ದೆಹಲಿ: ಇಡಿ ವಶದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪರ ಅವರ ಪತ್ನಿ ಸುನೀತಾ ಶುಕ್ರವಾರ ವಾಟ್ಸಾಪ್ ಮೂಲಕ ಕೇಜ್ರಿವಾಲ್ ಕೋ ಆಶೀರ್ವಾದ್(ಕೇಜ್ರಿವಾಲ್ ಅವರನ್ನು ಆಶೀರ್ವದಿಸಿ) ಎನ್ನುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ದೇಶದಲ್ಲಿರುವ ದುಷ್ಟಶಕ್ತಿ ಹಾಗೂ ಸಾರ್ವಾಧಿಕಾರಿ ಶಕ್ತಿಗಳ ವಿರುದ್ಧ ಕೇಜ್ರಿವಾಲ್ ಹೋರಾಡುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರು ತಮ್ಮ ಆಶೀರ್ವಾದ ಮತ್ತು ಪಾರ್ಥನೆಯ ಮೂಲಕ ಕೇಜ್ರಿವಾಲ್ ಅವರನ್ನು ಬೆಂಬಲಿಸುವಂತೆ ಸುನೀತಾ ಕೇಜ್ರಿವಾಲ್ ಕೋರಿದ್ದಾರೆ.
ನನಗೆ ಅನೇಕ ಕರೆಗಳು ಬಂದವು ಅನೇಕ ಜನರು ಅರವಿಂದ್ ಕೇಜ್ರಿವಾಲ್ಗಾಗಿ ಉಪವಾಸ ಮಾಡುತ್ತಿದ್ದರು. ೮೨೯೭೩೨೪೬೨೪ ಈ ವಾಟ್ಸಾಪ್ ಸಂಖ್ಯೆ ಮೂಲಕ ನಿಮ್ಮ ಪ್ರೀತಿಯ ಸಂದೇಶ ಬರೆದು ಕಳುಹಿಸಿ. ನಿಮ್ಮ ಸಂದೇಶಗಳನ್ನು ಓದುವಾಗ ಅವರಿಗೆ ಖುಷಿಯಾಗುತ್ತದೆ.
ಜೈಲಿನಲ್ಲಿರುವ ಅವರಿಗೆ ಎಲ್ಲ ಸಂದೇಶಗಳನ್ನು ತಲುಪಿಸುತ್ತೇನೆ ಎಂದು ಸುನೀತಾ ಹೇಳಿದ್ದಾರೆ. ಕೇಜ್ರಿವಾಲ್ ಅವರಿಗೆ ಸಂದೇಶ ಕಳುಹಿಸಲು ನೀವು ಎಎಪಿ ಕಾರ್ಯಕರ್ತರಾಗಿರಬೇಕಿಲ್ಲ. ನೀವು ಯಾವ ಪಕ್ಷದಲ್ಲಿದ್ದರೂ ಅರವಿಂದ್ ಕೇಜ್ರಿವಾಲ್ ಅವರಿಗೆ ಸಂದೇಶಗಳನ್ನು ಕಳುಹಿಸಿ ಎಂದು ಸುನೀತಾ ಮನವಿ ಮಾಡಿದ್ದಾರೆ.
ನವೀನ್ ಡಿಸೋಜ ಕೊಡಗಿನ ಹೋಂಸ್ಟೇವೊಂದರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಬೆನ್ನಲ್ಲೇ ಕ್ರಮ; ಜಂಟಿ ಸರ್ವೇ ಆರಂಭ ಮಡಿಕೇರಿ: ಹೋಂಸ್ಟೇಗಳಿಗೆ…
ಭೇರ್ಯ ಮಹೇಶ್ ಬರಪೀಡಿತ ತಾಲ್ಲೂಕುಗಳು ಎಂದು ಘೋಷಿಸಲು ರೈತ ಮುಖಂಡರ ಆಗ್ರಹ ಕೆ.ಆರ್.ನಗರ: ಜಿಲ್ಲೆಯಲ್ಲಿ ಭತ್ತದ ಕಣಜ ಎಂದೇ ಪ್ರಸಿದ್ಧಿಯಾಗಿರುವ…
ಕೆ.ಬಿ.ರಮೇಶನಾಯಕ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿಗೆ ಸಹಕಾರಿ; ಸ್ಥಳೀಯ ಉತ್ಪನ್ನಗಳ ಮಾರಾಟ, ಆದಾಯ, ಆರೋಗ್ಯ ವೃದ್ಧಿ ಮೈಸೂರು: ಜಗತ್ತಿಗೆ ಯೋಗವನ್ನು ಪರಿಚಯಿಸಿಕೊಡುವ…
ಎಚ್.ಎಸ್.ದಿನೇಶ್ಕುಮಾರ್ ಮೈಸೂರು: ಎರಡು ದಿನಗಳ ಹಿಂದೆ ಸುರಿದ ಮಳೆಗೆ ಮೈಸೂರು ನಗರದ ಹಲವೆಡೆ ಮರಉರುಳಿರುವುದೂ ಸೇರಿದಂತೆ ಅನೇಕ ಅನಾಹುತಗಳು ನಡೆದಿದೆ.…
ಮೈಸೂರು : ಕೆಎಸ್ಆರ್ಟಿಸಿ ನೌಕರರು ಮೇ 20ರಿಂದ ಅನಿಧಿಷ್ಟಾವಧಿಯ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗೆ…