ಮೈಸೂರು ನಗರ

ಮೈಸೂರನ್ನು ಹಸಿರಾಗಿಸಲು ಮಹಾನಗರ ಪಾಲಿಕೆ ಸಜ್ಜು

ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು

ಮೈಸೂರು: ಪ್ರವಾಸಿಗರ ಸ್ವರ್ಗವಾಗಿರುವ ಪಾರಂಪರಿಕ ನಗರಿ ಮೈಸೂರಿನ ಸೊಬಗಿಗೆ ಮತ್ತಷ್ಟು ಮೆರಗು ನೀಡಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದ್ದು, ಇನ್ನು ಮುಂದೆ ಮೈಸೂರು ಹಸಿರು ಮೈಸೂರಾಗಿ ಕಂಗೊಳಿಸಲಿದೆ

ಹೌದು ಮೈಸೂರು ನಗರದ ಸೌಂದರ್ಯವನ್ನು ಹೆಚ್ಚಿಸುವುದಕ್ಕೆ ಹಾಗೂ ಮೈಸೂರನ್ನು ಹಸಿರು ನಗರವಾಗಿ ಮಾಡುವುದಕ್ಕೆ ಮೈಸೂರು ನಗರ ಹೊಸ ಯೋಜನೆ ಒಂದನ್ನು ಶುರು ಮಾಡಿದ್ದು, ಎರಡು ರಸ್ತೆಯ ಮಧ್ಯ ಭಾಗದಲ್ಲಿ ಅಲಂಕಾರಿಕ‌ ಹಾಗೂ ಹೂವಿನ ಗಿಡಗಳನ್ನು ನೆಡುವುದಕ್ಕೆ ಮುಂದಾಗಿದೆ.

15 ನೇ ಹಣಕಾಸು ಅಯೋಗದಲ್ಲಿ ಸುಮಾರು 4 ಕೋಟಿ ರೂ ವೆಚ್ಚದಲ್ಲಿ ನಗರದ ಎರಡು ರಸ್ತೆಯ ಮಧ್ಯೆ ಸುಮಾರು 47 ಕಿ.ಮೀ ವರೆಗೆ ಸಸಿಗಳನ್ನು ನೆಡುವುದಕ್ಕೆ ಪ್ರತ್ಯೇಕ ಗುತ್ತಿಗೆಯನ್ನು ನೀಡಲಾಗಿದೆ. ಗಿಡ ನೆಡುವುದಕ್ಕೆ ಗುತ್ತಿಗೆ ತೆಗೆದುಕೊಂಡವರೇ 2 ವರ್ಷಗಳ ಕಾಲ ಗಿಡಗಳನ್ನು ಪೋಷಣೆ ಮಾಡುವ ಹೊಣೆಯನ್ನು ಹೊತ್ತಿರುವುದು ವಿಶೇಷವೆನಿಸಿದೆ.

ಮೈಸೂರಿಗೆ ಪ್ರತಿ ದಿನವು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಅಗಮಿಸುತ್ತಾರೆ. ಈ ಕಾರಣದಿಂದ ಅಲಂಕಾರಿಕ ಸಸಿಗಳನ್ನು ನೆಟ್ಟರೆ ನಗರ ಸುಂದರವಾಗಿ ಕಾಣುತ್ತದೆ. ಜೊತೆಗೆ ಸುತ್ತಮುತ್ತ ಆಹ್ಲಾದಕರ ವಾತಾವರಣ ಸೃಷ್ಟಿಯಾಗುತ್ತದೆ ಎನ್ನುವ ಯೋಜನೆಯಿಂದ ಮಹಾನಗರ ಪಾಲಿಕೆ ವತಿಯಿಂದ ಎಮಿಲಿಯಾ, ಬೋಗನ್‌ ವಿಲ್ಲಾ, ಪ್ಲೊಮೇರಿಯಾ ಪುಡಿಕ್‌, ರಾಯಲ್‌ ಪಾಮ್‌ ನಂದಿ ಬಟ್ಟಲು, ಕಣಗಲೆ, ಬಿಳಿ ಹಾಗೂ ಹಳದಿ ಹೂವುಗಳ ಗಿಡಗಳನ್ನು ನೆಡಲಾಗುತ್ತಿದೆ.

