ನಮ್ಮ ಮೈಸೂರ ದಸರಾ 2025

Mysuru Dasara | ದಸರಾಗೆ ಮತ್ತಷ್ಟು ಮೆರಗು ತಂದ ಏರ್‌ ಶೋ ; ಸಾಹಸಮಯ ಪ್ರದರ್ಶನ

ಮೈಸೂರು : ಬಾನಂಗಳದಲ್ಲಿ ಹಾರುವ ಲೋಹದ ಹಕ್ಕಿಗಳ ಸಾಹಸಮಯ ಪ್ರದರ್ಶನ ನಾಡಹಬ್ಬ ದಸರಾ ಮಹೋತ್ಸವಕ್ಕೆ ಮತ್ತಷ್ಟು ಕಳೆ ತಂದಿದೆ.

ಗುರುವಾರ ಬನ್ನಿಮಂಟಪ(ಕವಾಯತು) ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈಮಾನಿಕ ಪ್ರದರ್ಶನದ ಪೂರ್ವಭ್ಯಾಸದ ರೋಮನಾಚರಣಕಾರಿ ಪ್ರದರ್ಶನವನ್ನು ಕಂಡು ಮೈಸೂರಿನ ಜನತೆ ಕುಣಿದು ಕುಪ್ಪಳಿಸಿದರು.

ಸಾರಂಗ ಕೇಂದ್ರ ವೈಮಾನಿಕ ಪ್ರದರ್ಶನದ 5 ಹೆಲಿಕ್ಯಾಪ್ಟರ್ ಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದು, ಮಿಂಚಿನ ರೀತಿ ಶರವೇಗದಲ್ಲಿ ಹಾರುವ ಪ್ರದರ್ಶನದ ಚಿತ್ತಾರವನ್ನು ಜನ ಕಣ್ತುಂಬಿಕೊಂಡರು.

ಇದನ್ನು ಓದಿ : ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಪಾರಂಪರಿಕ ಸೈಕಲ್ ಸವಾರಿ

ನೀಲಿ ಗಗನದಲ್ಲಿ ಓಲಾಡಿ- ತೇಲಾಡಿದ ಲೋಹದ ಹಕ್ಕಿಗಳು ಬಣ್ಣ ಬಣ್ಣದ ಹೊಗೆಯ ಮೂಲಕ ಹೃದಯ ಬಿಳಿ ಗೆರೆಗಳನ್ನು ಬರೆಯುವುದರ ಮೂಲಕ ರೋಮಾಂಚನಕಾರಿ ದೃಶ್ಯಕ್ಕೆ ಪಾತ್ರವಾದವು.

ಆಗಸದಲ್ಲಿ ಮೈನವಿರೇಳುವ ಮೈಮಾನಿಕ ಪ್ರದರ್ಶನವನ್ನು ಕಂಡು ಪ್ರೇಕ್ಷಕರು ಪುಳಕಿತಗೊಂಡರು. ಅನೇಕ ರೋಮಾಂಚನಕಾರಿ ಅನುಭವಕ್ಕೆ ಇಂದು ನಡೆದ ವೈಮಾನಿಕ ಪ್ರದರ್ಶನ ಸಾಕ್ಷಿಯಾದವು. ಬಾನಂಗಳಕ್ಕೆ ಹೇರಿ ನೆಲಕ್ಕೆ ರಪ್ಪನೆ ಬೀಳುವ ರೀತಿಯಲ್ಲಿ ಪ್ರದರ್ಶನ ನೀಡಿ ನೋಡುಗರನ್ನು ಅಚ್ಚರಿ ಗೊಳಿಸಿದವು.

ಪೂರ್ವಬ್ಯಾಸ ಪ್ರದರ್ಶನಕ್ಕೆ ಇಡೀ ಕವಾಯತು ಮೈದಾನ ಭರ್ತಿ ಆಗಿದ್ದು, ಸೆಪ್ಟೆಂಬರ್ 27 ರಂದು ಸಂಜೆ 5 ಗಂಟೆಗೆ ನಡೆಯುವ ವೈಮಾನಿಕ ಪ್ರದರ್ಶನಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವೈಮಾನಿಕ ಪ್ರದರ್ಶನ ಕಣ್ತುಂಬಿಕೊಳ್ಳಲು ಮೈಸೂರಿನ ಜನತೆ ಕಾಯುತ್ತಿದ್ದಾರೆ, ಒಟ್ಟಾರೆ ಈ ಬಾರಿಯ ವೈಮಾನಿಕ ಪ್ರದರ್ಶನ ದಸರಾ ಮಹೋತ್ಸವಕ್ಕೆ ಇನ್ನಷ್ಟು ಮೆರುಗನ್ನು ತರಲಿದೆ.

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

49 mins ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

5 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

5 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

5 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

5 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

5 hours ago