ಮೈಸೂರು ನಗರ

ಕೆಆರ್‌ಎಸ್‌ ರಸ್ತೆಗೆ ಎಸ್‌.ಎಂ.ಕೃಷ್ಣ ಹೆಸರಿಡಲು ಎಲ್‌.ನಾಗೇಂದ್ರ ಆಗ್ರಹ

ಮೈಸೂರು: ನಗರದ ಕೆಆರ್‌ಎಸ್‌ ರಸ್ತೆಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಬಿಜೆಪಿ ನಗರ ಜಿಲ್ಲಾಧ್ಯಕ್ಷ ಎಲ್‌.ನಾಗೇಂದ್ರ ಆಗ್ರಹಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಇಂದು(ಡಿಸೆಂಬರ್‌.26) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಕಾಲದಲ್ಲಿ ಮೈಸೂರಿನ ಹೊರ ವಲಯ ರಸ್ತೆಯಲ್ಲಿ ರಿಂಗ್ ರೋಡ್ ನಿರ್ಮಾಣ ಆಗಿದೆ. ಹಾಗಾಗಿ ಅಂತಹ ಮಹನೀಯರ ಹೆಸರನ್ನು ಕೆಆರ್‌ಎಸ್‌ ರಸ್ತೆಗೆ ನಾಮಕರಣ ಮಾಡಬೇಕು ಎಂದಿದ್ದಾರೆ.

ಕೆ.ಆರ್.ಎಸ್ ರಸ್ತೆಗೆ ಈ ಹಿಂದೆ ಪ್ರಿನ್ಸೆಸ್ ರಸ್ತೆ ಎಂದು ಮೈಸೂರು ಸಂಸ್ಥಾನದ ರಾಜಕುಮಾರಿ ಹೆಸರಿತ್ತು. ಆದರೆ ರಾಜಕುಮಾರಿ ಟಿಬಿ ಕಾಯಿಲೆಯಿಂದ ತೀರಿ ಹೋದರು. ಇನ್ನೂ ಯಾರು ಈ ಕಾಯಿಲೆಯಿಂದ ಮೃತರಾಗಬಾರದು ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ 100 ಎಕರೆ ಜಾಗದಲ್ಲಿ ಪಿಕೆಟಿಬಿ ಆಸ್ಪತ್ರೆ ಕಟ್ಟಿಸಿದ್ದರು. ಬಳಿಕ ರಾಜಕುಮಾರಿ ನೆನಪಿನಾರ್ಥ ಆಸ್ಪತ್ರೆಯಿರುವ ರಸ್ತೆಗೆ ಪ್ರಿನ್ಸೆಸ್ ರಸ್ತೆ ( ರಾಜಕುಮಾರಿ ರಸ್ತೆ) ಎಂದು ನಾಮಕರಣ ಮಾಡಿದ್ದರು. ಇದೀಗ ಆ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರು ನಾಮಕರಣ ಮಾಡಲು ಹೊರಟ್ಟಿದ್ದಾರೆ. ಅದಕ್ಕೆ ಇಲ್ಲಿನ ಸ್ಥಳೀಯ ಶಾಸಕರೇ ಸಿದ್ದರಾಮಯ್ಯ ಹೆಸರನ್ನು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಮೈಸೂರಿನವರಾಗಿದ್ದು, 2 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಇನ್ನು ಮೈಸೂರಿನಲ್ಲಿ ಸಾಕಷ್ಟು ಬೇರೆ ಬೇರೆ ಮಾರ್ಗವಾಗಿ ರಸ್ತೆಗಳಿದ್ದು, ಅಲ್ಲಿಗೆ ಬೇಕಾದರೆ ಸಿದ್ದರಾಮಯ್ಯ ಹೆಸರನ್ನು ನಾಮಕರಣ ಮಾಡಲಿ ನಮ್ಮ ಅಭ್ಯಂತರವೇನಿಲ್ಲ ಎಂದಿದ್ದಾರೆ.

