ಶೇಷಾದ್ರಿ ಗಂಜೂರು: ಮಾಧ್ಯಮ ತಜ್ಞರು
ಟೆಹರಾನ್: ಮಧ್ಯಪ್ರಾಚ್ಯದ ಸಂಘರ್ಷಗಳ ಸಮಯದಲ್ಲಿ ಜಾಗತಿಕ ತೈಲ ಬೆಲೆ ಗಗನಕ್ಕೇರುವುದು, ಇದರಿಂದ ಸಾರಿಗೆ ವೆಚ್ಚ ಹೆಚ್ಚಾಗಿ ತರಕಾರಿಯಿಂದ ದಿನಸಿಯವರೆಗೆ ನಮ್ಮ ದಿನನಿತ್ಯದ ಪ್ರತಿಯೊಂದು ವಸ್ತುವೂ ದುಬಾರಿಯಾಗುವುದು ಸತ್ಯವಾದರೂ ಹಳೆಯ ವಿಷಯ. ಆದರೆ ಇದು ಕೇವಲ ಆರಂಭವಷ್ಟೇ.
ಪೆಟ್ರೋಲಿಯಂನ ಉಪ ಉತ್ಪನ್ನಗಳಾದ ಪ್ಲಾಸ್ಟಿಕ್ ಮತ್ತು ರಾಸಾಯನಿಕ ಗೊಬ್ಬರಗಳ ಬೆಲೆ ಈಗ ಏರತೊಡಗಿದೆ. ಗೊಬ್ಬರದ ಬೆಲೆ ಹೆಚ್ಚಾದರೆ ರೈತರ ಮೇಲಿನ ಹೊರೆ ಹೆಚ್ಚಾಗಿ ಆಹಾರ ಧಾನ್ಯಗಳ ಬೆಲೆ ಮತ್ತಷ್ಟು ಏರುತ್ತದೆ.
ಆದರೆ ಇಂದಿನ globalized ಯುಗದಲ್ಲಿ ಜಾಗತಿಕ ಮಾರುಕಟ್ಟೆಯ ಕೊಂಡಿ ಬಹಳ ಸಂಕೀರ್ಣವಾದದ್ದು. ಅಮೆರಿಕ ಇರಾನಿನ ಮೇಲೆ ಬಾಂಬ್ ಹಾಕಿದರೆ ಸಕ್ಕರೆ ಬೆಲೆ ಮೇಲೇರುವುದು ಅಚ್ಚರಿ ಎನ್ನಿಸಬಹುದು. ಆದರೆ, ಅಂತಹ ಲಕ್ಷಣಗಳು ಈಗಾಗಲೇ ಕಾಣುತ್ತಿವೆ. ವಿಶ್ವದ ಅತಿ ದೊಡ್ಡ ಸಕ್ಕರೆ ಉತ್ಪಾದಕ ದೇಶ ಬ್ರೆಜಿಲ್, ತೈಲ ಬೆಲೆ ಏರುತ್ತಿರುವುದರಿಂದ, ತನ್ನ ಕಬ್ಬಿನ ಬೆಳೆ ಕಠಾವಿಗೆ ಬಂದಾಗ ಅದನ್ನು ಸಕ್ಕರೆಯ ಬದಲು ಎಥೆನಾಲ್ ತಯಾರಿಸಲು ಮುಂದಾಗುತ್ತಿದೆಯಂತೆ. ಇದರಿಂದ ಮಾರುಕಟ್ಟೆಯಲ್ಲಿ ಸಕ್ಕರೆಯ ಕೊರತೆ ಉಂಟಾಗಿ ಬೆಲೆ ಏರುವ ಎಲ್ಲಾ ಸಾಧ್ಯತೆಗಳೂ ಇವೆ.
ಹತ್ತು ಸಾವಿರ ಕಿಲೋಮೀಟರ್ ದೂರದ ದೇಶವೊಂದು 3000 ಕಿಮೀ ದೂರದ ಇನ್ನೊಂದು ದೇಶದ ಮೇಲೆ ದಾಳಿ ಮಾಡಿದರೆ 15000 ಕಿಮೀ ದೂರದ ದೇಶದ ಕಾರಣದಿಂದಾಗಿ ಪರಿಣಾಮ ಬೀರುವುದು ಹತ್ತು ಹೆಜ್ಜೆಯೂ ದೂರವಿಲ್ಲದ ನಮ್ಮ ಅಡುಗೆ ಮನೆಯ ಮೇಲೆಯೇ.
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…
ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…
ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…
ಮಂಡ್ಯ: ರಾಜ್ಯದಲ್ಲಿ ಕೆಆರ್ಎಸ್ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವ ಡ್ಯಾಂನಿಂದ…
ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…
ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…