ದೇಶ- ವಿದೇಶ

ಲೀವಿಂಗ್‌ ಟೂಗೆದರ್‌ ಜೋಡಿಯಿಂದ 2 ಮಕ್ಕಳ ಕೊಲೆ : ಭೀಕರ ಘಟನೆಗೆ ಸಾಕ್ಷಿಯಾದ ಈ ಜಿಲ್ಲೆ

ತ್ರಿಶೂರ್‌ : ಲೀವಿಂಗ್ ಟೂಗೆದರ್ ನಲ್ಲಿದ್ದ ಜೋಡಿಯೊಂದ ತಮಗೆ ಜನಿಸಿದ ಎರಡು ಮಕ್ಕಳನ್ನು ಹುಟ್ಟಿದ ಕೂಡಲೇ ಕೊಲೆ ಮಾಡಿರುವ ಭೀಕರ ಘಟನೆಗೆ ಕೇರಳದ ತ್ರಿಶೂರ್ ಸಾಕ್ಷಿಯಾಗಿದೆ.

ತ್ರಿಶೂರ್ ಜಿಲ್ಲೆಯಲ್ಲಿ ಲಿವ್-ಇನ್ ಜೋಡಿಯೊಂದು ಹುಟ್ಟಿದ ಮರುಕ್ಷಣವೇ ತಮ್ಮ ಶಿಶುಗಳನ್ನು ಕೊಂದು, ಹೂತು ಹಾಕಿರುವುದಾಗಿ ಒಪ್ಪಿಕೊಂಡಿದ್ದು, ಒಂದು ವರ್ಷದ ಬಳಿಕ ಪೊಲೀಸರು ಎರಡು ಶಿಶುಗಳ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ.

25 ವರ್ಷದ ಭವಿನ್ ಎಂಬಾತ ತನ್ನ ನವಜಾತ ಶಿಶುಗಳ ಅವಶೇಷಗಳನ್ನು ಹೊತ್ತುಕೊಂಡು ಪುತ್ತುಕ್ಕಾಡ್ ಪೊಲೀಸ್ ಠಾಣೆಗೆ ಬಂದಿದ್ದ. ತಾನು ಮತ್ತು ತನ್ನ ಲಿವ್ ಇನ್ ಸಂಗಾತಿ ಅನಿಶಾಗೆ ಬೇರೆಬೇರೆ ವರ್ಷದಲ್ಲಿ ಇಬ್ಬರು ಗಂಡು ಶಿಶುಗಳು ಜನಿಸಿದ್ದು, ಹುಟ್ಟಿದ ಕೂಡಲೇ ಕೊಂದು ಸಮಾಧಿ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಭವಿನ್ ಸುಮಾರು 12.30ರ ಸುಮಾರಿಗೆ ಪೊಲೀಸ್ ಠಾಣೆಗೆ ಬಂದು ಶಿಶುಗಳ ಅವಶೇಷಗಳೆಂದು ಹೇಳಿಕೊಂಡ ಪ್ಯಾಕೆಟ್ ಅನ್ನು ಹಸ್ತಾಂತರಿಸಿದ್ದಾನೆ. ಘಟನೆಗಳ ವಿವರಗಳನ್ನು ಸ್ಟೇಷನ್ ಹೌಸ್ ಅಧಿಕಾರಿ ಮಹೇಂದ್ರ ಸಿಂಹನ್ ಅವರೊಂದಿಗೆ ಹಂಚಿಕೊಂಡರು. ಅವರ ಹೇಳಿಕೆಯ ಆಧಾರದ ಮೇಲೆ, ಅಧಿಕಾರಿಗಳು ಅನಿಶಾ ಅವರನ್ನು ಸಹ ಬಂಧಿಸಿದರು.

