ನಮ್ಮ ಮೈಸೂರ ದಸರಾ 2025

ಮೈಸೂರು ದಸರಾ | ಅರಮನೆ ಅಂಗಳದಲ್ಲಿ ವಿಜಯ್ ಪ್ರಕಾಶ್ ಹವಾ… ಶಿವನಾಮ ಜಪಿಸಿದ ಪ್ರೇಕ್ಷಕರು

ಮೈಸೂರು : ಮೈಸೂರಿನ ವರ ಪುತ್ರ ಕನ್ನಡ ಚಿತ್ರರಂಗದ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಹಾಡುಗಳಿಗೆ ಮೈಸೂರಿಗರು ಮನಸೋತು ಹೋದರು. ನಗರದ ಅರಮನೆ ಆವರಣದ ಅರಮನೆ ವೇದಿಕೆಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2025ರ ಅಂಗವಾಗಿ ಭಾನುವಾರ ಏಳನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿಜಯ್ ಪ್ರಕಾಶ್ ಅವರು ಚಾಮುಂಡೇಶ್ವರಿ ಶಂಕರಿ ಕೀರ್ತನೆಯೊಂದಗೆ ಹಾಡಿನೊಂದಿಗೆ ಪ್ರಾರಂಭಿಸಿ… ಹಂಸಲೇಖ ರಚನೆಯ ಹಬ್ಬ ಹಬ್ಬ ಇದು ಕರಡುನಾಡ ಮನೆ ಮನೆ ಹಬ್ಬ… ಇದು ಚಾಮುಂಡಿ ತಾಯಿ ತವರ ಹಬ್ಬ ಹಾಡು ಹಾಡಿ ರಂಜಿಸಿದರು. ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜ ಕುಮಾರ…ಹಾಡಿಗೆ ಪ್ರೇಕ್ಷಕರೆಲ್ಲ ತಮ್ಮ ಮೊಬೈಲ್ ಕ್ಯಾಮರಾ ಟಾರ್ಚ್ ಆನ್ ಮಾಡಿ, ಹೊಲಾಡಿಸಿ ಧ್ವನಿಗೂಡಿಸಿ ಹಾಡಿ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದರು.

ಹಲೋ ಹಲೋ ನನ್ನ ಮನಸ್ಸು ಇಲ್ಲೆ ಎಲ್ಲೋ… ಒಪನ್ ಹೇರ್ ಬಿಟ್ಕೊಂಡು ಕೂದಲು ಹಾರಾಡ್ಸ್ಕೊಂಡು, ಸಿಂಗಾರ ಸಿರಿಯೇ.. ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡುಗಳು ಪ್ರೇಕ್ಷಕರು ಹಾಗೂ ಪ್ರವಾಸಿಗರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು. ಪೃಥ್ವಿ ಭಟ್, ಶಾಶ್ವತಿ ಕಷ್ಯಪ್ ಮತ್ತು ಅಖಿಲ ಅವರು ಸೂಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಹಾಡನ್ನು ಹಾಡಿ ಪ್ರೇಕ್ಷಕರ ಮನಗೆದ್ದರು.

ವಿಜಯ್ ಪ್ರಕಾಶ್ ಅವರು ಓಂ ಶಿವೋಂ ಹಂ.. ಒಂ ನಮಃ ಶಿವಾಯ ಎಂದು ಶಿವನ ಸ್ತುತಿಯನ್ನು ಸ್ವರ ಸಲ್ಲಾಪಗಳನ್ನು ಪೊಣಿಸಿ ಹಾಡಿದಾಗ ನೆರೆದಿದ್ದವರು ಶಿವ ಜಪದಲ್ಲಿ ಮುಳುಗುವಂತೆ ಮಾಡಿತು.

