
ಮೈಸೂರು ವಿಶ್ವವಿದ್ಯಾನಿಲಯ ರೂಪುಗೊಳ್ಳುವಲ್ಲಿ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯನ್ನು ಸ್ಮರಿಸಿದರು. ಇದೇ ವೇಳೆ ಭಾರತ ರತ್ನ ಡಾ.ಸರ್ವೇಪಲ್ಲಿ ರಾಧಾಕೃಷ್ಣ ಅವರ ಸಾಧನೆಯನ್ನೂ ಕೊಂಡಾಡಿದರು.
ಕೋವಿಡ್-19 ಕಾರಣದಿಂದಾಗಿ ಹಲವು ನಿರ್ಬಂಧಗಳು ಇರಬಹುದು. ಆದರೆ, ಆಚರಣೆಯ ಉತ್ಸಾಹ ಇದ್ದೇ ಇದೆ. ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿದೆ. ಪ್ರವಾಹದಿಂದ ತೊಂದರೆಗೆ ಒಳಗಾದ ಕುಟುಂಬಗಳಿಗೆ ನನ್ನ ಸಹಾನುಭೂತಿ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನೆರೆ ಪರಿಹಾರ ನೀಡಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.
#WATCH PM addresses convocation of Mysore University “Never before had there been such four-dimensional reforms in country. Earlier when decision were taken one sector used to benefit but others used to be left behind. In last 6 yrs multiple reforms in multiple sectors were done” pic.twitter.com/C1WsU4kp0y
— ANI (@ANI) October 19, 2020
ʻಉನ್ನತ ಶಿಕ್ಷಣದ ಪ್ರಯತ್ನಗಳು ಹೊಸ ಸಂಸ್ಥೆಗಳನ್ನು ತೆರೆಯುವ ಉದ್ದೇಶದಿಂದ ಕೂಡಿರುವುದು ಮಾತ್ರವಲ್ಲದೆ, ಆಡಳಿತದಲ್ಲಿ ಸುಧಾರಣೆಗಳು ಮತ್ತು ಲಿಂಗ, ಸಾಮಾಜಿಕ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ. ಈ ನಿಟ್ಟಿನಲ್ಲಿ ಐಐಎಂಗಳು ಹೆಚ್ಚಿನ ಶಕ್ತಿಯನ್ನು ನೀಡಿವೆ. ಶಿಕ್ಷಣದಲ್ಲಿ ಪಾರದರ್ಶಕತೆಗಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ರಚಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಯನ್ನು ತರಲು ಒಂದು ದೊಡ್ಡ ಉಪಕ್ರಮವಾಗಿದೆ. ನಮ್ಮ ಸಮರ್ಥ ಯುವಕರನ್ನು ಇನ್ನಷ್ಟು ಸ್ಪರ್ಧಾತ್ಮಕವಾಗಿಸಲು, ಬಹುಆಯಾಮದ ವಿಧಾನವನ್ನು ಕೇಂದ್ರೀಕರಿಸಲಾಗುತ್ತಿದೆ. ಉದ್ಯೋಗದ ಸ್ವರೂಪವನ್ನು ಬದಲಿಸಲು ಯುವಕರನ್ನು ಹೊಂದಿಕೊಳ್ಳುವ ಮತ್ತು ಹೊಂದಿಕೊಳ್ಳುವಂತೆ ಮಾಡುವುದು ಪ್ರಯತ್ನದ್ದಾಗಿದೆ ಎಂದು ತಿಳಿಸಿದರು.