ದೇಶ- ವಿದೇಶ

ಲಕ್ಸುರಿ ಕಾರಿಗಿಂತಲೂ ದುಬಾರಿ ಈ ಕೀಟ: ಇದರ ವಿಶೇಷತೆ ಏನು ಗೊತ್ತಾ.?

ನವದೆಹಲಿ: ಜೀರುಂಡೆಯಂತಹ ಸಣ್ಣದೊಂದು ಕೀಟಕ್ಕೆ ಒಂದು ಲಕ್ಸುರಿ ಕಾರಿಗಿಂತಲೂ ಅಧಿಕ ಬೆಲೆ ಇದೆ ಅಂದ್ರೆ ನೀವು ನಂಬ್ತೀರಾ.? ಇಂತ ಸುದ್ದಿಯೊಂದು ಈಗ ಭಾರೀ ಸಂಚಲನ ಸೃಷ್ಟಿಸಿದೆ.

ಮರ ಕೊರೆಯುವ ಕೀಟದಂತೆ ಕಾಣುವ ಈ ಸ್ಟಾಗ್‌ ಬೀಟಲ್‌ನ ಬೆಲೆ ಒಂದೆರಡು ರೂಪಾಯಿ ಅಲ್ಲ. ಬರೋಬ್ಬರಿ ೭೫ ಲಕ್ಷ ಅಂದ್ರೆ ಅಚ್ಚರಿ ಆಗೋದಂತೂ ಗ್ಯಾರಂಟಿ. ಇದು ಪ್ರಪಂಚದಲ್ಲಿಯೇ ಅತ್ಯಂತ ದುಬಾರಿ ಕೀಟ.

ಈ ಅಪರೂಪದ ಕೀಟವನ್ನು ಅದೃಷ್ಟ ಎಂದು ನಂಬಲಾಗುತ್ತದೆ. ಇದನ್ನು ತಮ್ಮ ಬಳಿ ಇಟ್ಟುಕೊಂಡರೆ ರಾತ್ರೋರಾತ್ರಿ ಶ್ರೀಮಂತರಾಗಬಹುದು ಎಂಬುದು ಜನರ ನಂಬಿಕೆ. ಇದೇ ಕಾರಣಕ್ಕೆ ಈ ಸಾರಂಗ ಜೀರುಂಡೆ ಅಥವಾ ಸ್ಟಾಗ್‌ ಬೀಟಲ್‌ ಎಂದು ಕರೆಯಲ್ಪಡುವ ಈ ಕೀಟಕ್ಕೆ ಬರೋಬ್ಬರಿ ೭೫ ಲಕ್ಷ ರೂಪಾಯಿ ಬೆಲೆಯಿದೆ.

ಈ ಕೀಟದ ಜೀವನಚಕ್ರದ ಕೆಲವು ಭಾಗದಲ್ಲಿ ಮರಗಳ ಸತ್ತ ಅಥವಾ ಸಾಯುತ್ತಿರುವ ಮರದ ಮೇಲೆ ಅವಲಂಬಿತವಾಗಿರುವ ಜಾತಿಗಳು ಮತ್ತು ಅರಣ್ಯ ಜೀವವೈವಿಧ್ಯಕ್ಕೆ ಕೊಡುಗೆ ನೀಡುತ್ತವೆ. ಈ ಕೀಟಗಳು ಪರಿಸರ ವ್ಯವಸ್ಥೆಯಲ್ಲಿ ಗಮನಾರ್ಹವಾದ ಸ್ಯಾಪ್ರೋಕ್ಸಿಲಿಕ್‌ ಸಂಯೋಜನೆಯನ್ನು ಪ್ರತಿನಿಧಿಸುತ್ತವೆ.