ರಸ್ತೆಗಳಿಗೆ ಹೆಸರನ್ನು ನಾಮಕರಣ ಮಾಡುವಾಗ ಸಾಮಾನ್ಯವಾಗಿ ಸಾಧನೆ ಮಾಡಿದ ವ್ಯಕ್ತಿಯ ಮರಣದ ಬಳಿಕ ಹೆಸರು ನಾಮಕರಣ ಮಾಡುತ್ತಾರೆ. ಬಹುಶಃ ಸಿದ್ದರಾಮಯ್ಯಗೆ ಹೆಸರು ಬದಲಾವಣೆ ವಿಚಾರ ಗೊತ್ತಿಲ್ಲ ಅನ್ನಿಸುತ್ತದೆ. ಈ ವಿಚಾರ ಗೊತ್ತಾದರೆ ಅವರೇ ಒಪ್ಪಲ್ಲ ಅನ್ನಿಸುತ್ತದೆ. ನಮ್ಮ ಒತ್ತಾಯ ಇಷ್ಟೇ ಆ ರಸ್ತೆಗೆ ಸಿದ್ದರಾಮಯ್ಯ ಹೆಸರು ಬೇಡ
ಬೇರೆ ರಸ್ತೆಗೆ ಸಿದ್ದರಾಮಯ್ಯ ಹೆಸರನ್ನು ನಾಮಕರಣ ಮಾಡಲಿ ಎಂದು ತಿಳಿಸಿದ್ದಾರೆ.

 

ಅರ್ಚನ ಎಸ್‌ ಎಸ್

Recent Posts

3.80 ಕೋಟಿ ವೆಚ್ಚದಲ್ಲಿ ಬಾಬು ಜಗಜೀವನರಾಮ್‌ ಭವನ: ಎನ್‌. ಚೆಲುವರಾಯಸ್ವಾಮಿ

ಮಂಡ್ಯ: 3.80 ಕೋಟಿ ವೆಚ್ಚದಲ್ಲಿ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಮ್‌ ಭವನ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ…

23 mins ago

ಏ.7 ರಂದು ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ| ಜಿಲ್ಲಾಡಳಿದಿಂತ ಸಕಲ ಸಿದ್ಧತೆ ಆಗಿದೆ: ಎನ್‌.ಚಲುವರಾಯಸ್ವಾಮಿ

ಮಂಡ್ಯ: ಜಿಲ್ಲೆಯ ಪಾಂಡಪುರ ತಾಲ್ಲೂಕಿನ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಏಪ್ರಿಲ್‌.7 ರಂದು ಅದ್ದೂರಿಯಾಗಿ ಜರುಗಲಿದ್ದು, ಇದಕ್ಕೆ ಜಿಲ್ಲಾಡಳಿತದಿಂದ…

2 hours ago

IPL2025: ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಕ್ಯಾಪಿಟಲ್ಸ್‌

ಚೆನ್ನೈ: ಕನ್ನಡಿಗ ಕೆ.ಎಲ್‌ ರಾಹುಲ್‌ ಅವರ ಅಮೋಘ ಅರ್ಧಶತಕದ ಬಲದಿಂದಾಗಿ ಅತಿಥೇಯ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು 25 ರನ್‌ಗಳ…

2 hours ago

ದರ ಏರಿಕೆ ವಿರೋಧಿಸಿ ಬಿಜೆಪಿಗೆ ಪ್ರತಿಭಟನೆ ನಡೆಸುವ ನೈತಿಕತೆ ಇಲ್ಲ: ಬೈರತಿ ಸುರೇಶ್‌

ಬೆಂಗಳೂರು: ಬಿಜೆಪಿಯೂ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುವ ನೈತಿಕತೆ ಅವರಿಗೆ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌…

2 hours ago

ಕಾಂಗ್ರೆಸ್‌ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ: ಶಿವರಾಜ ತಂಗಡಗಿ

ಕೊಪ್ಪಳ: ಬಿಜೆಪಿಯವರಂತೆ ಸುಳ್ಳು ಆಶ್ವಾಸನೆಗಳನ್ನು ನೀಡಿಲ್ಲ. ನಾವು ಹೇಳಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಕೊಟ್ಟ ಮಾತು…

2 hours ago

ಕಾರ್ಮಿಕರ ಏಳ್ಗೆಗಾಗಿ ಬಾಬುಜಿ ಹಲವಾರು ಕೊಡುಗೆ: ಆರ್‌. ನರೇಂದ್ರ

ಹನೂರು: ದೇಶದ ಅಭಿವೃದ್ದಿಗೆ ಶ್ರಮಿಸುವ ಕಾರ್ಮಿಕರ ಜೀವನ ಸುಧಾರಣೆಗಾಗಿ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‌ ರಾಮ್‌ ಅವರು ಹಲವು…

3 hours ago