ಮೈಸೂರು ನಗರ

ಸಾಹಿತಿಗಳೇ ಪ್ರಬಂಧ ಸಾಹಿತ್ಯ ಬೆಳೆಸಿದವರು: ಪ್ರೊ.ಸಿ.ನಾಗಣ್ಣ

ಮೈಸೂರು: ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಿಗೆ ಶಕ್ತಿ ತುಂಬಿದ ಮುಂಚೂಣಿ ಸಾಹಿತಿಗಳು ಪ್ರಬಂಧ ಸಾಹಿತ್ಯವನ್ನು ಗಟ್ಟಿಯಾಗಿ ಬೆಳೆಸಿದರು ಎಂದು ಹಿರಿಯ ವಿದ್ವಾಂಸ ಪ್ರೊ.ಸಿ. ನಾಗಣ್ಣ ಅಭಿಪ್ರಾಯಪಟ್ಟರು.

ಬಿ.ಕೆ. ಮೀನಾಕ್ಷಿ ಅವರ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ‘ನಗುವಿನಿಬ್ಬನಿ ಮಿನುಗುತಿರಲಿ’ ಪ್ರಬಂಧ ಸಂಕಲನ ಕುರಿತು ಮಾತನಾಡಿದರು.

ಇಪ್ಪತ್ತನೇ ಶತಮಾನದಲ್ಲಿ ಈ ಪ್ರಕಾರವನ್ನು ಚೈತನ್ಯಗೊಳಿಸಿದ ಪುತಿನ, ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಎ.ಎನ್‌. ಮೂರ್ತಿರಾಯರು, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ನಾ. ಕಸ್ತೂರಿ, ವಿ. ಸೀತಾರಾಮಯ್ಯ, ಎಂ.ವಿ. ಸೀತಾರಾಮಯ್ಯ, ವಿ.ಕೃ. ಗೋಕಾಕ, ಹಾ.ಮಾ. ನಾಯಕ, ಎಂ.ಎಸ್‌. ಕಾಮತ್‌, ಶ್ರೀರಂಗ, ಎಚ್ಚೆಸ್ಕೆ, ತೀನಂಶ್ರೀ, ಸಿದ್ದವನಹಳ್ಳಿ ಕೃಷ್ಣ ಶರ್ಮ, ಎಚ್‌.ಎನ್‌. ನಾಗೇಗೌಡ ಮುಂತಾದವರನ್ನು ನೆನೆಯಲೇಬೇಕಾಗಿದೆ ಎಂದರು.

ಕನ್ನಡದ ಪ್ರಬಂಧ ಸಾಹಿತ್ಯ ಇಂಗ್ಲಿಷ್‌ ಪ್ರಬಂಧಕಾರರೆಲ್ಲರ ಚೈತನ್ಯವನ್ನುಂಡು ಬೆಳೆದಿದೆ. ನಂದಳಿಕೆ ನಾರಾಯಣಪ್ಪನೇ ಕನ್ನಡ ಸಾಹಿತ್ಯದ ಪ್ರಬಂಧ ಪ್ರಕಾರದ ಪಿತಾಮಹ ಎಂದು ಗೋವಿಂದ ಪೈ ಹೇಳಿದ್ದಾರೆ. ಅದೇ ರೀತಿ ಬಿ.ವೆಂಕಚಾಚಾರ್ಯರ 1913 ರಲ್ಲಿ ಪ್ರಕಟವಾದ ‘ದಾದಿಯ ಹೇಳಿಕೆ’ ಪ್ರಬಂಧವೇ ಕನ್ನಡದ ಮೊದಲ ಲಲಿತ ಪ್ರಬಂಧ ಎಂಬ ವಾದವೂ ಇದೆ ಎಂದರು.