ನಗರದ ಯಾವ ಯಾವ ಸ್ಥಳಗಳಲ್ಲಿ ಸಸಿ ನೆಡುವ ಕಾರ್ಯ:
ಮೈಸೂರು ನಗರದಲ್ಲಿ 47 ಕಿ.ಮೀವರೆಗೆ ಸಸಿಗಳನ್ನು ನೆಡುವ ಕಾರ್ಯ ಮಾಡಿರುವ ಮಹಾನಗರ ಪಾಲಿಕೆ, ಮೈಸೂರಿನ ಯರಗನಹಳ್ಳಿ ವೃತ್ತದಿಂದ ಮಹದೇವಪುರ ವೃತ್ತದವರೆಗೆ (3 ಕಿ.ಮೀ.), ಕುರುಬಾರಹಳ್ಳಿಯಿಂದ ಹಾಲಿನ ಡೇರಿವರೆಗೆ (0.75 ಕಿ.ಮೀ.), ಹಾಲಿನ ಡೇರಿ ವೃತ್ತದಿಂದ ದೇವೇಗೌಡ ವೃತ್ತದವರೆಗೆ (3.50 ಕಿ.ಮೀ.), ಎಸ್‌ಪಿ ಆಫೀಸ್‌ ವೃತ್ತದಿಂದ ಗಾಯತ್ರಿಪುರಂ ಮುಖ್ಯರಸ್ತೆವರೆಗೆ 0.40 ಕಿ.ಮೀ, ಫೋರಂ ಮಾಲ್‌ನಿಂದ ರಾಜೀವ್‌ ನಗರ (3 ಕಿ.ಮೀ.), ಫೌಂಟನ್‌ ವೃತ್ತದಿಂದ ಶಿವಾಜಿ ಮುಖ್ಯರಸ್ತೆವರೆಗೆ (0.85), ಮೆಟ್ರೋಪೋಲ್‌ ವೃತ್ತದಿಂದ ಹಿನಕಲ್‌ವರೆಗೆ (6 ಕಿ.ಮೀ.), ದಾಸಪ್ಪ ವೃತ್ತದಿಂದ ರಿಂಗ್‌ ರಸ್ತೆವರೆಗೆ (5 ಕಿ.ಮೀ.), ಕೋರ್ಟ್‌ ಮುಂಭಾಗದಿಂದ ಅಗ್ರಹಾರ ವೃತ್ತದವರೆಗೆ (5 ಕಿ.ಮೀ.), ಏಕಲವ್ಯ ವೃತ್ತದಿಂದ ಹಾರ್ಡಿಂಜ್‌ ವೃತ್ತದವರೆಗೆ (4 ಕಿ.ಮೀ.), ಸಿಲ್ಕ್ ಫ್ಯಾಕ್ಟರಿ ವೃತ್ತದಿಂದ ರಿಂಗ್‌‌ ರಸ್ತೆವರೆಗೆ (4 ಕಿ.ಮೀ.), ಕುಕ್ಕರಹಳ್ಳಿ ಸಿಗ್ನಲ್‌ನಿಂದ ದಟ್ಟಗಳ್ಳಿವರೆಗೆ (5 ಕಿ.ಮೀ.), ರೈಲ್ವೆ ಸ್ಟೇಷನ್‌ನಿಂದ ರಾಮಸ್ವಾಮಿ ವೃತ್ತದವರೆಗೆ (1.5 ಕಿ.ಮೀ.), ಪೆವಿಲಿಯನ್‌ ಆಟದ ಮೈದಾನದಿಂದ ನ್ಯಾಯಾಲಯದವರೆಗೆ (1 ಕಿ.ಮೀ.), ಸೌಗಂಕಾ ಉದ್ಯಾನದ ಮುಂಭಾಗದಿಂದ ಶಾಂತಿಸಾಗರ್‌ ಕಾಂಪ್ಲೆಕ್ಸ್‌ವರೆಗೆ (0.50 ಕಿ.ಮೀ.), ಫೌಂಟೇನ್‌ ವೃತ್ತದಿಂದ ಟಿಪ್ಪು ವೃತ್ತದವರೆಗೆ (0.50 ಕಿ.ಮೀ.), ಕೃಷ್ಣದೇವರಾಯ ವೃತ್ತದಿಂದ ರಿಂಗ್‌ ರಸ್ತೆವರೆಗೆ (1.50 ಕಿ.ಮೀ.), ಒಂಟಿಕೊಪ್ಪಲು ವೃತ್ತದಿಂದ ಸೆಂಟ್‌ ಜೋಸೆಫ್‌ ಶಾಲೆ ವೃತ್ತದವರೆಗೆ (2 ಕಿ.ಮೀ.), ನಂಜರಾಜ ಬಹದ್ದೂರ್‌ ಛತ್ರದ ಮುಂಭಾಗದ ರಸ್ತೆ ವಿಭಜಕ (0.50 ಕಿ.ಮೀ.), ಬೆಂಗಳೂರು ನೀಲಗಿರಿ ರಸ್ತೆ ವಿಭಜಕ (1 ಕಿ.ಮೀ.), ಸುಭಾಷ್‌ ನಗರ ದಂಡಿ ಮಾರಮ್ಮನ ರಸ್ತೆ ವಿಭಜಕ ಹಾಗೂ ಬೆಂಗಳೂರು – ಮೈಸೂರು ರಸ್ತೆ (2 ಕಿ.ಮೀ) ಮತ್ತು ನಾತ್‌ರ್‍ ಈಸ್ಟ್‌ ಆಫ್‌ ಎನ್‌.ಆರ್‌.ಮೊಹಲ್ಲಾ ದ್ರಾವಿಡ ಪಾರ್ಕ್ ನಿಂದ ರಾಜೀವ್‌ ನಗರ ಸೂರ್ಯನಾರಾಯಣ ದೇವಸ್ಥಾನದವರೆಗೆ (0.60 ಕಿ.ಮೀ) ಆಲಂಕಾರಿಕ ಸಸಿಗಳನ್ನು ನೆಡಲಾಗುತ್ತಿದೆ.

