ದೇಶ- ವಿದೇಶ

Pahalgam terrorist attack; ಸಂಭಾವ್ಯ ದಾಳಿ : ಭಾರತ ಸೇನೆ ಹೈ ಅಲರ್ಟ್

ಹೊಸದಿಲ್ಲಿ : ಪಹಲ್ಗಾಮ್‍ನ ಘಟನೆಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಆವರಿಸಿದ್ದು, ಯಾವುದೇ ಸಂದರ್ಭದಲ್ಲೂ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಸೇನಾ ಪಡೆಯನ್ನು ಹೈಅಲರ್ಟ್‍ನಲ್ಲಿ ಇಡಲಾಗಿದೆ.

ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಬೇಕೆಂದು ಮೂರು ಸೇನಾ ಪಡೆಗಳ ಮುಖ್ಯಸ್ಥರಿಗೆ ರಕ್ಷಣಾ ಇಲಾಖೆ ಮೌಖಿಕ ಸೂಚನೆ ಕೊಟ್ಟಿದೆ.

ಪಾಕಿಸ್ತಾನದಿಂದ ಸಂಭಾವ್ಯ ದಾಳಿ ನಡೆಯಬಹುದೆಂಬ ಗುಪ್ತಚರ ವಿಭಾಗ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಸೇನಾಪಡೆಗಳನ್ನು ಕಟ್ಟೆಚ್ಚರದಲ್ಲಿ ಇಡಲಾಗಿದೆ.

ಭಾರತೀಯ ವಾಯುಸೇನೆ ದೇಶದ ಎಲ್ಲಾ ಕರಾವಳಿ ತೀರಪ್ರದೇಶಗಳಲ್ಲೂ ಸಮರ ಅಭ್ಯಾಸವನ್ನು ನಡೆಸುತ್ತಿದೆ. ಗುಜರಾತ್, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ, ಗೋವಾ ಸೇರಿದಂತೆ ಕರಾವಳಿ ತೀರಪ್ರದೇಶಗಳಲ್ಲಿ ಭಾರತೀಯ ಸೇನಾಪಡೆಗೆ ಸೇರಿದ ವಾಯುಸೇನೆಯು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ವಸನ್ನದ್ಧವಾಗಿದೆ.

ಕಳೆದ ಎರಡು ದಿನಗಳಿಂದ ವಾಯುಸೇನೆಯು ನಿರಂತರವಾಗಿ ಸಮರ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಇದೇ ರೀತಿ ಭಾರತೀಯ ನೌಕಾ ಪಡೆಯು ಕೂಡ ಸಮರ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ.

ವಿಶೇಷವಾಗಿ ಮುಂಬೈ, ಕೊಚ್ಚಿ, ಕಾರವಾರ, ಪಣಜಿ ಮತ್ತಿತರ ಕಡೆ ಸಮರಾಭ್ಯಾಸ ನಡೆಸುತ್ತಿವೆ. ಪೂರ್ವ, ಪಶ್ಚಿಮ ಸೇರಿದಂತೆ ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿತೀರ ಪ್ರದೇಶಗಳಲ್ಲಿ ನೌಕಾ ನೆಲೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.

ಪಾಕಿಸ್ತಾನವು ಕರಾಚಿ ಮತ್ತು ಗುಜರಾತ್ ಕಡೆಯಿಂದ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ಶಂಕಿಸಿದೆ. ಹೀಗಾಗಿ ಈ ತೀರ ಪ್ರದೇಶಗಳಲ್ಲಿ ಗುರುವಾರದಿಂದಲೇ ಹೈಅಲರ್ಟ್ ಘೋಷಿಸಲಾಗಿದೆ.

ಇದೇ ರೀತಿ ಭಾರತೀಯ ವಾಯುಪಡೆಗೆ ಸೇರಿದ ಯುದ್ಧ ವಿಮಾನಗಳನ್ನು ಸಹ ಸನ್ನದ್ದದಲ್ಲಿ ಇಡಲಾಗಿದೆ. ಗುರುವಾರ ಪಾಕಿಸ್ತಾನದ ಕರಾಚಿಯ ಅರಬ್ಬಿ ಸಮುದ್ರದಲ್ಲಿ 480 ಕಿ.ಮೀ.ನಿಂದ 500 ಕಿ.ಮೀ ಗುರಿ ತಲುಪುವ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿತ್ತು.

ಹೀಗಾಗಿ ವಾಯುಪಡೆಯ ಯುದ್ಧ ವಿಮಾನಗಳಾದ ತೇಜಸ್, ರಫೇಲ್, ಸುಖೋಯ್, ನೇತ್ರ, ಸಿ17 ಗ್ಲೋಬ್ ಮಾಸ್ಟರ್, ಸಿ295, ಎಸ್‍ಎಚ್748, ಪ್ರಚಂಡ್, ಡೆಸಾಲ್ಟ, ನಿಕೋಯ್, ಜಾಗ್ವಾರ್, ಬೋಯಿಂಗ್, ರುದ್ರ, ಚಿನೂಕ್, ಧ್ರುವ, ಹಾಕ್, ಕಿರಣ್ ಸೇರಿದಂತೆ ಬಹುತೇಕ ಎಲ್ಲಾ ಯುದ್ಧ ವಿಮಾನಗಳು ಸಜ್ಜುಗೊಂಡಿವೆ.

