ನವದೆಹಲಿ: ವಸತಿ ಮತ್ತು ನಗರ ವ್ಯವಹಾರಗಳ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರೊಹಿಂಗ್ಯಾ ನಿರಾಶ್ರಿತರನ್ನು ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಶಿಫ್ಟ್ ಮಾಡಲು ನಿರ್ಧರಿಸಿದ್ದು, ಅವರಿಗೆ ಪಶ್ಚಿಮ ದೆಹಲಿಯ ಬಕ್ಕರ್ವಾಲಾದಲ್ಲಿ ಫ್ಲಾಟ್ ನೀಡಲಾಗುವುದು ಎಂದು ಬಧುವಾರ ಬೆಳಗ್ಗೆ ಟ್ವೀಟ್ ಮಾಡಿದ್ದರು.
ಇದಾಗಿ ಕೆಲವೇ ಗಂಟೆಗಳಲ್ಲಿ ಹೇಳಿಕೆ ಹೊರಡಿಸಿದ ಕೇಂದ್ರ ಗೃಹ ಸಚಿವಾಲಯ ಯಾವುದೇ ನಿರ್ದೇಶನವನ್ನು ನೀಡಿಲ್ಲ. ಅಕ್ರಮ ವಿದೇಶಿಯರನ್ನು ಕಾನೂನು ಮೂಲಕ ದೇಶದಿಂದ ಗಡಿಪಾರು ಮಾಡುವ ವರಗೆ ಅವರನ್ನು ಬಂಧನದಲ್ಲೇ ಇರಿಸಲಾಗುವುದು ಎಂದಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕೇಂದ್ರ ಸಚಿವಾಲಯ ರೊಹಿಂಗ್ಯಾಗಳನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸಲು ದೆಹಲಿ ಸರ್ಕಾರ ಮುಂದಾಗಿದೆ. ರೊಹಿಂಗ್ಯಾ ಅಕ್ರಮ ವಿದೇಶಿಗರು ಪ್ರಸ್ತುತ ಸ್ಥಳದಲ್ಲಿಯೇ ಮುಂದುವರಿಯುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಗೃಹ ಸಚಿವಾಲಯ GNCTD ಗೆ ನಿರ್ದೇಶನ ನೀಡಿದೆ. ಯಾಕೆಂದರೆ ಗೃಹಸಚಿವಾಲ ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಲಕ ಸಂಬಂಧಪಟ್ಟ ದೇಶದೊಂದಿಗೆ ಅವರನ್ನು ಗಡೀಪಾರು ಮಾಡುವ ವಿಷಯ ಚರ್ಚಿಸುತ್ತಿದೆ ಎಂದಿದೆ.
ಬೆಳಗ್ಗೆ ಟ್ವೀಟ್ ಮಾಡಿದ ಪುರಿ, ದೇಶದಲ್ಲಿ ಆಶ್ರಮ ಬೇಡಿ ಬಂದ ನಿರಾಶ್ರಿತರನ್ನು ಭಾರತ ಸದಾ ಸ್ವಾಗತಿಸಿದೆ. ಮಹತ್ವದ ನಿರ್ಧಾರ ಏನೆಂದರೆ ಎಲ್ಲ ರೊಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಬಕ್ಕರ್ವಾಲಾದಲ್ಲಿರುವ ಇಡಬ್ಯುಎಸ್ ಫ್ಲಾಟ್ಗೆ ಶಿಫ್ಟ್ ಮಾಡಲಾಗುವುದು. ಇಲ್ಲಿ ಇವರಿಗೆ ಮೂಲ ಸೌಕರ್ಯ, ಯುಎನ್ಎಚ್ ಸಿಆರ್ ಐಡಿ ಮತ್ತು ದಿನದ 24 ಗಂಟೆ ದೆಹಲಿ ಪೊಲೀಸ್ ರಕ್ಷಣೆ ನೀಡಲಾಗುವುದು. ದೇಶದ ವಲಸೆಗಾರರ ನೀತಿಯನ್ನು ಸಿಎಎ ಜತೆ ಜೋಡಿಸಿ ಅಪಪ್ರಚಾರ ಮಾಡಿ ತಮ್ಮ ಬೇಳೆ ಬೇಯಿಸಿಕೊಂಡವರಿಗೆ ಇದರಿಂದ ನಿರಾಶೆಯಾಗಿದೆ. ಭಾರತ ಯುಎನ್ ರೆಫ್ಯೂಗಿ ಕನ್ವೆನ್ಶನ್ 1951ನ್ನು ಗೌರವಿಸುತ್ತದೆ ಮತ್ತು ಪಾಲಿಸುತ್ತದೆ. ಯಾವುದೇ ನಿರಾಶ್ರಿತರಿಗೆ ಅವರ ಜನಾಂಗ, ಧರ್ಮ ಅಥವಾ ಸಮುದಾಯದ ಭೇದವಿಲ್ಲದೆ ಆಶ್ರಯ ಒದಗಿಸುತ್ತದೆ ಎಂದು ಸಚಿವ ಪುರಿ ಟ್ವೀಟ್ ಮಾಡಿದ್ದರು.