ಮೀನಾಕ್ಷಿಯವರ ಬರಹಗಳ ಮೊತ್ತವನ್ನು ಗಮನಿಸಿದರೆ ಪ್ರಬಂಧ ಅವರ ಒಲವಿನ ಪ್ರಕಾರವೆಂಬುದು ಸ್ಪಷ್ಟವಾಗುತ್ತದೆ. ದಶಕಗಳ ಕಾಲ ಚಿಕ್ಕ ಮಕ್ಕಳಿಗೆ ಪಾಠ ಹೇಳುತ್ತಲೇ ಬರಹವನ್ನು ಸೂಕ್ಷ್ಮಗೊಳಿಸಿಕೊಂಡಿರುವ ಅವರು, ತಮ್ಮ ವೃತ್ತಿ ಜೀವನದ ಅನುಭವಗಳನ್ನು ಯುಕ್ತವಾದ ರೀತಿಯಲ್ಲಿ ಹೆಕ್ಕಿ ತೆಗೆದು ಅವುಗಳನ್ನು ಸಮಯೋಚಿತವಾಗಿ ಸಂಯೋಜನೆಗೊಳಿಸಿ ತಮ್ಮ ಪ್ರಬಂಧಗಳಿಗೆ ಜೀವ ತುಂಬಿದ್ದಾರೆ ಎಂದು ಅವರು ಶ್ಲಾಘಿಸಿದರು.

ಲಘು ಧಾಟಿಯ ಪ್ರಬಂಧಗಳಿಗೆ ವ್ಯಂಗ್ಯದ ದೃಷ್ಟಿ ಬಹಳ ಮುಖ್ಯ. ಇಲ್ಲಿಯ ಪ್ರಬಂಧಗಳಲ್ಲಿ ವ್ಯಂಗ್ಯದಲ್ಲಿ ಕುಹಕವಿಲ್ಲದಿದ್ದರಿಂದ ಅವು ಹಿತವಾಗುತ್ತವೆ. ಇಲ್ಲಿ 30 ಪ್ರಬಂಧಗಳಿದ್ದು, ಲವಲವಿಕೆ ಇದೆ. ಉಲ್ಲಾಸವಿದೆ. ಸಮಾಜದ ಅಂಕುಡೊಂಕು ತಿದ್ದುವ ಇರಾದೆಯಿದ್ದರೂ ಎಲ್ಲೂ ಕುಹಕದ ಕಹಿಯಿಲ್ಲ. ಔದಾರ್ಯದ ಮಸ್ಲಿನ್‌ ಬಟ್ಟೆಯನ್ನು ಎಲ್ಲರ ಮೇಲೂ ಹೊದಿಸಿದ ಅನುಭವವಾಗುತ್ತದೆ ಎಂದು ಅವರು ಹೇಳಿದರು.

ಸದಾ ನಿಮ್ಮೊಂದಿಗೆ’ ಅಂಕಣ ಬರಹಗಳನ್ನು ಕುರಿತು ಜೆಎಸ್ಎಸ್‌ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಇಲ್ಲಿರುವ ಲೇಖನಗಳು ಜ್ಞಾನದ ಜೊತೆಗೆ ವಿನಯವನ್ನು ಉದ್ದೀಪನಗೊಳಿಸುತ್ತವೆ. ಬಹುತೇಕ ಲೇಖನಗಳು ಪ್ರೀತಿ ಮೂಡಿಸುತ್ತವೆ. ಸಂದೇಶವನ್ನು ನೀಡುತ್ತವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮೇಲುಕೋಟೆ ವಂಗೀಪುರದ ನಂಬೀಠದ ಶ್ರೀ ಇಳೈ ಆಳ್ವಾರ್‌ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿರುವ ಹಳೆಯ ಕಾಲದ ಓಲೆಗರಿ ಗ್ರಂಥಗಳನ್ನು ರಕ್ಷಿಸಬೇಕಾಗಿದೆ ಎಂದರು.

