ಮೈಸೂರು ನಗರ

ಡಿ.13,14 ರಂದು ಬನವಾಸಿ ತೋಟದಲ್ಲಿ ಅರಿವಿನ ಚಾವಡಿ ಕಾರ್ಯಕ್ರಮ

ಮೈಸೂರು : ಉಳುಮೆ ಪ್ರತಿಷ್ಠಾನದ ವತಿಯಿಂದ ಡಿ.೧೩ ಮತ್ತು ೧೪ರಂದು ಬೋಗಾದಿ-ಗದ್ದಿಗೆ ರಸ್ತೆಯ ಬನವಾಸಿ ತೋಟದಲ್ಲಿ ಅರಿವಿನ ಚಾವಡಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಡಿ.೧೩ರಂದು ಬೆಳಿಗ್ಗೆ ೧೦ ಗಂಟೆಯಿಂದ ೧೧.೧೫ರವರೆಗೆ ‘ಭಾರತದ ಸಂವಿಧಾನ’ ಕುರಿತು ಡಾ.ಶಿವಕುಮಾರ್ ಉಪನ್ಯಾಸ ನೀಡುವರು, ಎನ್.ಇಂದಿರಮ್ಮ ಪ್ರತಿಕ್ರಿಯೆ ನೀಡುವರು. ಬೆಳಿಗ್ಗೆ ೧೧.೧೫ಕ್ಕೆ ಪ್ರೊ.ರಹಮತ್ ತರೀಕೆರೆ ಅವರು ‘ನಾಗರಿಕತೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಹೋರಾಟ’ ವಿಷಯ ಮಂಡಿಸುವರು. ಹಾರೋಹಳ್ಳಿ ಪ್ರಕಾಶ ಪ್ರತಿಕ್ರಿಯೆ ನೀಡುವರು.

ಮಧ್ಯಾಹ್ನ ೧೨.೩೦ಕ್ಕೆ ‘ಉದ್ಯಮಶೀಲತೆ ಚಳವಳಿ: ಒಳನೋಟ’ದ ಕುರಿತು ಬಿ.ಶ್ರೀಪಾದ ಭಟ್ ಮಾತನಾಡಿದರೆ, ವರಹಳ್ಳಿ ಆನಂದ್ ಪ್ರತಿಕ್ರಿಯೆ ನೀಡುವರು. ಮಧ್ಯಾಹ್ನ ೨.೩೦ಕ್ಕೆ ಎಚ್.ಎಂ.ರುದ್ರಸ್ವಾಮಿ ಅವರು ‘ದಸಂಸ ನಡೆದು ಬಂದ ಹಾದಿ ಮತ್ತು ಮುಂದಿನ ನಡೆ’ ಕುರಿತು ಮಾತನಾಡಿದರೆ ಆಲಗೂಡು ಶಿವಕುಮಾರ್ ಪ್ರತಿಕ್ರಿಯೆ ನೀಡುವರು.

ಇದನ್ನೂ ಓದಿ:-ಕಾಂಗ್ರೆಸ್‌ ಆಯ್ತು ಇದೀಗ ಬಿಜೆಪಿ ಸರದಿ : ದಿಲ್ಲಿ ತಲುಪಿದ ಬಿಜೆಪಿ ಪ್ರತ್ಯೇಕ ಬಣ

ಮಧ್ಯಾಹ್ನ ೩.೪೫ಕ್ಕೆ ‘ಗ್ರಾಮಸಭೆಗಳ ಮಹತ್ವ’ ಕುರಿತು ರಾಜಾ ಹುಣಸೂರು ವಿಷಯ ಮಂಡಿಸಿದರೆ, ಯದುನಾಡ ನಾಗರಾಜ್ ಪ್ರತಿಕ್ರಿಯೆ ನೀಡುವರು. ಸಂಜೆ ೫ಕ್ಕೆ ಆರ್.ಸಂತೋಷ್ ನಾಯಕ್ ಅವರೊಂದಿಗೆ ‘ಪುಸ್ತಕ, ಓದು, ಚರ್ಚೆ, ಸಂವಾದ’ ನಡೆಯಲಿದೆ.

ಡಿ.೧೪ರಂದು ಬೆಳಿಗ್ಗೆ ೯ಕ್ಕೆ ‘ಜಾಗತೀಕರಣವೋ? ಮರುವಸಾಹಾತೀಕರಣವೋ’ ವಿಷಯ ಕುರಿತು ಎಚ್.ಎಸ್.ಶಿವಸುಂದರ್ ವಿಷಯ ಮಂಡಿಸುವರು, ಬಿ.ಡಿ.ಶಿವಬುದ್ಧಿ ಪ್ರತಿಕ್ರಿಯೆ ನೀಡುವರು. ಬೆಳಿಗ್ಗೆ ೧೦.೧೫ಕ್ಕೆ ಐಪಿಎಸ್ ಅಧಿಕಾರಿ ಡಾ.ಬಿ.ಟಿ.ಕವಿತಾ ಅವರು ‘ಯುವ ಜನತೆಗೆ ಕಾನೂನು’ ವಿಷಯ ಮಂಡಿಸುವರು.

