ನವದೆಹಲಿ: ಜೀರುಂಡೆಯಂತಹ ಸಣ್ಣದೊಂದು ಕೀಟಕ್ಕೆ ಒಂದು ಲಕ್ಸುರಿ ಕಾರಿಗಿಂತಲೂ ಅಧಿಕ ಬೆಲೆ ಇದೆ ಅಂದ್ರೆ ನೀವು ನಂಬ್ತೀರಾ.? ಇಂತ ಸುದ್ದಿಯೊಂದು ಈಗ ಭಾರೀ ಸಂಚಲನ ಸೃಷ್ಟಿಸಿದೆ.
ಮರ ಕೊರೆಯುವ ಕೀಟದಂತೆ ಕಾಣುವ ಈ ಸ್ಟಾಗ್ ಬೀಟಲ್ನ ಬೆಲೆ ಒಂದೆರಡು ರೂಪಾಯಿ ಅಲ್ಲ. ಬರೋಬ್ಬರಿ ೭೫ ಲಕ್ಷ ಅಂದ್ರೆ ಅಚ್ಚರಿ ಆಗೋದಂತೂ ಗ್ಯಾರಂಟಿ. ಇದು ಪ್ರಪಂಚದಲ್ಲಿಯೇ ಅತ್ಯಂತ ದುಬಾರಿ ಕೀಟ.
ಈ ಅಪರೂಪದ ಕೀಟವನ್ನು ಅದೃಷ್ಟ ಎಂದು ನಂಬಲಾಗುತ್ತದೆ. ಇದನ್ನು ತಮ್ಮ ಬಳಿ ಇಟ್ಟುಕೊಂಡರೆ ರಾತ್ರೋರಾತ್ರಿ ಶ್ರೀಮಂತರಾಗಬಹುದು ಎಂಬುದು ಜನರ ನಂಬಿಕೆ. ಇದೇ ಕಾರಣಕ್ಕೆ ಈ ಸಾರಂಗ ಜೀರುಂಡೆ ಅಥವಾ ಸ್ಟಾಗ್ ಬೀಟಲ್ ಎಂದು ಕರೆಯಲ್ಪಡುವ ಈ ಕೀಟಕ್ಕೆ ಬರೋಬ್ಬರಿ ೭೫ ಲಕ್ಷ ರೂಪಾಯಿ ಬೆಲೆಯಿದೆ.
ಈ ಕೀಟದ ಜೀವನಚಕ್ರದ ಕೆಲವು ಭಾಗದಲ್ಲಿ ಮರಗಳ ಸತ್ತ ಅಥವಾ ಸಾಯುತ್ತಿರುವ ಮರದ ಮೇಲೆ ಅವಲಂಬಿತವಾಗಿರುವ ಜಾತಿಗಳು ಮತ್ತು ಅರಣ್ಯ ಜೀವವೈವಿಧ್ಯಕ್ಕೆ ಕೊಡುಗೆ ನೀಡುತ್ತವೆ. ಈ ಕೀಟಗಳು ಪರಿಸರ ವ್ಯವಸ್ಥೆಯಲ್ಲಿ ಗಮನಾರ್ಹವಾದ ಸ್ಯಾಪ್ರೋಕ್ಸಿಲಿಕ್ ಸಂಯೋಜನೆಯನ್ನು ಪ್ರತಿನಿಧಿಸುತ್ತವೆ.
ಈ ಸಾರಂಗ ಜೀರುಂಡೆಗಳು ಬೆಚ್ಚಗಿನ, ಉಷ್ಣವಲಯದ ಪರಿಸರದಲ್ಲಿ ಬೆಳೆಯುತ್ತವೆ. ಅವು ನೈಸರ್ಗಿಕವಾಗಿ ಕಾಡುಪ್ರದೇಶಗಳಲ್ಲಿ ವಾಸಿಸುತ್ತವೆ. ಮುಳ್ಳುಗಿಡಗಳು, ಸಾಂಪ್ರದಾಯಿಕ ತೋಟಗಳು ಮತ್ತು ಉದ್ಯಾನವನಗಳು ಹಾಗೂ ಉದ್ಯಾನಗಳಂತಹ ನಗರ ಪ್ರದೇಶಗಳಲ್ಲಿಯೂ ಹೀಗೆ ಸತ್ತ ಮರಗಳು ಎಲ್ಲಿರುತ್ತವೆಯೋ ಅಲ್ಲಲ್ಲಿ ಸಹಜವಾಗಿ ಕಂಡುಬರುತ್ತವೆ.
ಸಾರಂಗ ಜೀರುಂಡೆಗಳಲ್ಲಿ ವಯಸ್ಕ ಕೀಟಗಳು ಕೊಳೆಯುತ್ತಿರುವ ಹಣ್ಣಿನ ರಸದಂತಹ ಸಿಹಿದ್ರವಗಳನ್ನು ತಿನ್ನುತ್ತವೆ.
ಶಿವಮೊಗ್ಗ: ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ವಿಶ್ವವಿಖ್ಯಾತ ಜೋಗ ಜಲಪಾತ ಜೀವಕಳೆ ಪಡೆದುಕೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ಶಿವಮೊಗ್ಗದಲ್ಲಿ ಭಾರೀ…
ಕೊಡಗು: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮನೆಮಾಡಿದೆ. ಜಿಲ್ಲೆಯ ಮಳೆಯ ವಿವರ ಈ…
ಮಡಿಕೇರಿ: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಗಜಪಡೆಗೆ ಆಯ್ಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಇದರ ಭಾಗವಾಗಿ…
ತಿರುವನಂತಪುರಂ: ವಯನಾಡಿನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಮೆಪ್ಪಾಡಿಯಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ವಯನಾಡಿನ ಸುರಂಗ ನಿರ್ಮಾಣ ಪ್ರದೇಶದ ಮೀನಾಕ್ಷಿ…
ಮಂಗಳೂರು: ತೂಗುಸೇತುವೆಗಳ ಸರದಾರ, ಸುಳ್ಯದ ವಿಶ್ವೇಶ್ವರಯ್ಯ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಎಂಜಿನಿಯರ್ ಡಾ.ಗಿರೀಶ್ ಭಾರದ್ವಾಜ್ ಅವರು ಇಂದು ನಿಧನರಾಗಿದ್ದಾರೆ.…
ಕೊಡಗು: ಕಾಫಿ ತೋಟದಲ್ಲಿ ಕಾಡಾನೆ ಮೃತದೇಹ ಪತ್ತೆಯಾಗಿದೆ. ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪರದಂಡ…