ರಾಷ್ಟ್ರೀಯ

ಷೇರು ಮಾರುಕಟ್ಟೆಯಲ್ಲಿ ಹಾಂಕಾಂಗ್‌ನ ಹಿಂದಿಕ್ಕಿದ ಭಾರತ: ಮತ್ತೊಂದು ದಾಖಲೆ ನಿರ್ಮಿಸಿದ ಭಾರತ!

 ನವದೆಹಲ: ಭಾರತ, ಷೇರುಪೇಟೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಹಾಂಗ್‌ಕಾಂಗ್‌ ಮಾರ್ಕೆಟ್‌ನ ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಸ್ಟಾಕ್‌ಮಾರ್ಕೆಟ್‌ ಅನ್ನೋ ಸಾಧನೆ ಮಾಡಿದೆ.

ಮಂಗಳವಾರ ಹಾಂಗ್‌ಕಾಂಗ್‌ ಷೇರುಪೇಟೆಯಲ್ಲಿ ದಾಖಲಾದ ಎಲ್ಲ ಷೇರುಗಳ ಮೊತ್ತ 4.29 ಬಿಲಿಯನ್‌ ಡಾಲರ್‌ ಆಗಿದ್ರೆ, ಭಾರತದ ಷೇರುಗಳ ಮೌಲ್ಯ 4.33 ಟ್ರಿಲಿಯನ್‌ ಡಾಲರ್‌ ಆಗಿದೆ.

ಇದೇ ಮೊದಲ ಬಾರಿಗೆ 4 ಟ್ರಿಲಿಯನ್‌ ಡಾಲರ್‌ ಮಾರ್ಕ್‌ನ್ನ ಕ್ರಾಸ್‌ ಮಾಡಿದೆ. ಇದ್ರಲ್ಲಿ ಕಳೆದೆರಡು ವರ್ಷಗಳಲ್ಲೇ 2 ಟ್ರಿಲಿಯನ್‌ ಡಾಲರ್‌ ಮೌಲ್ಯದ ಷೇರುಗಳು ಸೇರಿವೆ.

ಅಂದ್ಹಾಗೆ ಇತ್ತೀಚಿನ ವರ್ಷಗಳಲ್ಲಿ ಭಾರತ ಮಾರ್ಕೆಟ್‌ ಹೂಡಿಕೆದಾರರ ಡಾರ್ಲಿಂಗ್‌ ಆಗ್ತಿದೆ. ಕಾರ್ಪೊರೇಟ್‌ ವಲಯದಲ್ಲಿ ಒಳ್ಳೇ ಆದಾಯ ಬರ್ತಿರೋದ್ರಿಂದ ರಿಟೇಲ್‌ ಹೂಡಿಕೆದಾರರ ಬೇಸ್‌ ಜಾಸ್ತಿಯಾಗ್ತಿದೆ.

ಇದೆ ವೇಳೆ ಅತ್ತ ಕೋವಿಡ್‌ ರೆಸ್ಟ್ರಿಕ್ಷನ್ಸ್‌, ಕಂಪನಿಗಳ ಮೇಲೆ ಚೀನಿ ಸರ್ಕಾರದ ಹಿಡಿತ, ಪ್ರಾಪರ್ಟಿ ಸೆಕ್ಟರ್‌ನ ಬಿಕ್ಕಟ್ಟು, ಜಿಯೋಪಾಲಿಟಿಕಲ್‌ ಉದ್ವಿಗ್ನತೆಯಿಂದ ಚೀನಾ ಮಾರ್ಕೆಟ್‌ ಡೌನ್‌ ಆಗ್ತಿದೆ.

ಚೀನಾದ ಹೆಸರಾಂತ ಕಂಪನಿಗಳು ಲಿಸ್ಟ್‌ ಆಗಿರೋ ಹಾಂಗ್‌ಕಾಂಗ್‌ ಮಾರ್ಕೆಟ್‌ ಬೀಳ್ತಾ ಇದೆ. 2021ರಿಂದ ಹಾಂಗ್‌ಕಾಂಗ್‌ ಮಾರ್ಕೆಟ್‌ ವ್ಯಾಲೂವೇಷನ್‌ನಲ್ಲಿ 6 ಟ್ರಿಲಿಯನ್‌ ಡಾಲರ್‌ ನೀರಿನಂತೆ ಹರಿದು ಹೋಗಿದೆ.

ಹೀಗಾಗಿ ವಿದೇಶಿ ಹೂಡಿಕೆದಾರರು ಭಾರತದತ್ತ ಮುಖ ಮಾಡಿದ್ದಾರೆ. ಕಳೆದ ವರ್ಷ ಸುಮಾರು 21 ಬಿಲಿಯನ್‌ ಡಾಲರ್‌ ಭಾರತದಲ್ಲಿ ಇನ್ವೆಸ್ಟ್‌ ಮಾಡಿದ್ದಾರೆ.

andolanait

Recent Posts

ಶೇ.56ರಷ್ಟು ಮೀಸಲಾತಿ | 9ನೇ ಶೆಡ್ಯೂಲ್‌ಗೆ ಸೇರಿಸಲು ವಿ.ಎಸ್.ಉಗ್ರಪ್ಪ ಆಗ್ರಹ

ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ…

12 hours ago

Padma Award | ಧರ್ಮೇಂದ್ರಗೆ ಪದ್ಮವಿಭೂಷಣ, ಮಮ್ಮುಟಿಗೆ ಪದ್ಮಭೂಷಣ ಪ್ರಶಸ್ತಿ

ಹೊಸದಿಲ್ಲಿ : ಹಿರಿಯ ನಟ ಧರ್ಮೇಂದ್ರ, ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ, ಬಂಗಾಳಿ…

12 hours ago

ನ್ಯಾಯಾಂಗ ಸ್ವಾತಂತ್ರ್ಯಕ್ಕೆ ʼಆಂತರಿಕ ಅಪಾಯʼ : ಸುಪ್ರೀಂ ನ್ಯಾಯಾಧೀಶರಿಂದ ಕಾರ್ಯಾಂಗದ ಬಗ್ಗೆ ಅಸಮಾಧಾನ

ಹೊಸದಿಲ್ಲಿ : ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, ‘ಆಂತರಿಕ ವ್ಯವಸ್ಥೆ’ಯಿಂದಲೇ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್…

12 hours ago

ಅಧಿಕಾರಿಗಳು ಜನಪ್ರತಿನಿಧಿಗಳ ಕರೆ ಸ್ವೀಕರಿಸಿ : ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ಮುಖ್ಯಕಾರ್ಯದರ್ಶಿ ಖಡಕ್ ಸೂಚನೆ

ಬೆಂಗಳೂರು : ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ…

14 hours ago

ಬುದ್ಧಗಯಾ ವಿಮೋಚನಾ ಚಳವಳಿ ಬೆಂಬಲಿಸಿ

ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…

14 hours ago

ಮೈಸೂರಲ್ಲಿ ಸಂಭ್ರಮದ ರಥಸಪ್ತಮಿ

ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…

14 hours ago