ರಾಷ್ಟ್ರೀಯ

Union Budget-2024: ಸರ್ಕಾರದ ಆದಾಯ ಮತ್ತು ಖರ್ಚು ಹೇಗೆ? ಇಲ್ಲಿದೆ ನೋಡಿ

ನವದೆಹಲಿ : ಈ ಬಾರಿಯ ಮಧ್ಯಂತರ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ಘೋಷಣೆಗಳನ್ನು ಮಾಡಿಲ್ಲ. ಹಿಂದಿನ ವರ್ಷಗಳಲ್ಲಿ ಆಗಿರುವ ಸಾಧನೆ, ಮುಂದಿನ ದಶಕಗಳಲ್ಲಿ ಸರ್ಕಾರ ಇಟ್ಟಿರುವ ಅಭಿವೃದ್ಧಿ ಗುರಿ, ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ದೂರದೃಷ್ಟಿಯ ಯೋಜನೆ ಇತ್ಯಾದಿ ಕಡೆ ಬಜೆಟ್ ಗಮನ ಕೊಟ್ಟಿದೆ.

ಬಜೆಟ್‌ ಮಂಡನೆ ಮತ್ತು ಅದರ ಆದಾಯ ಮತ್ತು ಖರ್ಚು ಹೇಗೆ? ಸರ್ಕಾರದ ಹಣ ಯಾವ್ಯಾವುದಕ್ಕೆ ವ್ಯಯವಾಗುತ್ತದೆ, ಸರ್ಕಾರಕ್ಕೆ ಬರುವ ಆದಾಯ ಎಷ್ಟು, ಅದು ಎಲ್ಲಿಗೆ ಹರಿದುಹೋಗುತ್ತದೆ ಎಂಬಿತ್ಯಾದಿ ವಿವರಗಳು ಇಲ್ಲಿದೆ.

ಸರ್ಕಾರಕ್ಕೆ ಹಣದ ಹರಿವು ಎಲ್ಲೆಲ್ಲಿಂದ?
ಸಾಲಗಳಿಂದ: ಶೇ. 28
ಆದಾಯ ತೆರಿಗೆ: ಶೇ. 19
ಕೇಂದ್ರ ಅಬಕಾರಿ ಸುಂಕ: ಶೇ. 5
ಕಾರ್ಪೊರೇಶನ್ ತೆರಿಗೆ: ಶೇ. 17
ಜಿಎಸ್​ಟಿ ಮತ್ತಿತರ ತೆರಿಗೆ: ಶೇ. 18
ತೆರಿಗೆಯೇತರ ಸ್ವೀಕೃತಿ: ಶೇ. 7
ಸಾಲವಲ್ಲದ ಬಂಡವಾಳ ಸ್ವೀಕೃತಿ: ಶೇ. 1
ಆಮದು ಸುಂಕ ಅಥವಾ ಕಸ್ಟಮ್ಸ್: ಶೇ. 4

ಸರ್ಕಾರದಿಂದ ಹಣದ ವೆಚ್ಚ ಎಲ್ಲಿಗೆ?
ಬಡ್ಡಿ ಪಾವತಿ: ಶೇ. 20
ಕೇಂದ್ರದ ಪ್ರಾಯೋಜಿತ ಯೋಜನೆಗಳು: ಶೇ. 8
ಪಿಂಚಣಿ: ಶೇ. 4
ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆ: ಶೇ. 20
ಹಣಕಾಸು ಆಯೋಗ ಮತ್ತಿತರ ವರ್ಗಾವಣೆ: ಶೇ. 8
ಕೇಂದ್ರ ವಲಯ ಸ್ಕೀಮ್​ಗಳು: ಶೇ. 16
ಸಬ್ಸಿಡಿ: ಶೇ. 6
ರಕ್ಷಣಾ ವಲಯ: ಶೇ. 8

ಯಾವ್ಯಾವ ಇಲಾಖೆಗೆ ಎಷ್ಟು ಹಣ ನಿಯೋಜನೆ
ರಕ್ಷಣಾ ಸಚಿವಾಲಯ: 6.2 ಲಕ್ಷ ಕೋಟಿ ರೂ
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ: 2.78 ಲಕ್ಷ ಕೋಟಿ ರೂ
ರೈಲ್ವೆ ಸಚಿವಾಲಯ: 2.55 ಲಕ್ಷ ಕೋಟಿ ರೂ
ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ: 2.13 ಲಕ್ಷ ಕೋಟಿ ರೂ
ಗೃಹ ವ್ಯವಹಾರಗಳ ಸಚಿವಾಲಯ: 2.03 ಲಕ್ಷ ಕೋಟಿ ರೂ
ಗ್ರಾಮೀಣಾಭಿವೃದ್ಧಿ ಸಚಿವಾಲಯ: 1.77 ಲಕ್ಷ ಕೋಟಿ ರೂ
ರಾಸಾಯನಿಕ ಮತ್ತು ರಸಗೊಬ್ಬರ: 1.68 ಲಕ್ಷ ಕೋಟಿ ರೂ
ಸಂವಹನ ಸಚಿವಾಲಯ: 1.37 ಲಕ್ಷ ಕೋಟಿ ರೂ
ಕೃಷಿ ಮತ್ತು ರೈತರ ಕಲ್ಯಾಣ: 1.27 ಲಕ್ಷ ಕೋಟಿ ರೂ

