ಕೇರಳ: ಮೆದುಳು ತಿನ್ನುವ ವಿಚಿತ್ರ ಸೂಕ್ಷ್ಮಾಣು ಜೀವಿಗೆ ಕೇರಳದಲ್ಲಿ ಬಾಲಕನೊಬ್ಬ ಬಲಿಯಾಗಿದ್ದಾನೆ.
ಮಲಪ್ಪುರಂನ ಮೂಲದ ಬಾಲಕ ತೀವ್ರ ಅಸ್ವಸ್ಥತೆಯಿಂದ ನರಳುತ್ತಿದ್ದ ಕೇರಳದ ಕೋಳಿಕ್ಕೋಡ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು,ಚಿಕಿತ್ಸೆ ಫಲಕಾರಿಯಾಗದೇ ಮರಣಹೊಂದಿದ್ದಾನೆ.
ಇದೊಂದು ನೀರಿನಿಂದ ಹರಡುವ ಸೋಂಕಾಗಿದ್ದು, ಈ ಸೋಂಕಿಗೆ ಒಳಗಾದವರು ಕೇವಲ ಐದು ದಿನಗಳ ಒಳಗಾಗಿ ಕೊನೆಯುಸಿರೆಳೆಯುತ್ತಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮಲಪ್ಪುರಂ ಕೆರೆಯೊಂದರಲ್ಲಿ ಸ್ಥಳೀಯ ಬಾಲಕ ಈಜಾಡಿದ್ದಾನೆ. ಈ ವೇಳೆ ವೈರಸ್ ಬಾಲಕನ ದೇಹ ಪ್ರವೇಶಿಸಿದೆ. ಬಳಿಕ ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೇ ತಿಂಗಳಿನಿಂದಾಚೆಗೆ ಈ ರೀತಿಯ ಸಾವು ನೋವುಗಳು ಪದೇ ಪದೇ ಸಂಭವಿಸುತ್ತಿದ್ದವು. ಕಳೆದ ಒಂದು ತಿಂಗಳಿನಲ್ಲಿಯೇ ಈ ರೀತಿಯಾಗಿ ಸಂಭವಿಸಿದ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ನೀರಿನ ಮೂಲಕ ಮನುಷ್ಯನ ದೇಹ ಒಕ್ಕುವ ಈ ವೈರಾಣು ಮೂಗಿನ ಮೂಲಕ ನೇರವಾಗಿ ಮೆದುಳನ್ನು ಪ್ರವೇಶಿಸುತ್ತದೆ. ಮೆದುಳಿನ ಜೀವಕೋಶದ ಮೇಲೆ ನೇರವಾಗಿ ದಾಳಿ ಮಾಡುವ ಈ ವೈರಾಣು ಕ್ರಮೇಣ ಇದರಿಂದಾಗಿ ಅಮೀಬಾಯಿಕ್ ಮೆನಿನ್ ಜೋ ಎನ್ ಕೆಫಾಲಿಟೀಸ್ ಎಂಬ ಕಾಯಿಲೆಗೆ ತುತ್ತಾಗಿ ರೋಗಿ ಸಾವನ್ನಪ್ಪುತ್ತಾನೆ.
ಈ ಬಗ್ಗೆ ಜಾಗೃತಿ ವಹಿಸಲು ಕೆರೆ, ನದಿ ಹಾಗೂ ಕೊಳಗಳಲ್ಲಿ ಈಜಾಡುವುದರಿಂದ ದೂರ ಉಳಿದರೆ ಈ ಸಮಸ್ಯೆ ಬಾರದಂತೆ ತಡೆಗಟ್ಟಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮೈಸೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯನವರ ಮುಂದಿನ ಜೀವನ ಚೆನ್ನಾಗಿರಲಿ. ನೂತನ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್ ಉತ್ತಮ…
ಹೊಸದಿಲ್ಲಿ : ಕಳೆದ ಎರಡ್ಮೂರು ದಿನಗಳಿಂದ ಮೌನಕ್ಕೆ ಶರಣಾಗಿದ್ದ ಡಿಕೆ ಶಿವಕುಮಾರ್ ಕೊನೆಗೂ ತುಟಿ ಬಿಚ್ಚಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ…
ಮೈಸೂರು: ನಾನು ಸಹ ಹೊಸ ಸಚಿವ ಸಂಪುಟದಲ್ಲಿ ಸೇರುವ ಬಯಕೆ ಇದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ಈ…
ಬೆಂಗಳೂರು: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಗೀಕರಿಸಿದ್ದಾರೆ. ರಾಜೀನಾಮೆ ಅಂಗೀಕಾರವಾದ ಬೆನ್ನಲ್ಲೇ…
ಬೆಂಗಳೂರು: ದೇವರು ವರನೂ ಕೊಡಲ್ಲ. ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ…
ಲಕ್ನೋ: ಚಂಡಮಾರುತಕ್ಕೆ ಸಿಕಿ ಬೆಟ್ಟಾ ನದಿಯ ಮೇಲೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು 6 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ…