ದೇಶ- ವಿದೇಶ

ಕಳೆದು ಹೋಗಿದ್ದ 4ನೇ ಶತಮಾನದ ಮುತ್ತಿನ ನಗರಿ ಪತ್ತೆ

ನವದೆಹಲಿ: ಪುರಾತನ ಮುತ್ತಿನ ನಗರಿಯೊಂದು ಪತ್ತೆಯಾಗಿರುವುದಾಗಿ ಪುರಾತತ್ವ ಶಾಸ್ತ್ರಜ್ಞರು ತಿಳಿಸಿದ್ದಾರೆ.

ತನ್ನ ಮುತ್ತಿನ ಉದ್ಯಮಕ್ಕೆ ಹಸರುವಾಸಿಯಾಗಿದ್ದ ಪುರಾತನ ನಗರವಾದ ತುವಾಯ್‌ ಅನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಕರಾವಳಿಯಲ್ಲಿ ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ.

ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಯಾದ ಉಮ್-ಅಲ್-ಕ್ವಿನ್‌ ಪ್ರಕಾರ ಪುರಾತನ ಕಾಲದ ಕಟ್ಟಡಗಳನ್ನು ನಗರದಲ್ಲಿ ಶಾಸ್ತ್ರಜ್ಞರು ಪತ್ತೆಹಚ್ಚಿದ್ದು, ಇದು ತುವಾಯ್‌ನ ಐತಿಹಾಸಿಕ ನಗರದ ಭಾಗವಾಗಿತ್ತು ಎಂದು ತಿಳಿಸಿದ್ದಾರೆ.

ತುವಾಯ್‌ ನಗರವು ಐತಿಹಾಸಿಕವಾಗಿ ದಾಖಲಾಗಿದ್ದರೂ ಸ್ಥಳದ ಬಗ್ಗೆ ಈ ಹಿಂದೆ ಮಾಹಿತಿ ಇರಲಿಲ್ಲ. ಯುಎಇಯಲ್ಲಿ ಈ ಕಟ್ಟಡಗಳು ಹಂಚಿಹೋಗಿರಲೂಬಹುದು ಎಂದು ಸಂಶೋಧಕರು ತಿಳಿಸಿದ್ದು, ಸಿನಿಯಾಹ್‌ ದ್ವೀಪದಲ್ಲಿನ ಇತ್ತೀಚಿನ ದ್ವೀಪದಲ್ಲಿನ ಉತ್ಖನನಗಳು ಹಿಂದಿನ ಊಹೆಗಳನ್ನು ತಳ್ಳಿಹಾಕು ಮೂಲಕ ಇದು ನಿಜವಾಗಿಯೂ ತುವಾಯ್‌ನ ಸ್ಥಳವಾಗಿರಬಹುದು ಎಂಬುದಕ್ಕೆ ಬಲವಾದ ಪುರಾವೆಗಳನ್ನು ಒದಗಿಸುತ್ತದೆ.

ಉಮ್-ಅಲ್-ಕ್ವಿನ್‌ನಲ್ಲಿ ಇಟಾಲಿಯನ್‌ ಪುರಾತತ್ವ ಮಿಷನ್‌ ಮುನ್ನಡೆಸುವ ಮತ್ತು ಪೊಲೀಸ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಮೈಕೆಲ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಇದು ನಿಜವಾಗಿಯೂ ರೋಮಾಂಚನಕಾರಿಯಾಗಿದೆ. ಈ ಸ್ಥಳ ನಂಬಲಾರದಷ್ಟು ಭರವಸೆಯನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.

ಮುತ್ತು ಮೀನುಗಾರಿಕೆಗೆ ತುವಾಯ್‌ ಹೆಸರುವಾಸಿಯಾಗಿದೆ. ತುವಾಯ್‌ನ ಇತಿಹಾಸವು ಕನಿಷ್ಠ ನಾಲ್ಕನೇ ಶತಮಾನಕ್ಕೆ ಹಿಂದಿನದಾಗಿದ್ದು, ಆರನೇ ಶತಮಾನದಲ್ಲಿ ನಗರ ತನ್ನ ಉತ್ತುಂಗವನ್ನು ತಲುಪಿ ಅಭಿವೃದ್ಧಿ ಹೊಂದುತ್ತಿರುವ ಮುತ್ತು ಮೀನುಗಾರಿಗೆ ಉದ್ಯಮಕ್ಕೆ ಹೆಸರುವಾಸಿಯಾಗಿತ್ತು. ಪ್ರಾಚೀನ ಗ್ರಂಥಗಳಲ್ಲಿನ ಉಲ್ಲೇಖಗಳು ತುವಾಯ್‌ ಅನ್ನು ಕರಾವಳಿ ಪ್ರದೇಶದ ರಾಜಧಾನಿಯಾಗಿ ಅದರ ಮುತ್ತುಗಳಿಗಾಗಿ ಉಲ್ಲೇಖಿಸಲಾಗಿದೆ.

ಆರನೇ ಶತಮಾನದಲ್ಲಿ ಸಿನಿಯಾಹ್‌ ದ್ವೀಪದಲ್ಲಿ ಇತ್ತೀಚಿನ ಪುರಾತತ್ವ ಶಾಸ್ತ್ರದ ತನಿಖೆಗಳು ಪುರಾತನ ವಸತಿ ಕಟ್ಟಡಗಳನ್ನು ಮಾತ್ರ ಬಹಿರಂಗಪಡಿಸಿಲ್ಲ. ಆದರೆ ಅದೇ ಯುಗದ ಮುತ್ತುಗಳ ಹಳ್ಳಿ ಮತ್ತು ಕ್ರಿಶ್ಚಿಯನ್‌ ಧಾರ್ಮಿಕ ಕೇಂದ್ರಗಳ ಅವಶೇಷಗಳನ್ನು ಬಹಿರಂಗಪಡಿಸಿವೆ. ಇದು ಸ್ಪಷ್ಟವಾಗಿ ಯಾರೂ ಈ ಹಿಂದೆ ಗುರುತಿಸದ ಮಹತ್ವದ ತಾಣವಾಗಿದೆ.

 

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

8 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

8 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

8 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

8 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

8 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

8 hours ago