ಇದನ್ನೂ ಓದಿ:-ಮೈಸೂರು ದಸರಾ | ಅತ್ಯಾಕರ್ಷಕ ಡ್ರೋನ್ ಪ್ರದರ್ಶನಕ್ಕೆ ಮನಸೋತ ಮೈಸೂರಿಗರು

ಕಾಪಿ ರಾಗದಲ್ಲಿ ರೋಜಾ ರೋಜಾ ಹೂವೇ ಎಲ್ಲೆ ನೀ ಎಲ್ಲೆ… ನಗುವ ನಯನ ಮಧುರ ಮೌನ, ಕಲ್ಯಾಣಿ ರಾಗದಲ್ಲಿ ಡಾ.ರಾಜ್ ಕುಮಾರ್ ಅವರ ಕೋಗಿಲೆ ಹಾಡಿದೆ ಕೇಳಿದೆಯ…ಹೊಸ ರಾಗವ ಹಾಡಿದೆ ಆಲಿಸಿಯ, ನಿನ್ನಿಂದಲೇ ನಿನ್ನಿಂದಲೆ ಕನಸೊಂದು ಶುರುವಾಗಿದೆ ಹಾಗೂ ದಾನಿ ರಾಗದಲ್ಲಿ ಯಾವ ಕವಿಯ ಬರೆಯಲಾರ ಒಲವಿನಿಂದ ಹಾಡುಗಳನ್ನು ಉಣಬಡಿಸಿದರು.

ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿಯ ಆಪ್ತಮಿತ್ರ ಸಿನಿಮಾದ ಕಾಲವನ್ನು ತಡೆಯೊರು ಯಾರು ಇಲ್ಲ… ಗಾಳಿಯನ್ನು ಹಿಡಿಯೊರು ಎಲ್ಲೂ ಇಲ್ಲ, ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರದ ಏನಮ್ಮಿ ಏನಮ್ಮಿ ಯಾರಮ್ಮಿ ನೀನಮ್ಮಿ, ಸುದೀಪ್ ನಟನೆಯ ಕೋಟಿಗೊಬ್ಬ-2 ಚಿತ್ರದ ಸಾಲುತ್ತಿಲ್ಲವೆ ಸಾಲುತ್ತಿಲ್ಲವೆ….ನಿನ್ನ ಹಾಗೆ ಮತ್ತು ಬೇರೆ ಏನಿದೆ ಹಾಡುಗಳನ್ನು ಪ್ರೇಕ್ಷಕರು ಬಾಯಲ್ಲಿ ಗುನುಗುಂವೆ ಮಾಡಿದವು.

ಯಾರೆ ಬಂದರು ಎದುರ್ಯಾರೆ ನಿಂತರು ಪ್ರೀತಿ ಹಂಚುವ ಯಜಮಾನ, ಸಂತೋಷಕ್ಕೆ ಹಾಡು ಸಂತೋಷಕ್ಕೆ…ಕುಣಿದು ತಾಳಕ್ಕೆ ಕುಣಿದು, ಒಹೋ ಬಂತು ಶ್ರಾವಣ, ಬೈದು ಬುದ್ಧಿ ಹೇಳು ಬದ್ರರ್ ಫ್ರಮ್ ಅನದರ್ ಮದರ್ ಹಾಡಗಳು ಮೂಲಕ ರಂಜಿಸಿದರು.

ವಿಜಯ್ ಪ್ರಕಾಶ್ ಅವರು ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು, ಪ್ರಥ್ವಿ ಭಟ್ ಜಟಕಾ ಕುದುರೆ ಹತ್ತಿ ಪ್ಯಾಟೆಗೋಮಾ, ಗಣೇಶ್ ಅವರು ಕೂರಕ್ ಕುಕ್ಕರಹಳ್ಳಿ ಕೆರೆ, ಶಾಶ್ವತಿ ಸೇಕ್ ಹಿಟ್ ಪುಷ್ಪವತಿ, ಭಾರ್ಗವ್ ಸಿಕ್ಕ ಪಟ್ಟೆ ಇಷ್ಟ ಪಟ್ಟೆ ಹೈ ಲೈಕ್ ಹಿಟ್, ಅಖಿಲ ಕೈನಾಗೆ ಮೈಕ್ ಹಿಟ್ರೆ ನಾನ್ ಸ್ಟಾಂಪ್ ಭಾಷಣ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ, ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ… ಮಠದಲ್ಲಿ ಮೇಲ್ಯಾವುದೊ ಎಂದು ಹಾಡಿ ಜೈಹೊ..ಜೈಹೊ…ಹಾಡನ್ನು ಪೊಲೀಸರಿಗೆ ಸಮರ್ಪಿಸಿದರು.

