ದೇಶ- ವಿದೇಶ

ಮೆಹುಲ್‌ ಚೋಕ್ಸಿ ಹಸ್ತಾಂತರ : ಗೃಹ ಸಚಿವಾಲಯ ಪತ್ರ

ಹೊಸದಿಲ್ಲಿ : ಭಾರತದಲ್ಲಿ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿ ಬೆಲ್ಜಿಯಂನಲ್ಲಿ ಬಂಧನಕ್ಕೊಳಪಟ್ಟಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ದೇಶಕ್ಕೆ ಹಸ್ತಾಂತರ ಮಾಡಿದರೆ ಕಾನೂನು ರೀತಿ ನಡೆಸಿಕೊಳ್ಳುತ್ತೇವೆ ಎಂದು ಗೃಹಸಚಿವಾಲಯ ಪತ್ರ ಬರೆದಿದೆ.

ಬೆಲ್ಜಿಯಂನ ನ್ಯಾಯಾಂಗ ಅಧಿಕಾರಿಗಳಿಗೆ ಮತ್ತು ಸಚಿವಾಲಯಕ್ಕೆ ಕೇಂದ್ರ ಗೃಹಕಲ್ಯಾಣ ಇಲಾಖೆ ಪತ್ರ ಬರೆದಿದ್ದು, ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರ ಮಾಡಬೇಕೆಂದು ಔಪಚಾರಿಕವಾಗಿ ಮನವಿ ಮಾಡಿತ್ತು.

ನಿಮ್ಮ ದೇಶಕ್ಕೆ ಹಸ್ತಾಂತರ ಮಾಡಿದರೆ ಅವರನ್ನು ಕಾನೂನುಬದ್ಧವಾಗಿ ನಡೆಸಿಕೊಳ್ಳುತ್ತೀರಾ? ಎಂಬ ಪತ್ರಕ್ಕೆ ಉತ್ತರಿಸಿರುವ ಗೃಹ ಇಲಾಖೆ, ಆರೋಪಿಯನ್ನು ದೇಶದ ಕಾನೂನಿನ ಪ್ರಕಾರವೇ ನಡೆಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದೆ.

ಒಂದು ವೇಳೆ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಿದರೆ ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ಜೈಲಿನ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದೇವೆ. ವೈದ್ಯಕೀಯ ಚಿಕಿತ್ಸೆ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸುವ ಆಶ್ವಾಸನೆ ಕೊಡಲಾಗಿದೆ. ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಅಲ್ಲಿನ ಸರ್ಕಾರಕ್ಕೆ ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐ ಮನವಿ ಮಾಡಿಕೊಂಡಿದೆ.

ಐಪಿಸಿ ಸೆಕ್ಷನ್ ೧೨೦ ಬಿ, ೪೦೯, ೪೨೦, ೪೭೭ ಎ, ೨೦೧ ಹಾಗೂ ಭ್ರಷ್ಟಾಚಾರ ತಡೆಕಾಯ್ದೆ ೧೯೯೮ ಅಡಿ ವಿವಿಧ ದೂರುಗಳನ್ನು ಸಿಬಿಐ ದಾಖಲಿಸಿದೆ. ಪತ್ರದಲ್ಲಿ ಮೆಹುಲ್ ಚೋಕ್ಸಿಗೆ ನಿರ್ದಿಷ್ಟ ಸೌಲಭ್ಯ, ವಸತಿ ವ್ಯವಸ್ಥೆ, ವೈದ್ಯಕೀಯ ವೆಚ್ಚ, ಮೇಲ್ವಿಚಾರಣೆ ಕಾರ್ಯ ವಿಧಾನಗಳು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈ ಆರೋಪಿಯನ್ನು ತಕ್ಷಣವೇ ಹಸ್ತಾಂತರಿಸಬೇಕು.

ಆರೋಪಿಯನ್ನು ಮುಂಬೈನ ಅರ್ತೂರು ರಸ್ತೆಯಲ್ಲಿರುವ ಜೈಲಿನಲ್ಲಿ ಇಡಲಾಗುವುದು. ಆದಷ್ಟು ಶೀಘ್ರ ಹಸ್ತಾಂತರ ಮಾಡುವಂತೆ ಸಿಬಿಐ ಕೋರಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಂಚನೆ ತಡೆಗಾಗಿ ನಿರ್ಬಂಧ

ನೀಟ್ -ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಇದೇ ಜೂನ್ ೨೧ ರಂದು ಮರು ಪರೀಕ್ಷೆ ನಡೆಯಲಿದೆ. ವಂಚನೆ ಜಾಲ…

31 mins ago

ಓದುಗರ ಪತ್ರ: ಮರಗಳ ಹನನ ಏಕೆ?

ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿ ಮೈಸೂರು ವಿಶ್ವವಿದ್ಯಾನಿಲಯದ ಹಿಂಭಾಗ ಮೈಸೂರು - ಚಾಮರಾಜನಗರ ರೈಲ್ವೆ ಹಳಿಯ ಪಕ್ಕದಲ್ಲಿದ್ದ ೩೫ ಮರಗಳನ್ನು…

33 mins ago

ಓದುಗರ ಪತ್ರ: ಎಥೆನಾಲ್: ಪ್ರಚಾರದ ಗಿಮಿಕ್ಕೋ?

ಜೂನ್ ೧೪ರಂದು ಆರಂಭವಾದ ಎಥೆನಾಲ್ ಜಗೃತಿ ಕೇವಲ ಕಾರ್ಪೊರೇಟ್ ಪ್ರಚಾರದ ಗಿಮಿಕ್‌ನಂತೆ ಕಾಣುತ್ತಿದೆ. ಪೆಟ್ರೋಲ್‌ಗೆ ಶೇ.೨೦ ಮಿಶ್ರಣದ ಗುರಿ ಮತ್ತು…

35 mins ago

ಓದುಗರ ಪತ್ರ: ದುಡ್ಡಿಗೆ ಬೆಲೆ ಇಲ್ಲವೇ?

ಕಳೆದ ಆರ್ಥಿಕ ವರ್ಷದಲ್ಲಿ (೨೦೨೫-೨೬), ನಮ್ಮ ಭಾರತೀಯ ಬ್ಯಾಂಕ್ಗಳು, ಕೇವಲ ಪೆನ್ನು,ಪೇಪರ್, ಸ್ಟೇಷನರಿ ವಸ್ತುಗಳು ಮತ್ತು ಮುದ್ರಣಕ್ಕಾಗಿ ೩,೮೭೦ ಕೋಟಿ…

38 mins ago

ಪರಿಷತ್‌ ಚುನಾವಣೆಯಲ್ಲಿ ಕ್ರಾಸ್‌ ವೋಟ್‌ ಮಾಡಿದ ಶಾಸಕರು ಗೊತ್ತಿದೆ ; ಎಚ್‌.ಡಿ.ಕುಮಾರಸ್ವಾಮಿ

ಮೈಸೂರು : ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜಾ.ದಳದಿಂದ ಕ್ರಾಸ್ ವೋಟ್ ಮಾಡಿದ ನಾಲ್ಕು ಜನರು ಯಾರೆಂದು ಗೊತ್ತಿದೆ.…

14 hours ago