ಮೈಸೂರು ನಗರ

ಉತ್ತರ ಭಾರತೀಯರು ಗತಿಯಿಲ್ಲದೇ ಕರ್ನಾಟಕಕ್ಕೆ ಬರುತ್ತಾರೆ: ಮಾಜಿ ಸಂಸದ ಪ್ರತಾಪ್‌ ಸಿಂಹ

ಮೈಸೂರು: ಬೆಂಗಳೂರಿನಲ್ಲಿ ಟೆಕ್ಕಿ ಮೇಲೆ ಹಲ್ಲೆ ನಡೆಸಿದ್ದ ವಿಂಗ್ ಕಮಾಂಡರ್ ವಿರುದ್ಧ ಮಾಜಿ ಸಂಸದ ಪ್ರತಾಪ್‌ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಉತ್ತರ ಭಾರತೀಯರ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗತಿ ಇಲ್ಲದೆ ಜೀವನ ನಡೆಸೋದಕ್ಕೆ ಇಲ್ಲಿಗೆ ಬರುವ ನೀವೂ ಕನ್ನಡ ಕಲಿಯಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.

‘ಆಕಸ್ಮಿಕ ಅಪಘಾತಕ್ಕೆ ಬೇರೆಯದೆ ಬಣ್ಣ ಕಟ್ಟಿದ್ದಾರೆ. ಇದನ್ನೆ ಸತ್ಯ ಎಂದು ನಂಬಿ ರಾಷ್ಟ್ರೀಯ ಮಾಧ್ಯಮಗಳು ಇದನ್ನು ವೈಭವೀಕರಿಸುವ ಕೆಲಸ ಮಾಡಿದರು. ಈ ಪ್ರಕರಣದಲ್ಲಿ ಕನ್ನಡಿಗರನ್ನು ನಕಾರಾತ್ಮಕವಾಗಿ ಚಿತ್ರಿಸುವ ಕೆಲಸ ಆಗುತ್ತಿದೆ. ಕನ್ನಡಿಗರು ಯಾರ ಮೇಲೂ ದಬ್ಬಾಳಿಕೆ ಮಾಡುವ ಜನ ಅಲ್ಲ. ಕನ್ನಡ ಮಾತಾಡಿ ಎಂದು ಹೇಳಿದ್ದರು ಅದರಲ್ಲಿ ತಪ್ಪೇನಿದೆ.? ಎಂದು ಪ್ರಶ್ನೆ ಮಾಡಿದರು.

ಇನ್ನು ಉತ್ತರ ಭಾರತದಲ್ಲಿ ಒಳ್ಳೆಯ ಇಂಜಿನಿಯರಿಂಗ್ ಕಾಲೇಜು ಇಲ್ಲ, ಮೆಡಿಕಲ್ ಕಾಲೇಜೂ ಇಲ್ಲ. ಹೀಗಾಗಿ ಗತಿ ಇಲ್ಲದೆ ಕರ್ನಾಟಕಕ್ಕೆ ಬರುತ್ತಾರೆ. ಇಲ್ಲೇ ವಾಸವಿದ್ದ ಮೇಲೆ ಕನ್ನಡ ಕಲಿಯೋದು ನಿಮ್ಮ ಕರ್ತವ್ಯ. ಹತ್ತಾರು ವರ್ಷಗಳಿಂದ ಇದ್ದ ಮೇಲೆ ಕನ್ನಡ ಕಲಿಯಬೇಕು ಅಲ್ವಾ? ನೀವು ಇಲ್ಲೆ ಇರಿ ಎಂದು ನಾವೇನೂ ನಿಮ್ಮ ಕೈ ಕಾಲು ಕಟ್ಟಿಲ್ಲ. ಉತ್ತರ ಭಾರತದಲ್ಲಿ ಒಳ್ಳೆಯ ಕಂಪನಿ ಇಲ್ಲ ಎಂದು ಕರ್ನಾಟಕಕ್ಕೆ ಬಂದಿದ್ದಿರಿ. ನಾವೇನೂ ನಿಮ್ಮನ್ನು ಕರೆದಿಲ್ಲ ಅದು ನೆನಪಿರಲಿ ಎಂದು ಕಿಡಿಕಾರಿದರು.

ಮುಂದುವರಿದು ಮಾತನಾಡಿದ ಅವರು, ನಿಮಗೆ ಇಲ್ಲಿ ಜೀವನ ಬೇಕು, ಆದರೆ ನಮ್ಮ ಭಾಷೆ ಬೇಡ ಅಂದರೆ ಹೇಗೆ. ಇಲ್ಲಿಯ ಭಾಷೆ ಬೇಡ ಅಂದ ಮೇಲೆ ನಿಮ್ಮ ಊರಲ್ಲೆ ಇರಿ. ಭಾಷೆ ಬಗ್ಗೆ ತಾತ್ಸಾರ ಮಾಡಕೂಡದು. ಉತ್ತರ ಭಾರತೀಯರು ಈ ರೀತಿ ಮನೋಭಾವವನ್ನು ಮೊದಲೇ ಬಿಡಬೇಕು ಎಂದರು.