ಈಗಾಗಲೇ ಒಂದು ಸುತ್ತಿನ ಸಮರ ಅಭ್ಯಾಸವನ್ನು ನಡೆಸಿರುವ ಈ ಯುದ್ಧ ವಿಮಾನಗಳು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿವೆ.

ಪ್ರಸ್ತುತ ಭಾರತದಲ್ಲಿ 60 ವಾಯುಪಡೆ ನೆಲೆಗಳಿವೆ. ನವದೆಹಲಿ, ಶಿಲ್ಲಾಂಗ್, ಪ್ರಯಾಗ್‍ರಾಜ್, ತಿರುವನಂತಪುರಂ, ಗಾಂಧಿನಗರ, ಬೆಂಗಳೂರಿನ ಯಲಹಂಕ, ನಾಗ್ಪುರ್, ಹಿಂಡನ್ ಸೇರಿದಂತೆ 60 ಕೇಂದ್ರಗಳಲ್ಲೂ ಕೂಡ ಯುದ್ಧ ವಿಮಾನಗಳನ್ನು ಇರಿಸಲಾಗಿದೆ.

ಇವುಗಳನ್ನು ವೆಸ್ಟರ್ನ್ ಎ ಕಮಾಂಡ್, ಈಸ್ಟರ್ನ್ ಎ ಕಮಾಂಡ್, ಸೌಥರ್ನ್ ಎ ಕಮಾಂಡ್, ನಾಥರ್ನ್ ಎ ಕಮಾಂಡ್ ಹಾಗೂ ನೈರುತ್ಯ ವಿಭಾಗ ಎಂದು ವಿಂಗಡಿಸಲಾಗಿದೆ.

ಪಾಕಿಸ್ತಾನ ಪ್ರಚೋದನೆಕಾರಿಯಾಗಿ ದಾಳಿ ನಡೆಸಿದರೆ ಅದರ ಪ್ರತಿರೋಧವನ್ನು ಹಿಮೆಟ್ಟಿಸಿ ತಕ್ಕ ಪಾಠ ಕಲಿಸಬೇಕೆಂದು ಸೇನಾಪಡೆ ಮೌಖಿಕ ಸೂಚನೆಯನ್ನು ನೀಡಿದೆ ಎಂದು ತಿಳಿದು ಬಂದಿದೆ.

ಆಂದೋಲನ ಡೆಸ್ಕ್

Recent Posts

ಎಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ

ಬೆಂಗಳೂರು : ಕರ್ನಾಟಕದ ಪ್ರಭಾವಿ ದಲಿತ ಸಮುದಾಯದ ನಾಯಕ ಹಾಗೂ ಮಾಜಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ…

2 hours ago

ಮಲ್ಲಿಕಾರ್ಜುನ್‌ ಖರ್ಗೆ, ಎಂ.ನಾಗರಾಜ್‌ ಸಹಿತ ನಾಲ್ವರು ರಾಜ್ಯಸಭೆಗೆ ಅವಿರೋಧ ಆಯ್ಕೆ

ಬೆಂಗಳೂರು : ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಧೈವಾರ್ಷಿಕ ಚುನಾವಣೆಯಲ್ಲಿ ನಿರೀಕ್ಷೆಯಂತೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ.ಮಲ್ಲಿಕಾರ್ಜುನ…

3 hours ago

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ 11ನೇ ನೀತಿ ಆಯೋಗದ ಸಭೆ

ಕರ್ನಾಟಕ ಸಿಎಂ ಡಿಕೆಶಿ ಸೇರಿ ಹಲವು ರಾಜ್ಯಗಳ ಸಿಎಂಗಳು ಭಾಗಿ ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರ…

3 hours ago

ಕಾಂಗ್ರೆಸ್‌ ಶಾಸಕ ಷಡಕ್ಷರಿ ಆರೋಗ್ಯ ಸ್ಥಿತಿ ಗಂಭೀರ

ನವದೆಹಲಿ: ತಿಪಟೂರು ಕಾಂಗ್ರೆಸ್‌ ಶಾಸಕ ಕೆ.ಷಡಕ್ಷರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಚಿವ ಸ್ಥಾನಕ್ಕಾಗಿ ಪಕ್ಷದ…

7 hours ago

ಕೇರಳದಲ್ಲಿ ಮತ್ತೆ ನಿಫಾ ವೈರಸ್‌ ಪತ್ತೆ: ಆರೋಗ್ಯ ಇಲಾಖೆಯಿಂದ ಹೈಅಲರ್ಟ್‌

ಕೋಯಿಕ್ಕೋಡ್:‌ ವಯನಾಡು, ಕೋಯಿಕ್ಕೋಡ್‌ನಲ್ಲಿ ಶಿಗೆಲ್ಲಾ ವೈರಸ್‌ ಸೋಂಕು ಹರಡಿರುವ ನಡುವೆ ನಿಫಾ ವೈರಸ್‌ ಪತ್ತೆಯಾಗಿದೆ. 43 ವರ್ಷದ ವ್ಯಕ್ತಿಯೊಬ್ಬರಿಗೆ ನಿಫಾ…

7 hours ago

ಕೆಆರ್‌ಎಸ್‌ ಡ್ಯಾಂ ನೀರಿನ ಮಟ್ಟ 81 ಅಡಿಗೆ ಕುಸಿತ: ರೈತರಲ್ಲಿ ಆತಂಕ

ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 81 ಅಡಿಗೆ ಕುಸಿದಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ.…

8 hours ago