ಮೈಸೂರು ನಗರ

ಡಿ.13,14 ರಂದು ಬನವಾಸಿ ತೋಟದಲ್ಲಿ ಅರಿವಿನ ಚಾವಡಿ ಕಾರ್ಯಕ್ರಮ

ಮೈಸೂರು : ಉಳುಮೆ ಪ್ರತಿಷ್ಠಾನದ ವತಿಯಿಂದ ಡಿ.೧೩ ಮತ್ತು ೧೪ರಂದು ಬೋಗಾದಿ-ಗದ್ದಿಗೆ ರಸ್ತೆಯ ಬನವಾಸಿ ತೋಟದಲ್ಲಿ ಅರಿವಿನ ಚಾವಡಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಡಿ.೧೩ರಂದು ಬೆಳಿಗ್ಗೆ ೧೦ ಗಂಟೆಯಿಂದ ೧೧.೧೫ರವರೆಗೆ ‘ಭಾರತದ ಸಂವಿಧಾನ’ ಕುರಿತು ಡಾ.ಶಿವಕುಮಾರ್ ಉಪನ್ಯಾಸ ನೀಡುವರು, ಎನ್.ಇಂದಿರಮ್ಮ ಪ್ರತಿಕ್ರಿಯೆ ನೀಡುವರು. ಬೆಳಿಗ್ಗೆ ೧೧.೧೫ಕ್ಕೆ ಪ್ರೊ.ರಹಮತ್ ತರೀಕೆರೆ ಅವರು ‘ನಾಗರಿಕತೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಹೋರಾಟ’ ವಿಷಯ ಮಂಡಿಸುವರು. ಹಾರೋಹಳ್ಳಿ ಪ್ರಕಾಶ ಪ್ರತಿಕ್ರಿಯೆ ನೀಡುವರು.

ಮಧ್ಯಾಹ್ನ ೧೨.೩೦ಕ್ಕೆ ‘ಉದ್ಯಮಶೀಲತೆ ಚಳವಳಿ: ಒಳನೋಟ’ದ ಕುರಿತು ಬಿ.ಶ್ರೀಪಾದ ಭಟ್ ಮಾತನಾಡಿದರೆ, ವರಹಳ್ಳಿ ಆನಂದ್ ಪ್ರತಿಕ್ರಿಯೆ ನೀಡುವರು. ಮಧ್ಯಾಹ್ನ ೨.೩೦ಕ್ಕೆ ಎಚ್.ಎಂ.ರುದ್ರಸ್ವಾಮಿ ಅವರು ‘ದಸಂಸ ನಡೆದು ಬಂದ ಹಾದಿ ಮತ್ತು ಮುಂದಿನ ನಡೆ’ ಕುರಿತು ಮಾತನಾಡಿದರೆ ಆಲಗೂಡು ಶಿವಕುಮಾರ್ ಪ್ರತಿಕ್ರಿಯೆ ನೀಡುವರು.

ಇದನ್ನೂ ಓದಿ:-ಕಾಂಗ್ರೆಸ್‌ ಆಯ್ತು ಇದೀಗ ಬಿಜೆಪಿ ಸರದಿ : ದಿಲ್ಲಿ ತಲುಪಿದ ಬಿಜೆಪಿ ಪ್ರತ್ಯೇಕ ಬಣ

ಮಧ್ಯಾಹ್ನ ೩.೪೫ಕ್ಕೆ ‘ಗ್ರಾಮಸಭೆಗಳ ಮಹತ್ವ’ ಕುರಿತು ರಾಜಾ ಹುಣಸೂರು ವಿಷಯ ಮಂಡಿಸಿದರೆ, ಯದುನಾಡ ನಾಗರಾಜ್ ಪ್ರತಿಕ್ರಿಯೆ ನೀಡುವರು. ಸಂಜೆ ೫ಕ್ಕೆ ಆರ್.ಸಂತೋಷ್ ನಾಯಕ್ ಅವರೊಂದಿಗೆ ‘ಪುಸ್ತಕ, ಓದು, ಚರ್ಚೆ, ಸಂವಾದ’ ನಡೆಯಲಿದೆ.

ಡಿ.೧೪ರಂದು ಬೆಳಿಗ್ಗೆ ೯ಕ್ಕೆ ‘ಜಾಗತೀಕರಣವೋ? ಮರುವಸಾಹಾತೀಕರಣವೋ’ ವಿಷಯ ಕುರಿತು ಎಚ್.ಎಸ್.ಶಿವಸುಂದರ್ ವಿಷಯ ಮಂಡಿಸುವರು, ಬಿ.ಡಿ.ಶಿವಬುದ್ಧಿ ಪ್ರತಿಕ್ರಿಯೆ ನೀಡುವರು. ಬೆಳಿಗ್ಗೆ ೧೦.೧೫ಕ್ಕೆ ಐಪಿಎಸ್ ಅಧಿಕಾರಿ ಡಾ.ಬಿ.ಟಿ.ಕವಿತಾ ಅವರು ‘ಯುವ ಜನತೆಗೆ ಕಾನೂನು’ ವಿಷಯ ಮಂಡಿಸುವರು.

