ಮೈಸೂರು ನಗರ

ಮುಡಾ ಅಧಿಕಾರಿಗಳಿಂದ 8 ಎಕರೆ 28 ಗುಂಟೆ ಜಾಗ ವಶ ಪ್ರಕರಣ: ವಕೀಲ ಹೃತಿಕ್ ಗೌಡ ಪ್ರತಿಕ್ರಿಯೆ

ಮೈಸೂರು: ಮುಡಾದವರು ಏಕಾಏಕಿ ಬಡವರ ಮನೆಗೆ ಬಂದು ಯಾವುದೇ ನೋಟಿಸ್ ನೀಡದೇ ತೆರವು ಮಾಡಿದ್ದು, ಸರ್ವೇ ನಂಬರ್ 108, 109 ಜಾಗವು 2002ರಲ್ಲಿ ಭೂ ಸ್ವಾಧೀನವಾಗಿದೆ ಎಂದು ವಕೀಲ ಹೃತಿಕ್‌ ಗೌಡ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಮುಂಚೆ ಈ ಜಾಗ ಬಸವನಹಳ್ಳಿ ಗ್ರಾಮಕ್ಕೆ ಸೇರಿತ್ತು. ಇದೀಗ ವಿಜಯನಗರ 4ನೇ ಹಂತಕ್ಕೆ ಬಡಾವಣೆ ಮಾಡಲು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ಬಂದು ಜಾಗ ತೆರವಿಗೆ ಮುಂದಾಗಿದ್ದಾರೆ. ಜಾಗಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿಯಿದೆ ಎಂದು ಮಾಹಿತಿ ನೀಡಿದರು.

ರಿಟ್ ಅರ್ಜಿ 1427/2024 ಹೈಕೋರ್ಟ್‌ನಲ್ಲಿ ಪೆಂಡಿಂಗ್ ಇದೆ. ಆದರೂ ಏಕಏಕಿ ಬಂದು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದಾರೆ. 25 ವರ್ಷಗಳಿಂದ ಖಾತೆ, ಕಂದಾಯ, ಎಲೆಕ್ಟ್ರಿಕಲ್ ಬಿಲ್ ಎಲ್ಲವು ಸಹ ವಾಸವಿರುವವರ ಹೆಸರಿನಲ್ಲಿದೆ. ಕಾನೂನಿನ್ವಯ ಈ ಜಾಗದಲ್ಲಿ ವಾಸವಿದ್ದಾರೆ. ಪ್ರಕರಣ ಯಾವುದೇ ನ್ಯಾಯಾಲಯದಲ್ಲೂ ಬಾಕಿ ಇರುವ ವೇಳೆ ಕಾನೂನಿನ್ವಯ ವಾಸಿಸುವ ಜನರನ್ನು ಹೊರದೂಡುವಂತಿಲ್ಲ. 2004ರ ತನಕ ಆರ್‌ಟಿಸಿ ಇದ್ದು ಪುಟ್ಟಮಾದಯ್ಯ ಎನ್ನುವವರಿಂದ ಬಂದಿರುವ ಜಾಗಕ್ಕೆ ಮೂವರು ಮಂದಿ ಮೊಮ್ಮಕ್ಕಳು ವಾರಸುದಾರರಾಗಿದ್ದಾರೆ.

ಹೈಕೋರ್ಟ್‌ನ ಡಬಲ್ ಬೆಂಚ್‌ನಲ್ಲಿ ಪ್ರಕರಣ ಪೆಂಡಿಂಗ್ ಇದೆ. ಆದರೂ ಸಹ ಮುಡಾ ಅಧಿಕಾರಿಗಳು ಲೆಕ್ಕಕ್ಕೆ ತೆಗೆದುಕೊಳ್ಳದೆ ಜಾಗ ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೇಕೆ.. ಡಿಕೆ !

ಮೇಕೆ.. ಡಿಕೆ ! ಅಂದು, ಹರಿಯುವ ಕಾವೇರಿ ನದಿಯ ಈ ಕಡೆಯಿಂದ ಆ ಕಡೆಗೆ ಜಿಗಿದು ದಾಟಿ ಬಿಟ್ಟಿತಂತೆ ಮೇಕೆ…

19 hours ago

ಓದುಗರ ಪತ್ರ: ಮಂತ್ರಾಲಯ ಮಠದ ಕಾರ್ಯ ಜನಮೆಚ್ಚುವಂತಹದ್ದು

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಸುಮಾರು ೪೦ ಎಕರೆ ಪ್ರದೇಶದಲ್ಲಿ ಜಲಾಶಯ…

19 hours ago

ಓದುಗರ ಪತ್ರ: ಕಾವೇರಿ: ಶಾಶ್ವತ ಪರಿಹಾರ ಅಗತ್ಯ

ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ ೧೫ ದಿನಗಳ ಕಾಲ, ಪ್ರತಿ ದಿನ ೩,೫೦೦ ಕ್ಯೂಸೆಕ್…

19 hours ago

ಕಾಯಕಲ್ಪಕ್ಕೆ ಕಾದಿವೆ ನಿರ್ಲಕ್ಷಿತ ಸರ್ಕಾರಿ ಆಸ್ತಿಗಳು

ವಸಂತಕುಮಾರ್ ಮೈಸೂರು ಮಠ, ಸಾಮಾಜಿಕ ಹೋರಾಟಗಾರ ಮೈಸೂರಿನಲ್ಲಿ ಹಲವೆಡೆ ದುಸ್ಥಿತಿಯಲ್ಲಿರುವ ಹಾಗೂ ಅನೈರ್ಮಲ್ಯ ತಾಣವಾಗಿರುವ ಹಲವು ಸರ್ಕಾರಿ ಕಟ್ಟಡಗಳು, ವಾಚನಾಲಯ…

19 hours ago

ಮೀಸಲಾತಿ ಸೌಲಭ್ಯಕ್ಕೆ ವಿರೋಧವೇಕೆ?

ಟಿ.ಕೆ.ಹರೀಶ್ ಸಾಮಾಜಿಕ ನ್ಯಾಯ ಒದಗಿಸುವ ಸಂವಿಧಾನಾತ್ಮಕ ವ್ಯವಸ್ಥೆ ಮೀಸಲಾತಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಸಾಮಾಜಿಕ ನ್ಯಾಯದ ಸಾಧನವಾಗಿ ಜಾರಿಗೆ ತರಲಾಗಿದೆ.…

19 hours ago

ಬಿರುಕು ಬಿಡುತ್ತಿರುವ ಕೆರೆ ಕೋಡಿಯ ಗೋಡೆ

ದೂರ ನಂಜುಂಡಸ್ವಾಮಿ ದೂರ ಗ್ರಾಮದ ಕೆರೆಯ ಪೂರ್ವಭಾಗದ ಕೋಡಿಯನ್ನು ದುರಸ್ತಿಪಡಿಸಿ, ಹೂಳು ತೆಗೆಯಲು ಆಗ್ರಹ ದೂರ: ಮೈಸೂರು ತಾಲ್ಲೂಕಿನ ಜಯಪುರ…

22 hours ago