ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತಸೌಕರ್ಯ ಮರಿಚಿಕೆಯಾಗಿದೆ ಎಂದು ಆರೋಪಿಸಿ ಸಂಶೋಧಕರು ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟವು ಪ್ರತಿಭಟನೆ ನಡೆಸಿತು.
ವಿ.ವಿಯ ಪಿ.ಜಿ ಹಾಸ್ಟಲ್ ಬಳಿ ಬುಧವಾರ ಪ್ರತಿಭಟನೆಗೆ ಕೂತ ವಿದ್ಯಾರ್ಥಿಗಳು, ಕುಡಿಯುವ ನೀರಿನ ಫಿಲ್ಟರ್ ವಾಟರ್ ಮತ್ತು ಬಿಸಿ ನೀರಿನ ಗೀಜರ್ ವ್ಯವಸ್ಥೆಯನ್ನು ಯು.ಜಿ ಮತ್ತು ಪಿ.ಜಿಯ ಪುರುಷ ಮತ್ತು ಮಹಿಳಾ ನಿಲಯಗಳಿಗೆ ಒದಗಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಮೈ ವಿ.ವಿ ಮುಖ್ಯ ಅಭಿಯಂತಕರು ಪ್ರತಿಭಟನಾಕಾರರ ಆಹವಾಲನ್ನು ಸ್ವೀಕರಿಸಿ ಕೂಡಲೇ ಎರಡೇ ದಿನದಲ್ಲಿ ನಿಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಶಾಂತಿಯಿಂದ ಪ್ರತಿಭಟನೆಯನ್ನು ಕೈಬಿಟ್ಟರು.
ಇದನ್ನೂ ಓದಿ:-ಕೆ.ಆರ್.ನಗರ | ಗಾಂಜಾ ಮಾರಾಟ : ಇಬ್ಬರ ಬಂಧನ
ಸಂಶೋಧಕ ಶಿವಶಂಕರ್, ವಿದ್ಯಾರ್ಥಿ ಮುಖಂಡ ಕೃಷ್ಣಮೂರ್ತಿ ಗಣಿಗನೂರು, ಯುವ ಹೋರಾಟಗಾರ ಹಾಗು ಸಂಶೋಧಕರದ ಪ್ರದೀಪ್ ಮುಮ್ಮಡಿ, ಮಹೇಶ್ ಪಿ.ಮರಳ್ಳಿ, ಸಂದೇಶ್ ಮನಗಳ್ಳಿ, ಕಾರ್ತಿಕ್ ತಗಡೂರು, ಪ್ರೀತಮ್ ಅಂಚಿಪುರ, ರವಿಕುಮಾರ್ ಮುಡಿಗುಂಡ, ಸಿದ್ದಾರ್ಥ್, ಅವಿನಾಶ್.ಜಿ, ಕೆ.ಎನ್.ಕವಿರಾಜ್, ಧೀರಾಜ್, ಬಾಬು ಹಾಗು ಡಿ.ಎಸ್.ಎಫ್ ಮಾಜಿ ಕಾರ್ಯದರ್ಶಿ ಗೌತಮ್ ಕೋಟೆ ಮತ್ತು ತೇಜಸ್ ಮೋಹನ್ ದಾಸ್ ಮತ್ತಿತರ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಪ್ರತಿಭಟನೆಯಲ್ಲಿದ್ದರು.
ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್ಗಳು ಈಗ ಇನ್ಸ್ಟಾಗ್ರಾಂ…
ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…
ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…
ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…
ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…