ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ ಉಗ್ರರು ಮುಂಬರುವ ಜನವರಿ.26ರ ಗಣರಾಜ್ಯೋತ್ಸವದಂದು ಭಾರೀ ವಿಧ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿದ್ದು ಬೆಳಕಿಗೆ ಬಂದಿದೆ.
ಈ ಹಿಂದೆ ಇದೇ ಉಗ್ರರು ದೀಪಾವಳಿ ಹಬ್ಬದ ದಿನದಿಂದ ದೆಹಲಿಯ ವಿವಿಧ ಕಡೆ ಬಾಂಬ್ ಸ್ಫೋಟ ನಡೆಸುವ ಸಂಚು ರೂಪಿಸಿದ್ದರು. ಅದಕ್ಕೂ ಆಗಸ್ಟ್.15ರ ಸ್ವಾತಂತ್ರೋತ್ಸವದಂದು ರಕ್ತದೋಕುಳಿ ನಡೆಸಲು ಕಾರ್ಯತಂತ್ರ ರೂಪಿಸಲಾಗಿತ್ತು.
ಈ ಎರಡೂ ಹಬ್ಬಗಳಂದು ಉಗ್ರರು ದೇಶದ ವಿವಿಧೆಡೆ ಸ್ಫೋಟ ನಡೆಸಬಹುದೆಂಬ ಗುಪ್ತಚರ ವಿಭಾಗ ಎಚ್ಚರಿಸಿದ ಹಿನ್ನಲೆಯಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಬಿಗಿಭದ್ರತೆಯನ್ನು ಕೈಗೊಂಡ ಪರಿಣಾಮ ಯೋಜಿತ ಕಾರ್ಯ ವಿಫಲಗೊಂಡಿತ್ತು.
ಇದನ್ನು ಓದಿ: ಕಾರು ಬಾಂಬ್ ಸ್ಫೋಟದ ಹಿಂದಿರುವವರ ವಿರುದ್ಧ ಕಠಿಣ ಕ್ರಮ: ಪ್ರಧಾನಿ ನರೇಂದ್ರ ಮೋದಿ
ಹೇಗಾದರೂ ಮಾಡಿ ಗಣರಾಜ್ಯೋತ್ಸವ ದಿನದಂದು ಬಾಂಬ್ ಸ್ಫೋಟಿಸಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ. ತಮ್ಮ ಯೋಜಿತ ಕಾರ್ಯವು ಅನುಷ್ಠಾನವಾಗುತ್ತದೆ ಎಂದು ಶಂಕಿತರು ಇದಕ್ಕಾಗಿ ಭಾರೀ ಕಾರ್ಯತಂತ್ರ ಹೆಣೆದಿದ್ದರು.
ಇದಕ್ಕಾಗಿಯೇ ಫರೀದಾಬಾದ್ನ ವೈದ್ಯರ ನಿವಾಸದಲ್ಲಿ ಮೂರುವರೆ ಸಾವಿರ ಕೆಜಿ ತೂಕದ ಸ್ಫೋಟಕ ವಸ್ತುಗಳು, ಬಾಂಬ್ಗಳು, ಎ.ಕೆ47 ಸೇರಿದಂತೆ ವಿವಿಧ ಶ್ರೇಣಿಯ ಸ್ಫೋಟಕಗಳ ವಸ್ತುಗಳನ್ನು ಗುಪ್ತಚರ ವಿಭಾಗದ ಮಾಹಿತಿ ಮೇರೆಗೆ ವಶಪಡಿಸಿಕೊಳ್ಳಲಾಯಿತು.
ಮೂಲಗಳ ಪ್ರಕಾರ, ಜನವರಿ 26ರಂದು ದೆಹಲಿಯಲ್ಲಿ ಬಹುಭಯೋತ್ಪಾದಕ ದಾಳಿಗಳನ್ನು ನಡೆಸುವ ಯೋಜನೆಯ ಭಾಗವಾಗಿ ಮುಜಮಿಲ್ ಮತ್ತು ಶಂಕಿತ ಆತ್ಮಹತ್ಯಾ ಬಾಂಬರ್ ಡಾ. ಉಮರ್ ನಬಿ ಈ ವರ್ಷದ ಆರಂಭದಲ್ಲಿ ಕೆಂಪು ಕೋಟೆ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ದೇಶಾದ್ಯಂತ ತಲೆದೋರಿರುವ ಅಡುಗೆ ಅನಿಲ ಅಭಾವದ ಬಿಸಿ ಇದೀಗ ರಾಜ್ಯದ ಅರಣ್ಯಗಳ ಮೇಲೆ ತಟ್ಟುವ…
ಮೈಸೂರು: ಕಳೆದ ನಾಲ್ಕೈದು ದಶಕಗಳ ನನ್ನ ರಾಜಕೀಯ ಬದುಕಿನಲ್ಲಿ ಅನೇಕ ಸೋಲುಗೆಲುವುಗಳನ್ನು ಕಂಡಿದ್ದರೂ, ಜನಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿ…
ಮೈಸೂರು: ನನ್ನ ಉಸಿರು ಇರುವವರೆಗೂ ನಾನು ರಾಜಕೀಯದಲ್ಲೇ ಸಕ್ರಿಯನಾಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವರುಣಾ ವಿಧಾನಸಭಾ ಕ್ಷೇತ್ರದ ವರಕೋಡು…
ಮೈಸೂರು: ಇರಾನ್ ಮತ್ತು ಇಸ್ರೇಲ್ ಯುದ್ಧದ ಪರಿಣಾಮ ಭಾರತದ ಕೃಷಿ ವಲಯದ ಮೇಲೂ ಬಿದ್ದಿದ್ದು, ಕೃಷಿ ಚಟುವಟಿಕೆ ಆರಂಭಿಸುವ ವೇಳೆ…
ಬೆಂಗಳೂರು: ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್ನಿಂದ ಕೋಟ್ಯಂತರ ರೂ. ಹಣವನ್ನು…
ಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಸಚಿವ…