ರಾಷ್ಟ್ರೀಯ

ಪಾರ್ಲಿಮೆಂಟ್‌ ಭದ್ರತಾ ಲೋಪ: ಆರೋಪಿಗಳ ವಿರುದ್ಧ UAPA  ಅಡಿ ಪ್ರಕರಣ ದಾಖಲು!

ನವದೆಹಲಿ : ಡಿಸೆಂಬರ್‌ ೧೩ (ಅಧಿವೇಶನದ ೮ ನೇ ದಿನ) ರಂದು ಸಂಸತ್‌ ಭದ್ರತೆ ಉಲ್ಲಂಘಿಸಿದ ೬ ಜನರ ಪೈಕಿ ಐವರ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಹಳೇ ಸಂಸತ್‌ ಮೇಲೆ ೨೧ ವರ್ಷಗಳ ಹಿಂದೆ ಉಗ್ರರು ದಾಳಿ ನಡೆಸಿದ್ದರು. ಅದೇ ದಿನವಾದ ಬುಧವಾರ ನೂತನ ಸಂಸತ್‌ ಮೇಲೆ ಕಲಾಪದ ವೇಳೆಯಲ್ಲಿ, ಇಬ್ಬರು ಪ್ರೇಕ್ಷಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು, ಘೋಷಣೆ ಕೂಗತೊಡಗಿದರು. ಅಲ್ಲದೇ ಹಳದಿ ಬಣ್ಣದ ಸ್ಮೋಕ್‌ ಕ್ಯಾನ್‌ಗಳನ್ನು ಹರಡಿದ್ದರು. ಈ ಇಬ್ಬರನ್ನು ತಕ್ಷಣವೇ ಪೊಲೀಸರು ಬಂಧಿಸಿದ್ದರು.

ಲೋಕಸಭೆಯ ಭದ್ರತೆಯನ್ನು ಉಲ್ಲಂಘಿಸಿದವರ ವಿರುದ್ಧ ಯುಎಪಿಎ ( ಲೋಕಸಭಾ ಭದ್ರತಾ ಉಲ್ಲಂಘನೆ) ಅಡಿಯಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇವರೆಲ್ಲರು ಭಗತ್‌ ಸಿಂಗ್‌ ಫ್ಯಾನ್‌ ಕ್ಲಬ್‌ ಎಂಬ ಸಾಮಾಜಿಕ ಜಾಲತಾಣದಲ್ಲಿನ ಪೇಜ್‌ನಲ್ಲಿ ಸಂಬಂಧ ಹೊಂದಿದ್ದರು. ಮೈಸೂರಿನಲ್ಲಿ ಸುಮಾರು ಒಂದೂವರೆ ವರ್ಷಗಳ ಹಿಂದೆಯೇ ಎಲ್ಲರೂ ಭೇಟಿಯಾಗಿದ್ದರು. ಕಳೆದ ೯ ತಿಂಗಳ ಹಿಂದೆ ಸಂಸತ್‌ ಪ್ರವೇಶಿಸುವ ಬಗ್ಗೆ ಭೆಟಿಯಾಗಿ ಚರ್ಚಿಸಿದ್ದರು. ಡಿಸೆಂಬರ್‌ ೧೦ ರಂದು ಎಲ್ಲರೂ ತಮ್ಮ ತಮ್ಮ ರಾಜ್ಯಗಳಿಂದ ಹೊರಟು ದೆಹಲಿ ತಲುಪಿದರು. ದೆಹಲಿಯ ಗುರುಗ್ರಾಮ್‌ನಲ್ಲಿರುವ ವಿಕ್ಕಿ ಅವರ ಮನೆಯಲ್ಲಿ ಉಳಿದುಕೊಂಡರು. ಇದರಲ್ಲಿ ಅಮೋಲ್‌ ಮಹಾರಾಷ್ಟ್ರದಿಂದ ಸ್ಮೋಕ್‌ ಬಾಂಬ್‌ ತಂದಿದ್ದ ಎನ್ನಲಾಗಿದೆ.