ಇನ್ನು ಹಲ್ಲೆ ಮಾಡಿರುವ ವಿಂಗ್​ ಕಮಾಂಡರ್​ನನ್ನು ಕೂಡಲೇ ಬಂಧಿಸಬೇಕು. ಆತನಿಂದ ಕನ್ನಡಿಗರ ಬಳಿ ಕ್ಷಮೆ ಕೇಳಿಸಬೇಕು. ಹಲ್ಲೆ ನಡೆಸಿದ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡಬೇಕು. ಉತ್ತರ ಭಾರತೀಯರು ಯಾಕೆ ಚೆನ್ನೈನಲ್ಲಿ ಬಾಲ ಬಿಚ್ಚಲ್ಲ. ಉತ್ತರ ಭಾರತೀಯರು, ಮಲೆಯಾಳಿಗಳು ಅವರ ಊರಿನಲ್ಲಿ ಗತಿ ಇಲ್ಲದೆ ಇಲ್ಲಿಗೆ ಬಂದಿದ್ದಾರೆ. ತಿನ್ನೋಕು ಅವರಿಗೆ ಅವರ ಊರಿನಲ್ಲಿ ಗತಿ ಇಲ್ಲ. ಅದು ನೆನಪಿರಲಿ. ಒಂದು ವೇಳೆ ಕನ್ನಡಿಗರು ತಿರುಗಿ ನಿಂತರೆ ಯಾವ ಅನ್ಯ ಭಾಷಿಕರಿಗೂ ಇಲ್ಲಿ ಉಳಿಗಾಲ ಇರಲ್ಲ. ಅತಿಯಾಗಿ ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡಬೇಡಿ. 1992ರಲ್ಲಿ ಕನ್ನಡಿಗರು ತಮಿಳರ ಮೇಲೆ ತಿರುಗಿಬಿದ್ದಾಗ ಏನಾಯ್ತು ನೆನಪು ಮಾಡಿಕೊಳ್ಳಿ. ಸ್ವಲ್ಪ ಹುಷಾರಾಗಿರಿ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಫ್ಲೆಕ್ಸ್ ಹಾವಳಿಗೆ ಕಡಿವಾಣ ಹಾಕಿ

ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಫ್ಲೆಕ್ಸ್ ಹಾವಳಿ ಮಿತಿ ಮೀರಿದ್ದು, ರಸ್ತೆ ಬದಿಯಲ್ಲಿ ಹಾಕಿರುವ ಬೃಹದಾಕಾರದ ಫ್ಲೆಕ್ಸ್‌ಗಳಿಂದಾಗಿ ಪ್ರತಿನಿತ್ಯ ರಸ್ತೆಯಲ್ಲಿ ಸಂಚರಿಸುವ…

1 hour ago

ಓದುಗರ ಪತ್ರ: ಪಾರದರ್ಶಕ ಆಡಳಿತಾತ್ಮಕ ವ್ಯವಸ್ಥೆ ಜಾರಿಯಾಗಲಿ

ಉತ್ತರ ಪ್ರದೇಶ ಸರ್ಕಾರವು ಆ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ‘ಮಾನವ ಸಂಪದ್ ಪೋರ್ಟಲ್’ ಎಂಬ ಅಧಿಕೃತ…

1 hour ago

ಓದುಗರ ಪತ್ರ: ಕಸ ತೆರವುಗೊಳಿಸಿ

ಹುಣಸೂರು ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ಗ್ರಾಪಂನವರು ಸಕಾಲಕ್ಕೆ ಕಸ ವಿಲೇವಾರಿ ಮಾಡದೇ ಇರುವುದರಿಂದ ಕಸದ ರಾಶಿಯೇ ಬಿದ್ದಿದ್ದು, ಸೊಳ್ಳೆ, ನೊಣಗಳ…

1 hour ago

ಓದುಗರ ಪತ್ರ: ಆರ್‌ಸಿಬಿ ತಂಡದಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ನೀಡಿ

ಐಪಿಎಲ್ ಆವೃತ್ತಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಹೊಂದಿದೆ, ಈ ಆವೃತ್ತಿಯಲ್ಲಿ ನಾನಾ ರಾಜ್ಯಗಳ ಹೆಸರಿನಲ್ಲಿ ಹಲವು ತಂಡಗಳು ಸೆಣಸಾಡಲಿವೆ. ನಮ್ಮ…

1 hour ago

ಓದುಗರ ಪತ್ರ: ಕೋರ್ಟ್ ತೀರ್ಪು ಎಚ್ಚರಿಕೆ ಘಂಟೆಯಾಗಲಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಂಪೆಯ ಸಾಣಾಪುರದ ಬಳಿ ೨೦೨೫ ಮಾರ್ಚಿನಲ್ಲಿ ಇಸ್ರೇಲ್ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ವಿದೇಶಿಗನ…

1 hour ago

ಓದುಗರ ಪತ್ರ: ಕುಡಿಯುವ ನೀರು ಸರಬರಾಜು ಮಾಡಿ

ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ಧನಗಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕರ್ನಾಟಕ ಗೃಹ ಮಂಡಳಿ (ಕೆಹೆಚ್‌ಬಿ) ಬಡಾವಣೆಗೆ ಕುಡಿಯುವ ನೀರು ಸರಬರಾಜು…

1 hour ago