ಇದಕ್ಕೂ ಮೊದಲು ಬೆಂಗಳೂರಿನ ಭೂತಾಯಿ ಬಳಗದಿಂದ ಪರಿವರ್ತನಾ ತತ್ವ ಪದಗಳು ಪ್ರೇಕ್ಷಕರ ಮನ ಮುಟ್ಟಿದರೆ, ತದನಂತರ ಅಂತರರಾಷ್ಟ್ರೀಯ ಖ್ಯಾತ ಕಲಾವಿದರಿಂದ
ಕುಚ್ಚುಪುಡಿ ನೃತ್ಯ ನೋಡಗರ ಗಮನ ಸೆಳೆಯಿತು.

ಆಂದೋಲನ ಡೆಸ್ಕ್

Recent Posts

ಈವರೆಗೂ ಇರಾನ್‌ನಿಂದ 67 ಸಾವಿರ ಭಾರತೀಯರನ್ನು ಕರೆ ತಂದಿದ್ದೇವೆ: ಸಚಿವ ಜೈಶಂಕರ್‌

ನವದೆಹಲಿ: ಇರಾನ್-‌ಇಸ್ರೇಲ್‌ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ಸಿಲುಕಿದ್ದ 67 ಸಾವಿರ ಭಾರತೀಯರನ್ನು ಕರೆ ತಂದಿದ್ದೇವೆ ಎಂದು ವಿದೇಶಾಂಗ ಸಚಿವ ಜೈಶಂಕರ್‌…

30 mins ago

ಮಾರ್ಚ್.‌11ರಿಂದ ವೈದ್ಯರ ಮುಷ್ಕರ ಫಿಕ್ಸ್:‌ ಸರ್ಕಾರಿ ಆಸ್ಪತ್ರೆಗಳ ಓಪಿಡಿ ಸೇವೆ ಬಂದ್‌

ಬೆಂಗಳೂರು: ರಾಜ್ಯದ ಸರ್ಕಾರಿ ವೈದ್ಯರು ತಮ್ಮ ದೀರ್ಘಕಾಲದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್.‌11ರಿಂದ ರಾಜ್ಯಾದ್ಯಂತ ಬೃಹತ್‌ ಪ್ರತಿಭಟನೆಗೆ ಕರೆ…

42 mins ago

ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ

ಬೆಂಗಳೂರು: ನಿರ್ಮಾಣ ಹಂತದಲ್ಲಿರುವ ಅಥವಾ ಪೂರ್ಣಗೊಂಡಿರುವ ಕಟ್ಟಡಗಳಿಗೆ ವಾಸಯೋಗ್ಯ ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು…

58 mins ago

ಶಾಸಕ ಬಸವರಾಜ್‌ ಶಿವಗಂಗಾ ಪಿಎ ಆತ್ಮಹತ್ಯೆಗೆ ಶರಣು

ಬೆಂಗಳೂರು: ಚನ್ನಗಿರಿ ಶಾಸಕ ಬಸವರಾಜ್‌ ಶಿವಗಂಗಾ ಅವರ ಪಿಎ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬೆಂಗಳೂರು ನಗರದ ಉಪ್ಪಾರಪೇಟೆ…

1 hour ago

ಕರೂರು ಕಾಲ್ತುಳಿತ ದುರಂತ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ನಟ ವಿಜಯ್‌ಗೆ ಮತ್ತೆ ಸಮನ್ಸ್‌

ಚೆನ್ನೈ: ನಟ ಹಾಗೂ ತಮಿಳಿಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ವಿಜಯ್‌ ಅವರಿಗೆ ಸಿಬಿಐ ಮತ್ತೆ ಸಮನ್ಸ್‌ ನೀಡಿದೆ. ಕಳೆದ…

1 hour ago

ಮಡಿಕೇರಿ| ಕಾಡಾನೆ ದಾಳಿ: ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಸಾವು

ಮಡಿಕೇರಿ: ಕಾಡಾನೆ ದಾಳಿಗೆ ಗ್ರಾಮ ಪಂಚಾಯತ್‌ ಮಾಜಿ ಸದಸ್ಯೆಯೊಬ್ಬರು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ. ತಾಲ್ಲೂಕಿನ ವಾಲ್ನೂರಿನಲ್ಲಿ…

2 hours ago