ಬೆಳಿಗ್ಗೆ ೧೧.೩೦ಕ್ಕೆ ಕೆಎಎಸ್ ಅಽಕಾರಿ ಮಂಜುನಾಥ್ ಸೋಸಲೆ ‘ಸ್ಪರ್ಧಾತ್ಮಕ ಪರೀಕ್ಷೆ’ ಕುರಿತು, ಮಧ್ಯಾಹ್ನ ೧.೩೦ಕ್ಕೆ ಬಡಗಲಪುರ ನಾಗೇಂದ್ರ ‘ರೈತ ಸಂಘ ನಡೆದು ಬಂದ ಹಾದಿ ಮತ್ತು ಮುಂದಿನ ನಡೆ’ ಕುರಿತು ವಿಷಯ ಮಂಡಿಸಿದರೆ ಜೆ.ಎಂ.ವೀರಸಂಗಯ್ಯ ಪ್ರತಿಕ್ರಿಯೆ ನೀಡುವರು.

ಮಧ್ಯಾಹ್ನ ೨.೪೫ಕ್ಕೆ ಟಿ.ಜಿ.ಎಸ್. ಅವಿನಾಶ್ ‘ಜಾಗತಿಕ ತಾಪಮಾನ ಮತ್ತು ಕೃಷಿ’ ಮತ್ತು ಸಂಜೆ ೪ಕ್ಕೆ ‘ಪ್ರಸ್ತುತ ರಾಜಕೀಯ: ನಮ್ಮ ನಿಲುವು’ ಕುರಿತು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ವಿಷಯ ಮಂಡಿಸುವರು. ಅಹಿಂದ ಜವರಪ್ಪ ಪ್ರತಿಕ್ರಿಯೆ ನೀಡುವರು. ಆಸಕ್ತರು ಹೆಚ್ಚಿನ ವಿವರಗಳಿಗೆ ಮೊ. ೮೧೯೭೮೫೬೧೩೨ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಆಂದೋಲನ ಡೆಸ್ಕ್

Recent Posts

ಚಾ.ಬೆಟ್ಟದ ತಪ್ಪಲಿನಲ್ಲಿ ಬೆಂಕಿ : ಕಿಡಿಗೇಡಿಗಳ ಕೃತ್ಯಕ್ಕೆ ಸಸ್ಯ ಸಂಕುಲ ಹಾನಿ

ಮೈಸೂರು:  ಕಿಡಿಗೇಡಿಗಳು ಬೆಂಕಿ ಹಚ್ಚಿದ ಕೃತ್ಯಕ್ಕೆ ಚಾಮುಂಡಿಬೆಟ್ಟದ ತಪ್ಪಲಿನ ಕೆಲವು ಪ್ರದೇಶ ಹೊತ್ತಿ‌ಉರಿದಿದ್ದು,ಕೆಲಕಾಲ‌ ಆತಂಕ‌ ನಿರ್ಮಾಣವಾಗಿತ್ತು. ಚಾಮುಂಡಿಬೆಟ್ಟದ ತಪ್ಪಲಿನ ರಿಂಗ್…

6 hours ago

ಮೈಸೂರು | ಅಪೋಲೋ ಆಸ್ಪತ್ರೆಯಲ್ಲಿ ರೋಬೊಟಿಕ್‌ ಶಸ್ತ್ರಚಿಕಿತ್ಸೆ ಸೌಲಭ್ಯ

ಮೈಸೂರು : ನಗರದ ಅಪೋಲೋ ಬಿಜಿಎಸ್ ಆಸ್ಪತ್ರೆಯು ಮೈಸೂರಿನಲ್ಲಿ ಮೊದಲ ಸಮಗ್ರ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಆರಂಭಿಸಿದೆ. ಇದು ಈ ವ್ಯಾಪ್ತಿಯಲ್ಲಿ…

7 hours ago

ಆವಿಷ್ಕಾರ,ವಿಜ್ಞಾನ, ತಂತ್ರಜ್ಞಾನದ ಬಗ್ಗೆ ರೈತರಿಗೆ ಅರಿವು ಮೂಡಿಸಿ : ಎನ್.ಚಲುವರಾಯಸ್ವಾಮಿ

ಬೆಂಗಳೂರು : ಕೃಷಿ ಹಾಗೂ ಜಲಾನಯನ ಇಲಾಖೆ ವತಿಯಿಂದ ಕೈಗೊಳ್ಳಲಾಗಿರುವ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಕೃಷಿ ಸಚಿವರಾದ…

8 hours ago

ಬಜೆಟ್ ಘೋಷಣೆಯಂತೆ ಚಾಲುಕ್ಯ ಉತ್ಸವದ ಆಯೋಜನೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ : 2025-26ರ ಬಜೆಟ್ ನಲ್ಲಿ ಮಾಡಿದ ಘೋಷಣೆಯಂತೆ ಬಾದಾಮಿಯ ಐತಿಹಾಸಿಕ ಪರಂಪರೆಯನ್ನು ಸಾರುವ ಚಾಲುಕ್ಯ ಉತ್ಸವವಕ್ಕೆ ಚಾಲನೇ ನೀಡಲು…

8 hours ago

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ಅವಿರೋಧ ಆಯ್ಕೆ

ಹೊಸದಿಲ್ಲಿ : ನಿರೀಕ್ಷೆಯಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಬಿಹಾರ ಮೂಲದ ನಿತಿನ್ ನಬಿನ್ ಅವರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ…

9 hours ago

ವಿಡಿಯೋ ವೈರಲ್‌ ಬೆನ್ನಲ್ಲೇ ಡಿಜಿಪಿ ರಾಮಚಂದ್ರರಾವ್‌ ಅಜ್ಞಾತ ಸ್ಥಳಕ್ಕೆ

ಬೆಂಗಳೂರು : ಡಿಜಿಪಿ ರಾಮಚಂದ್ರರಾವ್‌ ಅವರ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ಈ ಬೆನ್ನಲ್ಲೇ ಡಿಜಿಪಿ ರಾವ್‌ ಅವರು ಹತ್ತು…

9 hours ago