‘ಮೋನು ಮತ್ತು ಆನೆ’, ‘ಸದಾ ನಿಮ್ಮೊಂದಿಗೆ’ ಹಾಗೂ ‘ನಗುವಿನಿಬ್ಬನಿ ಮಿನುಗುತಿರಲಿ’ ಕೃತಿಗಳನ್ನು ಹಿರಿಯ ಸಂಸ್ಕೃತ ವಿದ್ವಾಂಸ ಡಾ.ಎಚ್‌.ವಿ. ನಾಗರಾಜ ರಾವ್‌ ಬಿಡುಗಡೆ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಬಿ.ಕೆ. ಮೀನಾಕ್ಷಿ ಅವರು ತಮ್ಮ ಪ್ರೌಢಶಾಲಾ ಶಿಕ್ಷಕಿ ದಾವಣಗೆರೆಯ ಕಮಲಮ್ಮ ದಂಪತಿಗೆ ಗುರುವಂದನೆ ಸಲ್ಲಿಸಿದರು.

ಪುಟಾಣಿ ಇಳಾ ‘ಮೋನು ಮತ್ತು ಆನೆ’ ಕತೆ ಹೇಳಿದರೆ, ಸಿ.ವಿ. ಧನ್ವ ಇಂಗ್ಲಿಷ್‌ ಕವನ ವಾಚಿಸಿದರು. ರಂಗನಾಥ್‌ ಮೈಸೂರು ಸ್ವಾಗತಿಸಿದರು. ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಉಷಾ ನರಸಿಂಹನ್‌ ನಿರೂಪಿಸಿದರು. ಎಚ್‌. ನಿವೇದಿತಾ ವಂದಿಸಿದರು.

ಆಂದೋಲನ ಡೆಸ್ಕ್

Recent Posts

6 ದಿನಗಳಾದರೂ ಸಿಗದ ಟೆಕ್ಕಿ ಅದ್ವೈತ್‌ ಸುಳಿವು: ಶಿವಗಂಗೆ ಬೆಟ್ಟದಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್‌ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…

1 hour ago

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.‌ಅಶೋಕ್‌ ಹಾಗೂ ಸಿಎಂ ಡಿ.ಕೆ.ಶಿವಕುಮಾರ್‌…

2 hours ago

ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗಕ್ಕೆ ನುಗ್ಗಿದ ನೀರು: 7 ಮಂದಿ ಕಾರ್ಮಿಕರು ಸಾವು

ಡೆಹ್ರಾಡೂನ್:‌ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…

4 hours ago

ಓದುಗರ ಪತ್ರ: ಸ್ವಾಗತಾರ್ಹ ಸಂಕಲ್ಪ!

ಸ್ವಾಗತಾರ್ಹ ಸಂಕಲ್ಪ! ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು ‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ ಈ ಭ್ರಷ್ಟಾಚಾರ ಎಂಬ…

7 hours ago

ಓದುಗರ ಪತ್ರ: ಸತ್ಪ್ರಜೆಗಳಾಗಿ ಜೀವಿಸುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ನೀಡುವ ಗೌರವ

ಆಗಸ್ಟ್ ಹದಿನೈದು ಬಂತೆಂದರೆ ಸಾಕು, ನಮ್ಮಲ್ಲಿ ದೇಶಪ್ರೇಮದ ರೋಮಾಂಚನ. ಶಾಲೆ-ಕಚೇರಿಗಳಲ್ಲಿ ರಾಷ್ಟ್ರಧ್ವಜರೋಹಣ, ಸಿಹಿತಿಂಡಿ ಹಂಚಿಕೆ, ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳು…

7 hours ago

ಓದುಗರ ಪತ್ರ: ಸೇತುವೆ ಅವ್ಯವಸ್ಥೆ; ಸಂಚಾರ ದುಸ್ತರ

ಮೈಸೂರು ತಾಲ್ಲೂಕಿನ ಬ್ಯಾತಹಳ್ಳಿ ಮತ್ತು ದಡದಹಳ್ಳಿ ನಡುವೆ ಹರಿಯುತ್ತಿರುವ ಎಣ್ಣೆಹೊಳೆ ದಾಟಲು ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ದುಸ್ಥಿತಿಯಲ್ಲಿದೆ. ಈ…

7 hours ago