ಮೈಸೂರು ನಗರ

ದಸರಾ ಉದ್ಘಾಟಕರ ಬಗ್ಗೆ ಕೇಂದ್ರ ಸಚಿವ ವಿ.ಸೋಮಣ್ಣ ಆಕ್ಷೇಪ

ಮೈಸೂರು: ನಂಬಿಕೆಗೆ ಮತ್ತೊಂದು‌ ಹೆಸರು ಚಾಮುಂಡಿ ಬೆಟ್ಟ. ಆದರೆ ರಾಜ್ಯ ಸರ್ಕಾರ ಪದೇ ಪದೇ ಯಡವಟ್ಟು ಮಾಡುತ್ತಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ನಾನೂ ಕೂಡ ಒಂದು ಬಾರಿ ಉಸ್ತುವಾರಿ ಸಚಿವನಾಗಿ ದಸರಾ ನಿರ್ವಹಿಸಿದ್ದೇನೆ. ನಂಬಿಕೆಗೆ ಮತ್ತೊಂದು‌ ಹೆಸರು ಚಾಮುಂಡಿ ಬೆಟ್ಟ. ಆದರೆ ರಾಜ್ಯ‌ ಸರ್ಕಾರ ಪದೇ ಪದೇ ಯಡವಟ್ಟು ಮಾಡ್ತಿದೆ.

ಇದನ್ನು ಓದಿ:ಬಾನು ಮುಷ್ತಾಕ್ ದಸರಾ ಉದ್ಘಾಟಿಸಲು ವಿರೋಧವೇಕೆ?

ಸಾಮಾಜಿಕ,‌ ಧಾರ್ಮಿಕವಾಗಿ ಪೂರ್ವಜರು‌ ನೀಡಿದ ರೀತಿ ನಡೆದುಕೊಳ್ಳಿ. ಯಾರನ್ನೋ ತೃಪ್ತಿಪಡಿಸಲು ಈ ರೀತಿ ಮಾಡುವುದು ಸರಿಯಲ್ಲ. ಯಾರನ್ನ ಮಾಡಿದ್ದೀರಿ ಅವರಿಗೆ ತಾಯಿಯ ಮೇಲೆ ಗೌರವ ಇರಬೇಕು. ಅವರು ಎಷ್ಟರ ಮಟ್ಟಿಗೆ ಅರ್ಹರು ಎಂಬುದನ್ನು ಚರ್ಚಿಸಲ್ಲ. ಸರ್ಕಾರ ಉದ್ಘಾಟಕರ ವಿಚಾರದಲ್ಲಿ ಗೊಂದಲ ಮಾಡಬಾರದು. ರಾಜ್ಯ ಸರ್ಕಾರ ಶಿಷ್ಠಾಚಾರವನ್ನು ಪಾಲಿಸಬೇಕು. ಸರ್ಕಾರಕ್ಕೆ ಸದ್ಭುದ್ಧಿ‌ ಕೊಡಲಿ ಎಂದು ಬೇಡಿಕೊಳ್ತೀನಿ. ತಾಯಿ ಮನಸು‌ ಗೆದ್ದರೆ ರಾಜ್ಯಕ್ಕೂ‌ ಒಳಿತು, ಸರ್ಕಾರಕ್ಕೂ ಒಳಿತು ಎಂದು ಹೇಳಿದರು.

ಇನ್ನು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಾವಿರ ಸರಿ ಸುಳ್ಳು ಹೇಳಿದರೂ ಸತ್ಯ ಆಗಲ್ಲ. ಈ ಮಾತಿಗೆ ಧರ್ಮಸ್ಥಳ ಪ್ರಕರಣವೇ ತಾಜ ನಿದರ್ಶನ. ಯಾರ್ ಯಾರೋ‌, ಏನ್ ಏನೋ‌ ಹೇಳಿದ್ರು. ಆದರೆ ಸತ್ಯ ಏನು ಅಂತ ಹೊರಗೆ ಬಂದಿದೆ. ಎಸ್‌ಐಟಿ‌ ರಚನೆಯಾದಾಗ ಮೊದಲು ಸ್ವಾಗತಿಸಿದ್ದೆ ನಾನು. ಧರ್ಮಸ್ಥಳಕ್ಕೆ ಅಂಟಿರುವ ಕಳಂಕ ದೂರವಾಗುತ್ತಿದೆ. ಅಣ್ಣಪ್ಪಸ್ವಾಮಿ, ಮಂಜುನಾಥಸ್ವಾಮಿ ಕೆಡಕು ಬಯಸಿದರೆ ಸದ್ಭುದ್ಧಿ ಕೊಡಲಿ. ಆ ದೇವರಿಗೆ ನಮ್ಮ ಪ್ರಣಾಮಗಳು. ಈಗ ಆಗಿರುವುದೇ ಸಾಕು. ಸರ್ಕಾರ ಪಶ್ಚಾತ್ತಾಪ ಪಟ್ಟುಕೊಳ್ಳಲಿ. ಮುಂದೆಯಾದರೂ ಧಾರ್ಮಿಕ ತಾಣಗಳ ಬಗ್ಗೆ ಯಾರೇ ಮಾತನಾಡುವಾಗಲೂ ಎಚ್ಚರಿಕೆ ವಹಿಸಬೇಕು. ನಾನು ಮೊದಲಿನಿಂದಲೂ ಕೂಡ ಧರ್ಮಸ್ಥಳದ ಪರ ನಿಂತಿದ್ದೆ ಎಂದರು.