ಈ ಸಾರಂಗ ಜೀರುಂಡೆಗಳು ಬೆಚ್ಚಗಿನ, ಉಷ್ಣವಲಯದ ಪರಿಸರದಲ್ಲಿ ಬೆಳೆಯುತ್ತವೆ. ಅವು ನೈಸರ್ಗಿಕವಾಗಿ ಕಾಡುಪ್ರದೇಶಗಳಲ್ಲಿ ವಾಸಿಸುತ್ತವೆ. ಮುಳ್ಳುಗಿಡಗಳು, ಸಾಂಪ್ರದಾಯಿಕ ತೋಟಗಳು ಮತ್ತು ಉದ್ಯಾನವನಗಳು ಹಾಗೂ ಉದ್ಯಾನಗಳಂತಹ ನಗರ ಪ್ರದೇಶಗಳಲ್ಲಿಯೂ ಹೀಗೆ ಸತ್ತ ಮರಗಳು ಎಲ್ಲಿರುತ್ತವೆಯೋ ಅಲ್ಲಲ್ಲಿ ಸಹಜವಾಗಿ ಕಂಡುಬರುತ್ತವೆ.

ಸಾರಂಗ ಜೀರುಂಡೆಗಳಲ್ಲಿ ವಯಸ್ಕ ಕೀಟಗಳು ಕೊಳೆಯುತ್ತಿರುವ ಹಣ್ಣಿನ ರಸದಂತಹ ಸಿಹಿದ್ರವಗಳನ್ನು ತಿನ್ನುತ್ತವೆ.

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಮಂಜಿನ ನಗರಿಯಲ್ಲಿ ಮೈ ಕೊರೆಯುವ ಚಳಿ

ಹೆಚ್ಚುತ್ತಿರುವ ಶೀತ ವಾತಾವರಣ; ಸದ್ಯಕ್ಕಿಲ್ಲ ಮಳೆಯ ಆತಂಕ  ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದ್ದು, ಫೆಬ್ರವರಿವರೆಗೆ ಇದೇ…

16 mins ago

ಮಲ್ಲಯ್ಯನಪುರದಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿ

ಲಕ್ಷಾಂತರ ರೂ. ಫಸಲು ನಾಶವಾಗುತ್ತಿದೆ ಎಂದು ರೈತರ ಅಳಲು; ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆಗೆ ಆಗ್ರಹ ಹನೂರು: ತಾಲ್ಲೂಕಿನ ಕಾವೇರಿ…

4 hours ago

ಸಣ್ಣ ಕಾಲುವೆಗಳನ್ನು ಮುಚ್ಚಿ ಒತ್ತುವರಿ: ಆರೋಪ

ಹನೂರು: ಉಡುತೊರೆ ಹಳ್ಳ ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಹರಿಸಲು ನಿರ್ಮಾಣ ಮಾಡಿದ್ದ ಸಣ್ಣ ಸಣ್ಣ ಕಾಲುವೆಗಳನ್ನು ಮುಚ್ಚಿ ಜಮೀನು…

4 hours ago

‘ಲಾ-ನಿನಾ’ ಚಳಿ: ಜನರ ಆರೋಗ್ಯದ ಮೇಲೆ ದುಷ್ಪರಿಣಾಮ

ಗಿರೀಶ್ ಹುಣಸೂರು ಜ್ವರ, ಶೀತ, ಕೆಮ್ಮು ಕಾಯಿಲೆಗಳ ಭೀತಿ; ಆಸ್ಪತ್ರೆಗಳಿಗೆ ಎಡತಾಕುವ ಪರಿಸ್ಥಿತಿ ಮೈಸೂರು: ರಾಜ್ಯದಲ್ಲಿ ತಾಪಮಾನ ಕುಸಿತದಿಂದಾಗಿ ಚಳಿಯ…

4 hours ago

ಶಾಮನೂರು ಶಿವಶಂಕರಪ್ಪ-ಕಪಿಲಾ ತೀರದ ನಡುವೆ ಇತ್ತು ಅವಿನಾಭಾವ ಸಂಬಂಧ!

ಎಸ್.ಎಸ್.ಭಟ್ ನಂಜನಗೂಡು: ಭಾನುವಾರ ನಿಧನರಾದ ಆಧುನಿಕ ದಾವಣಗೆರೆಯ ನಿರ್ಮಾತೃ ಶಾಮನೂರು ಶಿವಶಂಕರಪ್ಪ ಅವರಿಗೂ ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ…

4 hours ago