ಈ ಎಲ್ಲಾ ಐವರು ಇಂಡಿಯಾ ಗೇಟ್‌ ಬಳಿ ಭೇಟಿಯಾಗಿದ್ದರು. ಅಲ್ಲಿ ಬಣ್ಣದ ಪಟಾಕಿಗಳನ್ನು ಖರೀದಿಸಿದರು. ನಂತರ ೧೨ ಗಂಟೆಗೆ ಪ್ರವೇಶಿಸಿ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಸ್ಮೋಕ್‌ ಕ್ಯಾನ್‌ ತೆಗೆದರು. ಅಲ್ಲದೇ ಮತ್ತೊಬ್ಬ ಸದನದಲ್ಲಿ ಹಳದಿ ಬಣ್ಣ ಎರಚಿದನು.

೨೦೦೧ರ ಡಿಸೆಂಬರ್‌ ನಲ್ಲಿ ನಡೆದ ಉಗ್ರರ ದಾಳಿಯ ನಡುವೆ ಈ ಭದ್ರತಾ ಲೋಪ ಕಂಡುಬಂದಿದೆ. ಸಂಸತ್‌ ನಲ್ಲಿ ೪ ಲೇಯರ್‌ ಭದ್ರತೆ ಇದ್ದೂ ಸಹಾ ಅದನ್ನು ಬೇಧಿಸಿ ಈ ಘಟನೆ ನಡೆದದ್ದು ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಇದಲ್ಲದೇ ಜುಲೈನಲ್ಲಿ ನಡೆದ ಸದನಕ್ಕೆ ಭೇಟಿ ನೀಡಲು ಲಕ್ನೋ ದಿಂದ ಸಾಗ್‌ ಶರ್ಮಾ ಅವರು ಬಂದಿದ್ದರು, ಆದರೆ ಒಳಗೆ ಪ್ರವೇಶ ನಿರಾಕರಿಸಿದ ಹಿನ್ನಲೆಯಲ್ಲಿ ಹೊರಗೆ ನಿಂತು ಸದನ ವೀಕ್ಷಿಸಿ ವಾಪಾಸ್ಸಾಗಿದ್ದ ಎನ್ನಲಾಗಿದೆ.

andolanait

Recent Posts

ಮಹಿಳಾ ಉದ್ಯೋಗಿಗೆ ಕಿರುಕುಳ : ಕಾರ್ಖಾನೆ ಮಾಲೀಕನ ವಿರುದ್ದ ದೂರು

ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…

6 mins ago

ಚಾಮುಂಡೇಶ್ವರಿ ದರ್ಶನ : ಸೇವಾ ಶುಲ್ಕ ಏರಿಕೆಗೆ ಖಂಡನೆ

ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…

11 mins ago

ಮೂರು ತಿಂಗಳಲ್ಲಿ ಪಿಎಸ್‌ಐ ಖಾಲಿ ಹುದ್ದೆ ಭರ್ತಿ : ಗೃಹ ಸಚಿವ ಪರಮೇಶ್ವರ್‌

ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…

15 mins ago

ಋತುಚಕ್ರದ ರಜೆ : ತನ್ನದೆ ತಡೆಯಾಜ್ಞೆ ಹಿಂಪಡೆದ ನ್ಯಾಯಮೂರ್ತಿ…!

ಬೆಂಗಳೂರು : ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವಂತೆ…

20 mins ago

ಜಪಾನ್‌ನಲ್ಲಿ ಪ್ರಬಲ ಭೂಕಂಪ : ಸುನಾಮಿ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಟೋಕಿಯೋ : ಜಪಾನ್‌ನ ಪೂರ್ವ ಮತ್ತು ಉತ್ತರ ಕರಾವಳಿ ತೀರದಲ್ಲಿ ೭.೬ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಡೀ ಪ್ರದೇಶವನ್ನೇ…

22 mins ago

ಪ್ರವಾಸಿತಾಣ ಉತ್ತೇಜಿಸಲು ಪ್ರವಾಸಿ ಗೈಡ್‌, ಮ್ಯಾಪ್‌ ಸಿದ್ದ : ಮಂಡ್ಯದಲ್ಲಿ 106 ಪ್ರವಾಸಿ ತಾಣಗಳ ಪರಿಗಣನೆ

ಮಂಡ್ಯ : ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಗುರುತಿಸಿರುವ ಹೆಗ್ಗಳಿಕೆ ಮಂಡ್ಯ ಜಿಲ್ಲೆಗೆ ಬಂದಿದ್ದು, ಪ್ರವಾಸಿ ತಾಣಗಳನ್ನು ಉತ್ತೇಜಿಸಲು…

30 mins ago