ಮೈಸೂರು ನಗರ

ಡಿ.13,14 ರಂದು ಬನವಾಸಿ ತೋಟದಲ್ಲಿ ಅರಿವಿನ ಚಾವಡಿ ಕಾರ್ಯಕ್ರಮ

ಮೈಸೂರು : ಉಳುಮೆ ಪ್ರತಿಷ್ಠಾನದ ವತಿಯಿಂದ ಡಿ.೧೩ ಮತ್ತು ೧೪ರಂದು ಬೋಗಾದಿ-ಗದ್ದಿಗೆ ರಸ್ತೆಯ ಬನವಾಸಿ ತೋಟದಲ್ಲಿ ಅರಿವಿನ ಚಾವಡಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಡಿ.೧೩ರಂದು ಬೆಳಿಗ್ಗೆ ೧೦ ಗಂಟೆಯಿಂದ ೧೧.೧೫ರವರೆಗೆ ‘ಭಾರತದ ಸಂವಿಧಾನ’ ಕುರಿತು ಡಾ.ಶಿವಕುಮಾರ್ ಉಪನ್ಯಾಸ ನೀಡುವರು, ಎನ್.ಇಂದಿರಮ್ಮ ಪ್ರತಿಕ್ರಿಯೆ ನೀಡುವರು. ಬೆಳಿಗ್ಗೆ ೧೧.೧೫ಕ್ಕೆ ಪ್ರೊ.ರಹಮತ್ ತರೀಕೆರೆ ಅವರು ‘ನಾಗರಿಕತೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಹೋರಾಟ’ ವಿಷಯ ಮಂಡಿಸುವರು. ಹಾರೋಹಳ್ಳಿ ಪ್ರಕಾಶ ಪ್ರತಿಕ್ರಿಯೆ ನೀಡುವರು.

ಮಧ್ಯಾಹ್ನ ೧೨.೩೦ಕ್ಕೆ ‘ಉದ್ಯಮಶೀಲತೆ ಚಳವಳಿ: ಒಳನೋಟ’ದ ಕುರಿತು ಬಿ.ಶ್ರೀಪಾದ ಭಟ್ ಮಾತನಾಡಿದರೆ, ವರಹಳ್ಳಿ ಆನಂದ್ ಪ್ರತಿಕ್ರಿಯೆ ನೀಡುವರು. ಮಧ್ಯಾಹ್ನ ೨.೩೦ಕ್ಕೆ ಎಚ್.ಎಂ.ರುದ್ರಸ್ವಾಮಿ ಅವರು ‘ದಸಂಸ ನಡೆದು ಬಂದ ಹಾದಿ ಮತ್ತು ಮುಂದಿನ ನಡೆ’ ಕುರಿತು ಮಾತನಾಡಿದರೆ ಆಲಗೂಡು ಶಿವಕುಮಾರ್ ಪ್ರತಿಕ್ರಿಯೆ ನೀಡುವರು.

ಇದನ್ನೂ ಓದಿ:-ಕಾಂಗ್ರೆಸ್‌ ಆಯ್ತು ಇದೀಗ ಬಿಜೆಪಿ ಸರದಿ : ದಿಲ್ಲಿ ತಲುಪಿದ ಬಿಜೆಪಿ ಪ್ರತ್ಯೇಕ ಬಣ

ಮಧ್ಯಾಹ್ನ ೩.೪೫ಕ್ಕೆ ‘ಗ್ರಾಮಸಭೆಗಳ ಮಹತ್ವ’ ಕುರಿತು ರಾಜಾ ಹುಣಸೂರು ವಿಷಯ ಮಂಡಿಸಿದರೆ, ಯದುನಾಡ ನಾಗರಾಜ್ ಪ್ರತಿಕ್ರಿಯೆ ನೀಡುವರು. ಸಂಜೆ ೫ಕ್ಕೆ ಆರ್.ಸಂತೋಷ್ ನಾಯಕ್ ಅವರೊಂದಿಗೆ ‘ಪುಸ್ತಕ, ಓದು, ಚರ್ಚೆ, ಸಂವಾದ’ ನಡೆಯಲಿದೆ.

ಡಿ.೧೪ರಂದು ಬೆಳಿಗ್ಗೆ ೯ಕ್ಕೆ ‘ಜಾಗತೀಕರಣವೋ? ಮರುವಸಾಹಾತೀಕರಣವೋ’ ವಿಷಯ ಕುರಿತು ಎಚ್.ಎಸ್.ಶಿವಸುಂದರ್ ವಿಷಯ ಮಂಡಿಸುವರು, ಬಿ.ಡಿ.ಶಿವಬುದ್ಧಿ ಪ್ರತಿಕ್ರಿಯೆ ನೀಡುವರು. ಬೆಳಿಗ್ಗೆ ೧೦.೧೫ಕ್ಕೆ ಐಪಿಎಸ್ ಅಧಿಕಾರಿ ಡಾ.ಬಿ.ಟಿ.ಕವಿತಾ ಅವರು ‘ಯುವ ಜನತೆಗೆ ಕಾನೂನು’ ವಿಷಯ ಮಂಡಿಸುವರು.

ಬೆಳಿಗ್ಗೆ ೧೧.೩೦ಕ್ಕೆ ಕೆಎಎಸ್ ಅಽಕಾರಿ ಮಂಜುನಾಥ್ ಸೋಸಲೆ ‘ಸ್ಪರ್ಧಾತ್ಮಕ ಪರೀಕ್ಷೆ’ ಕುರಿತು, ಮಧ್ಯಾಹ್ನ ೧.೩೦ಕ್ಕೆ ಬಡಗಲಪುರ ನಾಗೇಂದ್ರ ‘ರೈತ ಸಂಘ ನಡೆದು ಬಂದ ಹಾದಿ ಮತ್ತು ಮುಂದಿನ ನಡೆ’ ಕುರಿತು ವಿಷಯ ಮಂಡಿಸಿದರೆ ಜೆ.ಎಂ.ವೀರಸಂಗಯ್ಯ ಪ್ರತಿಕ್ರಿಯೆ ನೀಡುವರು.