ವಿಚಾರಣೆಯ ಸಂದರ್ಭದಲ್ಲಿ ಈ ಜೋಡಿ ಫೇಸ್‍ಬುಕ್‍ನಲ್ಲಿ ಭೇಟಿಯಾಗಿತ್ತು. 2020ರಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಭವಿನ್ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದರೆ, ಅನಿಶಾ ಲ್ಯಾಬ್ ಟೆಕ್ನೀಶಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.
ಅನಿಶಾ 2021ರಲ್ಲಿ ತನ್ನ ಮನೆಯ ಸ್ನಾನಗೃಹದಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಳು. ಹೆರಿಗೆಯ ಸಮಯದಲ್ಲಿ ಶಿಶುವಿನ ಕುತ್ತಿಗೆಗೆ ಹೊಕ್ಕುಳಬಳ್ಳಿ ಸುತ್ತಿಕೊಂಡಿದ್ದರಿಂದ ಮಗು ಸಾವನ್ನಪ್ಪಿತ್ತು ಎಂದು ಹೇಳಿಕೊಂಡಿದ್ದಾಳೆ. ಮಗುವನ್ನು ತನ್ನ ಜಮೀನಿನಲ್ಲಿ ರಹಸ್ಯವಾಗಿ ಹೂತುಹಾಕಿದ್ದಳು. ಎಂಟು ತಿಂಗಳ ನಂತರ, ಭವಿನ್ ಕೋರಿಕೆಯ ಮೇರೆಗೆ, ಅವಳು ಅವಶೇಷಗಳನ್ನು ಅವನಿಗೆ ಕೊಟ್ಟಿದ್ದಳು. ಭವಿನ್ ತಮ್ಮ ಸಂಬಂಧದ ಸಂಕೇತವಾಗಿ ಮೂಳೆಗಳನ್ನು ಇಟ್ಟುಕೊಂಡಿದ್ದಾಗಿ ಮತ್ತು ಮಗುವಿಗೆ ಅಂತ್ಯಕ್ರಿಯೆ ನಡೆಸಲು ಯೋಜಿಸಿರುವುದಾಗಿ ಸ್ನೇಹಿತರಿಗೆ ತಿಳಿಸಿದ್ದಾಗಿ ಹೇಳಿದ್ದಾಳೆ.

ಎರಡನೇ ಘಟನೆಯಲ್ಲಿ, 2024 ರಲ್ಲಿ ಅನಿಶಾ ಮತ್ತೆ ಮಗುವಿಗೆ ಜನ್ಮ ನೀಡಿದಳು. ಪೊಲೀಸರ ಹೇಳಿಕೆಯ ಪ್ರಕಾರ, ಮಗುವಿನ ಅಳುವನ್ನು ನಿಗ್ರಹಿಸಲು ಮತ್ತು ನೆರೆಹೊರೆಯವರು ಕೇಳದಂತೆ ತಡೆಯಲು ಬಲವಂತವಾಗಿ ಬಾಯಿ ಮುಚ್ಚಿದ ನಂತರ ಮಗು ಸಾವನ್ನಪ್ಪಿತು. ನಂತರ ಭವಿನ್ ಅಂಬಳ್ಳೂರಿನ ತನ್ನ ನಿವಾಸದ ಹಿಂದೆ ಶವವನ್ನು ಹೂತುಹಾಕಿದ್ದರು. ಭವಿನ್ ತನ್ನೊಂದಿಗೆ ಪೊಲೀಸ್ ಠಾಣೆಗೆ ತಂದದ್ದು ಎರಡೂ ಶಿಶುಗಳ ಅವಶೇಷಗಳನ್ನು ವಿಧಿವಿಜ್ಞಾನ ಶಸ್ತ್ರಚಿಕಿತ್ಸಕರು ಕೊಂಡೊಯ್ದಿದ್ದು, ಮೂಳೆಗಳನ್ನು ಪರೀಕ್ಷಿಸಿ ಅವು ಶಿಶುಗಳ ಅವಶೇಷಗಳು ಹೌದೆಂದು ದೃಢಪಡಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

6 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

6 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

7 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

8 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

10 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

10 hours ago