ಪ್ರಮುಖ ಯೋಜನೆಗಳಿಗೆ ಸಿಕ್ಕ ಹಣ
ಮನ್​ರೇಗಾ ಯೋಜನೆ: 60,000 ರಿಂದ 86,000 ಕೋಟಿ ರೂಗೆ ಏರಿಕೆ
ಆಯುಷ್ಮಾನ್ ಭಾರತ್: 7,200 ರಿಂದ 7,500 ಕೋಟಿ ರೂಗೆ ಏರಿಕೆ
ಪಿಎಲ್​ಐ ಸ್ಕೀಮ್: 4,645ರಿಂದ 6,200 ಕೋಟಿ ರೂಗೆ ಏರಿಕೆ
ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಯೋಜನೆ: 3,000ದಿಂದ 6,903 ಕೋಟಿ ರೂಗೆ ಏರಿಕೆ
ಸೌರ ವಿದ್ಯುತ್: 4,970ರಿಂದ 8,500 ಕೋಟಿ ರೂಗೆ ಏರಿಕೆ
ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್: 297ರಿಂದ 600 ಕೋಟಿ ರೂಗೆ ಏರಿಕೆ

andolanait

Recent Posts

ಓದುಗರ ಪತ್ರ: ಮೇಕೆ.. ಡಿಕೆ !

ಮೇಕೆ.. ಡಿಕೆ ! ಅಂದು, ಹರಿಯುವ ಕಾವೇರಿ ನದಿಯ ಈ ಕಡೆಯಿಂದ ಆ ಕಡೆಗೆ ಜಿಗಿದು ದಾಟಿ ಬಿಟ್ಟಿತಂತೆ ಮೇಕೆ…

14 hours ago

ಓದುಗರ ಪತ್ರ: ಮಂತ್ರಾಲಯ ಮಠದ ಕಾರ್ಯ ಜನಮೆಚ್ಚುವಂತಹದ್ದು

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಸುಮಾರು ೪೦ ಎಕರೆ ಪ್ರದೇಶದಲ್ಲಿ ಜಲಾಶಯ…

15 hours ago

ಓದುಗರ ಪತ್ರ: ಕಾವೇರಿ: ಶಾಶ್ವತ ಪರಿಹಾರ ಅಗತ್ಯ

ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ ೧೫ ದಿನಗಳ ಕಾಲ, ಪ್ರತಿ ದಿನ ೩,೫೦೦ ಕ್ಯೂಸೆಕ್…

15 hours ago

ಕಾಯಕಲ್ಪಕ್ಕೆ ಕಾದಿವೆ ನಿರ್ಲಕ್ಷಿತ ಸರ್ಕಾರಿ ಆಸ್ತಿಗಳು

ವಸಂತಕುಮಾರ್ ಮೈಸೂರು ಮಠ, ಸಾಮಾಜಿಕ ಹೋರಾಟಗಾರ ಮೈಸೂರಿನಲ್ಲಿ ಹಲವೆಡೆ ದುಸ್ಥಿತಿಯಲ್ಲಿರುವ ಹಾಗೂ ಅನೈರ್ಮಲ್ಯ ತಾಣವಾಗಿರುವ ಹಲವು ಸರ್ಕಾರಿ ಕಟ್ಟಡಗಳು, ವಾಚನಾಲಯ…

15 hours ago

ಮೀಸಲಾತಿ ಸೌಲಭ್ಯಕ್ಕೆ ವಿರೋಧವೇಕೆ?

ಟಿ.ಕೆ.ಹರೀಶ್ ಸಾಮಾಜಿಕ ನ್ಯಾಯ ಒದಗಿಸುವ ಸಂವಿಧಾನಾತ್ಮಕ ವ್ಯವಸ್ಥೆ ಮೀಸಲಾತಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಸಾಮಾಜಿಕ ನ್ಯಾಯದ ಸಾಧನವಾಗಿ ಜಾರಿಗೆ ತರಲಾಗಿದೆ.…

15 hours ago

ಬಿರುಕು ಬಿಡುತ್ತಿರುವ ಕೆರೆ ಕೋಡಿಯ ಗೋಡೆ

ದೂರ ನಂಜುಂಡಸ್ವಾಮಿ ದೂರ ಗ್ರಾಮದ ಕೆರೆಯ ಪೂರ್ವಭಾಗದ ಕೋಡಿಯನ್ನು ದುರಸ್ತಿಪಡಿಸಿ, ಹೂಳು ತೆಗೆಯಲು ಆಗ್ರಹ ದೂರ: ಮೈಸೂರು ತಾಲ್ಲೂಕಿನ ಜಯಪುರ…

18 hours ago