ಮೈಸೂರಿನ ಮೆಟ್ರೋ ಪೋಲ್ ವೃತ್ತದ ಹತ್ತಿರ (ಮಹಾರಾಣಿ ಕಾಲೇಜು) ಮತ್ತು ಗಂಡಭೇರುಂಡ ಉದ್ಯಾನವನದ ಮುಂಭಾಗದಲ್ಲಿ ಹಾಗೂ ಕುವೆಂಪುನಗರದ ಉದಯರವಿ ರಸ್ತೆಯಲ್ಲಿ…
ಹೆರಿಗೆ ಸಮಯದಲ್ಲಿ ಅನಗತ್ಯವಾಗಿ ಸಿಸೇರಿಯನ್ ಮಾಡುವ ಖಾಸಗಿ ನರ್ಸಿಂಗ್ ಹೋಂಗಳ ವಿರುದ್ಧ ಕೆಪಿಎಂಇ ಅಧಿನಿಯಮ ಕಾಯ್ದೆ ಪ್ರಕಾರ ಕಾನೂನು ಕ್ರಮ…
ಸ್ವಾವಲಂಬನೆಗೆ ಸಹಕಾರಿಯಾದ ನಿಯೋಬೋಲ್ಟ್ ಸ್ಕೂಟರ್ ಗಾಲಿಕುರ್ಚಿ 2010ರ ಆಗಸ್ಟ್ ತಿಂಗಳಿನಲ್ಲಿ ನಾಗ್ಪುರದ ನಿವಾಸಿ ನಿತೀನ್ರ ಜನ್ಮ ದಿನಾಚರಣೆಯ ಸಂಭ್ರಮ ಆಚರಿಸಲು…
ನವೀನ್ ಡಿಸೋಜ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳ ಸಾಧನೆ ಜಿಲ್ಲೆಯಾದ್ಯಂತ ನಿರಂತರ ವ್ಯಾಪಕ ತಪಾಸಣಾ ಕ್ರಮ ಮಡಿಕೇರಿ: ಪ್ರಾದೇಶಿಕ…
ನಾಗರಹೊಳೆ ಅರಣ್ಯದ ಮಧ್ಯಭಾಗದಲ್ಲಿರುವ ದೇವಸ್ಥಾನಕ್ಕೆ ವಿವಿಧೆಡೆಯಿಂದ ಸಾವಿರಾರು ಮಂದಿ ಭೇಟಿ ಪಿರಿಯಾಪಟ್ಟಣ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ಮೀಸಲು…
ಎಂ.ಗೂಳೀಪುರ ನಂದೀಶ್ ಕೆಸ್ತೂರು ಪ್ರೌಢಶಾಲೆಯ ಸುತ್ತುಗೋಡೆಯಲ್ಲಿ ಕನ್ನಡ ಸಾಹಿತಿಗಳ, ಸಾಧಕರ ಸೊಗಸಾದ ಚಿತ್ರಗಳ ಚಿತ್ತಾರ ಯಳಂದೂರು: ಶಾಲೆಯ ಸುತ್ತುಗೋಡೆಯಲ್ಲಿ ರಾರಾಜಿಸುತ್ತಿರುವ…