ಆಂದೋಲನ ಡೆಸ್ಕ್

Recent Posts

ಉತ್ತರ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ವಿಮಾನ ಪತನ: ಇಬ್ಬರು ಪೈಲಟ್‌ಗಳು ಬಚಾವ್‌

ಉತ್ತರ ಪ್ರದೇಶ: ಇಲ್ಲಿನ ಪ್ರಯಾಗ್‌ರಾಜ್‌ನಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ಭಾರತೀಯ ವಾಯುಪಡೆಯ ಮೈಕ್ರೋಲೈಟ್‌ ವಿಮಾನವೊಂದು ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳನ್ನು…

40 mins ago

ನೈಸರ್ಗಿಕ ಕೃಷಿ ಪದ್ಧತಿ ಎಲ್ಲರ ಪಾಲಿಗೆ ಜೀವನೋಪಾಯವಾಗಲಿ: ಡಾ. ಶರಣ ಪ್ರಕಾಶ್‌ ಪಾಟೀಲ್

ಬೆಂಗಳೂರು: ಕರ್ನಾಟಕದಲ್ಲಿ ಜೀವನೋಪಾಯಕ್ಕೆ ಅದರಲ್ಲೂ ಮಹಿಳೆಯರ ಜೀವನೋಪಾಯಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ ನೃಸರ್ಗಿಕ ಕೃಷಿ ಪದ್ಧತಿಯ ಬಗ್ಗೆ…

50 mins ago

ಚಾಮುಂಡಿಬೆಟ್ಟದ ಪಾರಂಪರಿಕತೆಗೆ ಧಕ್ಕೆಯಾಗದಂತೆ ಅಭಿವೃದ್ಧಿ: ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು: ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದ ಪಾರಂಪರಿಕತೆಗೆ ಯಾವುದೇ ಧಕ್ಕೆ ಆಗದಂತೆ ಅಭಿವೃದ್ಧಿ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ…

1 hour ago

ಅಶ್ಲೀಲ ಮೆಸೇಜ್‌ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ದರ್ಶನ್‌ ಪತ್ನಿ ವಿಜಯಲಕ್ಷ್ಮೀಗೆ ಸಿಸಿಬಿ ನೋಟಿಸ್‌

ಬೆಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ಅಶ್ಲೀಲ ಮೆಸೇಜ್‌, ಕಮೆಂಟ್‌ ಮಾಡಿ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದರ್ಶನ್‌ ಪತ್ನಿ ವಿಜಯಲಕ್ಷ್ಮೀಗೆ ಸಿಸಿಬಿ ಪೊಲೀಸರು…

1 hour ago

ಹಾಸನ| ಕುಡಿದ ಮತ್ತಿನಲ್ಲಿ ಸ್ನೇಹಿತನ ಕೊಲೆ

ಹಾಸನ: ಕುಡಿದ ಮತ್ತಿನಲ್ಲಿ ಗೆಳೆಯರು ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ. ಗಣೇಶ್‌…

2 hours ago

ಚಾಮುಂಡಿಬೆಟ್ಟ ಉಳಿಸಿ: ಅಭಿವೃದ್ಧಿ ಕಾಮಗಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ಮೈಸೂರು: ನಾಡಿನ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟವನ್ನು ಉಳಿಸುವಂತೆ ಒತ್ತಾಯಿಸಿ ಸಾರ್ವಜನಿಕರು ಹಾಗೂ ಪರಿಸರವಾದಿಗಳು ಪ್ರತಿಭಟನೆ ನಡೆಸಿದರು. ಚಾಮುಂಡೇಶ್ವರಿ ದೇವಸ್ಥಾನದ…

3 hours ago