ಮೈಸೂರು : ನಗರದ ರಂಗವಲ್ಲಿ ಸಂಸ್ಥೆ ವತಿಯಿಂದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಡಿ.೬ರಂದು ಸಂಜೆ ೬.೩೦ಗಂಟೆಗೆ ‘ಪರಮೇಶಿ ಪ್ರೇಮಪ್ರಸಂಗ’ ಹಾಸ್ಯ ನಾಟಕವನ್ನು ಪ್ರಸ್ತುತಪಡಿಸಲಾಗುವುದು. ರಂಗ ನಿರ್ದೇಶಕ ಶ್ರೀನಿವಾಸ ಪ್ರಭು ಅವರು ರಚಿಸಿರುವ ಈ ನಾಟಕವನ್ನು ರವಿಪ್ರಸಾದ್ ನಿರ್ದೇಶಿಸಿದ್ದಾರೆ.
ಪ್ರೇಮಪಾಶದಲ್ಲಿ ಸಿಕ್ಕಿಕೊಂಡು ವಿಲವಿಲನೆ ಒದ್ದಾಡುತ್ತಿರುವ ಪರಮೇಶಿ ಮತ್ತು ಕೃಷ್ಣೋಜಿ ಎಂಬ ಗೆಳೆಯರು ಅನುಭವಿಸುವ ನಾನಾ ಬಗೆಯ ಪೇಚುಗಳನ್ನು ಈ ಪ್ರಹಸನ ತಿಳಿಹಾಸ್ಯದ ಪಾತಳಿಯಲ್ಲಿ ಬಿಚ್ಚಿಡುತ್ತದೆ. ಇಂಗ್ಲಿಷ್ ಲೇಖಕ, ವುಡ್ ಹೌಸ್ ಕೃತಿಯಿಂದ ಪ್ರೇರೇಪಿತವಾದ, ಶ್ರೀನಿವಾಸ ಪ್ರಭು ಅವರ ರಚನೆಯ ಈ ಪ್ರೇಮ ಪ್ರಸಂಗಕ್ಕೆ ಹೆಸರಾಂತ ವಿನ್ಯಾಸಕಾರ ಹೆಚ್.ಕೆ.ದ್ವಾರಕನಾಥ್ ರಂಗವಿನ್ಯಾಸ ಮಾಡಿದ್ದು, ಬೆಳಕಿನ ವಿನ್ಯಾಸ – ಮಧು ನೀನಾಸಂ, ಸಂಗೀತ ನಿರ್ವಹಣೆ- ಮಂಜು ಮಂಗಲ, ಪ್ರಸಾದನ- ರಾಘವೇಂದ್ರ ಬೂದನೂರ್ ಹಾಗೂ ಹರಿಪ್ರಸಾದ್ ವಸ್ತ್ರ ವಿನ್ಯಾಸ ಮಾಡಿರುತ್ತಾರೆ. ಈ ನಾಟಕಕ್ಕೆ ರೂ.೧೦೦-೦೦ ಪ್ರವೇಶಧನ ನಿಗದಿಪಡಿಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9964656482 ಸಂಪರ್ಕಿಸಬಹುದು.
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…