 

ಆಂದೋಲನ ಡೆಸ್ಕ್

Recent Posts

ಮಕ್ಕಳ ಮನದಂಗಳದಲ್ಲಿ ಗಾಂಧೀ ಚಿಂತನೆಯ ಬೇರುಗಳು

ನನ್ನ ಆದರ್ಶ ವ್ಯಕ್ತಿ ಗಾಂಧಿ ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ…

7 mins ago

ಗಾಂಧೀ ಅಭಿಯಾನ ಅರಿವಿನ ಯಾನ | ಗಾಂಧೀಜಿ ಅಹಿಂಸಾ ಮಾರ್ಗಕ್ಕೆ ಮೈಲಾರ ಮಹಾದೇವ

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಾಣತ್ಯಾಗ ಮಾಡಿದ ಮಹನೀಯರಲ್ಲಿ ಎದ್ದು ಕಾಣುವ ಹೆಸರು ಕರ್ನಾಟಕದ ಹೆಮ್ಮೆಯ ಪುತ್ರ ಮೈಲಾರ…

21 mins ago

ಗಾಂಧಿ ಅಭಿಯಾನ ಅರಿವಿನ ಯಾನ | ವಿಲಾಯತಿಗೆ ತೆರಳಲು ಅಮ್ಮ ಒಪ್ಪಿದರು

೧೮೮೭ನೇ ಇಸವಿಯಲ್ಲಿ ನಾನು ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದೆನು. ಮೆಟ್ರಿಕ್ ಪರೀಕ್ಷೆಗೆ ಬೊಂಬಾಯಿ ಮತ್ತು ಅಹಮದಾಬಾದ್ ಎರಡೂ ಕೇಂದ್ರಗಳಾಗಿದ್ದವು. ನಾನು ಹತ್ತಿರದ…

54 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 27 ಶನಿವಾರ

4 hours ago

ಚಿರಕನಹಳ್ಳಿ ; ಬೋನಿಗೆ ಬಿದ್ದ ಹುಲಿ

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದಲ್ಲಿ ಪೋತರಾಜು ಎಂಬುವವರ ಜಮೀನಿನಲ್ಲಿ ಅರಣ್ಯ…

20 hours ago

ವೆನಿಜುವೆಲಾ ಭೂಕಂಪ ; ಮೃತರ ಸಂಖ್ಯೆ 235ಕ್ಕೆ ಏರಿಕೆ

ಮುಂದುವರಿದ ರಕ್ಷಣಾ ಕಾರ್ಯಾಚರಣೆ ವೆನಿಜುವೆಲಾ : ವೆನಿಜುವೆಲಾದ ಉತ್ತರ ಭಾಗದಲ್ಲಿ ಬುಧವಾರ ಸಂಜೆ ಸಂಭವಿಸಿದ ಸತತ ಎರಡು ಪ್ರಬಲ ಭೂಕಂಪಗಳ…

21 hours ago