ಮಧ್ಯಾಹ್ನ ೨.೪೫ಕ್ಕೆ ಟಿ.ಜಿ.ಎಸ್. ಅವಿನಾಶ್ ‘ಜಾಗತಿಕ ತಾಪಮಾನ ಮತ್ತು ಕೃಷಿ’ ಮತ್ತು ಸಂಜೆ ೪ಕ್ಕೆ ‘ಪ್ರಸ್ತುತ ರಾಜಕೀಯ: ನಮ್ಮ ನಿಲುವು’ ಕುರಿತು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ವಿಷಯ ಮಂಡಿಸುವರು. ಅಹಿಂದ ಜವರಪ್ಪ ಪ್ರತಿಕ್ರಿಯೆ ನೀಡುವರು. ಆಸಕ್ತರು ಹೆಚ್ಚಿನ ವಿವರಗಳಿಗೆ ಮೊ. ೮೧೯೭೮೫೬೧೩೨ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಆಂದೋಲನ ಡೆಸ್ಕ್

Recent Posts

ಮತ್ತೆ ಇರಾನ್‌ನ ನಾಲ್ಕು ತೈಲ ಘಟಕಗಳನ್ನು ಉಡೀಸ್‌ ಮಾಡಿದ ಅಮೇರಿಕಾ

ಟೆಹರಾನ್:‌ ಇರಾನ್‌ ಮೇಲೆ ಇಸ್ರೇಲ್‌ ಹಾಗೂ ಅಮೇರಿಕಾ ದಾಳಿ ಮುಂದುವರಿಸಿದ್ದು, ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ. ಇರಾನ್‌ನ ಬೀದಿ ಬೀದಿಗಳಲ್ಲಿ ಬೆಂಕಿ…

5 mins ago

ಸ್ಯಾಂಡಲ್‌ವುಡ್‌ ಖ್ಯಾತ ನಿರ್ಮಾಪಕ ನರಹಳ್ಳಿ ಜ್ಞಾನೇಶ್‌ ನಿಧನ

ಪಾಂಡವಪುರ: ಸ್ಯಾಂಡಲ್‌ವುಡ್‌ ನಿರ್ಮಾಪಕ, ನಿರ್ದೇಶಕ, ಸಂಕಲನಕಾರ ಹಾಗೂ ಸಂಘಟಕ ನರಹಳ್ಳಿ ಜ್ಞಾನೇಶ್ (೪೮) ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾರ್ಯನಿಮಿತ್ತ…

26 mins ago

ಜೆಡಿಯುಗೆ ಸೇರ್ಪಡೆಯಾದ ಬಿಹಾರ ಸಿಎಂ ನಿತೀಶ್‌ ಪುತ್ರ ನಿಶಾಂತ್ ಕುಮಾರ್‌

ಪಾಟ್ನಾ: ಬಿಹಾರ ಸಿಎಂ ನಿತೀಶ್‌ ಕುಮಾರ್‌ ಪುತ್ರ ನಿಶಾಂತ್‌ ಕುಮಾರ್‌ ಅವರಿಂದು ಪಾಟ್ನಾದ ಜೆಡಿಯು ಪಕ್ಷದ ಪ್ರಧಾನ ಕಚೇರಿಯಲ್ಲಿ ಜೆಡಿಯು…

33 mins ago

ಇರಾನ್-‌ಇಸ್ರೇಲ್‌ ಸಂಘರ್ಷ: ಬೆಂಗಳೂರಿನಲ್ಲಿ ಅಡುಗೆ ಎಣ್ಣೆ ದರ ಏರಿಕೆ

ಬೆಂಗಳೂರು: ಇರಾನ್‌ ಮೇಲೆ ಇಸ್ರೇಲ್‌, ಅಮೇರಿಕಾ ದಾಳಿ ನಡೆಸುತ್ತಿರುವ ಪರಿಣಾಮ ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಹಿನ್ನೆಲೆಯಲ್ಲಿ ಅದರ ಬಿಸಿ ರಾಜಧಾನಿ ಬೆಂಗಳೂರಿಗೆ…

45 mins ago

ನಿಮ್ಮ ಕೆಲಸ ಎಷ್ಟಿದೆ ಅದನ್ನು ನೋಡಿಕೊಳ್ಳಿ: ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ

ನವದೆಹಲಿ: ಭಾರತಕ್ಕೆ ರಷ್ಯಾ ತೈಲ ಖರೀದಿಗೆ ಅನುಮತಿ ಕೊಟ್ಟಿದ್ದೇವೆ ಎಂದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌…

1 hour ago

ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಲೋಪ: ಬಂಗಾಳ ಸರ್ಕಾರದಿಂದ ವರದಿ ಕೇಳಿದ ಗೃಹ ಕಾರ್ಯದರ್ಶಿ

ನವದೆಹಲಿ: ಡಾರ್ಜಿಲಿಂಗ್‌ನಲ್ಲಿ ನಡೆದ 9ನೇ ಅಂತರಾಷ್ಟ್ರೀಯ ಸಂತಾಲ್‌ ಸಮ್ಮೇಳನದ ಸ್ಥಳ ಬದಲಾವಣೆ ಮತ್ತು ಸಂಬಂಧಿತ ವ್ಯವಸ್ಥೆಗಳು ಸೇರಿದಂತೆ ರಾಷ್ಟ್ರಪತಿ ದ್ರೌಪದಿ…

1 hour ago