ಬೆಳಿಗ್ಗೆ ೧೧.೩೦ಕ್ಕೆ ಕೆಎಎಸ್ ಅಽಕಾರಿ ಮಂಜುನಾಥ್ ಸೋಸಲೆ ‘ಸ್ಪರ್ಧಾತ್ಮಕ ಪರೀಕ್ಷೆ’ ಕುರಿತು, ಮಧ್ಯಾಹ್ನ ೧.೩೦ಕ್ಕೆ ಬಡಗಲಪುರ ನಾಗೇಂದ್ರ ‘ರೈತ ಸಂಘ ನಡೆದು ಬಂದ ಹಾದಿ ಮತ್ತು ಮುಂದಿನ ನಡೆ’ ಕುರಿತು ವಿಷಯ ಮಂಡಿಸಿದರೆ ಜೆ.ಎಂ.ವೀರಸಂಗಯ್ಯ ಪ್ರತಿಕ್ರಿಯೆ ನೀಡುವರು.

ಮಧ್ಯಾಹ್ನ ೨.೪೫ಕ್ಕೆ ಟಿ.ಜಿ.ಎಸ್. ಅವಿನಾಶ್ ‘ಜಾಗತಿಕ ತಾಪಮಾನ ಮತ್ತು ಕೃಷಿ’ ಮತ್ತು ಸಂಜೆ ೪ಕ್ಕೆ ‘ಪ್ರಸ್ತುತ ರಾಜಕೀಯ: ನಮ್ಮ ನಿಲುವು’ ಕುರಿತು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ವಿಷಯ ಮಂಡಿಸುವರು. ಅಹಿಂದ ಜವರಪ್ಪ ಪ್ರತಿಕ್ರಿಯೆ ನೀಡುವರು. ಆಸಕ್ತರು ಹೆಚ್ಚಿನ ವಿವರಗಳಿಗೆ ಮೊ. ೮೧೯೭೮೫೬೧೩೨ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಆಂದೋಲನ ಡೆಸ್ಕ್

Recent Posts

ನೇಪಾಳದಲ್ಲಿ ಭೀಕರ ಪ್ರವಾಹ ; ಭಾರತೀಯರ ನೆರವಿಗೆ ಸಹಾಯವಾಣಿ ಆರಂಭ

ಕಠ್ಮಂಡು : ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಂತ್ರಸ್ತರಾಗಿರುವ ಭಾರತೀಯ ಪ್ರಜೆಗಳ ನೆರವಿಗಾಗಿ ಭಾರತವು ಸಹಾಯವಾಣಿ ಆರಂಭಿಸಿದೆ.…

5 hours ago

ಸಂಪುಟದಲ್ಲಿ ಚರ್ಚಿಸಿ ಬರ ಘೋಷಣೆ ; ಡಿಸಿಎಂ ಪರಮೇಶ್ವರ್‌

ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ಅವಲೋಕನ ನಡೆಯುತ್ತಿದೆ. 102 ತಾಲ್ಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದ್ದು, ಮುಂದಿನ…

6 hours ago

ಸ್ವಚ್ಛತಾ ಅಭಿಯಾನ | ವಿವಿಧೆಡೆ 15 ಟನ್‌ ತ್ಯಾಜ್ಯ ವಿಲೇವಾರಿ

ಮೈಸೂರು : 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯ ವತಿಯಿಂದ 80 ಜಿವಿಪಿ ನಿರ್ಮೂಲನೆ ಅಭಿಯಾನದಲ್ಲಿ ಮಂಗಳವಾರ ವಲಯ-3ರ ವ್ಯಾಪ್ತಿಗೆ…

6 hours ago

ನೇಪಾಳ ಪ್ರವಾಹ | 105 ಭಾರತೀಯರು ಸೇರಿ 400 ಮಂದಿ ನಾಪತ್ತೆ

ಕಠ್ಮಂಡು : ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಉತ್ತರದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಕನಿಷ್ಠ…

7 hours ago

ನೇಪಾಳದಲ್ಲಿ ಭೀಕರ ಪ್ರವಾಹ | ಹತ್ತಾರು ಹಳ್ಳಿಗಳು ಜಲಾವೃತ ; ನಾಪತ್ತೆಯಾದ ಪ್ರವಾಸಿಗರು

ಕಠ್ಮಂಡು : ನೆರೆಯ ರಾಷ್ಟ್ರ ನೇಪಾಳದಲ್ಲಿ ಹಿಮಕುಸಿತದ ಪರಿಣಾಮ ಉಂಟಾದ ಭೀಕರ ಆಕಸ್ಮಿಕ ಪ್ರವಾಹ ಜಲಪ್ರಳಯವನ್ನೇ ಸೃಷ್ಟಿಸಿದೆ. ಕೋಶಿ ನದಿಯ…

8 hours ago

ರಾಜೀನಾಮೆ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ: ಸಚಿವ ನಾಗೇಂದ್ರ

ಬೆಂಗಳೂರು: ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿಲ್ಲ. ನನ್ನ ರಾಜೀನಾಮೆ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ…

12 hours ago