ಮೈಸೂರು: ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವನ ಸಾಧನೆಯೇ ಒಂದು ದೊಡ್ಡ ಮೈಲಿಗಲ್ಲು ಎಂದು ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾದ ಎಸ್.ಎಲ್.ಚನ್ನಬಸವಣ್ಣ ಹೇಳಿದರು.
ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಕರ್ನಾಟಕ ಬುದ್ಧ ಧಮ್ಮ ಸಮಿತಿ ವತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ಬೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರ್ರವರ ಪರಿನಿರ್ವಾಣ ದಿನಾಚರಣೆ ಮತ್ತು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಬಹುಜನರು, ತಳ ಸಮುದಾಯವನ್ನು ಶಿಕ್ಷಣದ ಮೂಲಕವೇ ಮೇಲೆತ್ತುವ ಕೆಲಸ ಮಾಡಿದರು. ಇಂತಹ ಕೆಲಸ ಯಾವ ದೇಶದಲ್ಲೂ ಆಗಿಲ್ಲ. ಬೇರೆ ದೇಶಗಳಲ್ಲಿ ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹಿಂಸಾತ್ಮಕ ಕೃತ್ಯವನ್ನು ಅನುಸರಿಸಿದ್ದರಿಂದ ರಕ್ತ ಕ್ರಾಂತಿಗಳೇ ನಡೆದಿವೆ, ಹಿಂಸೆಯ ಮೂಲಕವೇ ಹಕ್ಕುಗಳನ್ನು ಪಡೆಯುವ ಕೆಲಸವಾಗಿದೆ. ಆದರೆ ಭಾರತದಲ್ಲಿ ಬಾಬಾ ಸಾಹೇಬರು ಇದಕ್ಕೆ ಅವಕಾಶ ನೀಡದೆ ಶಾಂತಿಯುತ ಹೋರಾಟದ ಮೂಲಕವೇ ಜನರಿಗೆ ಸಮಾನತೆಯನ್ನು ತಂದುಕೊಡುವ ಕೆಲಸ ಮಾಡಿದರು ಎಂದು ಸ್ಮರಿಸಿದರು.
ಯಾವುದೇ ಭಾಷೆ, ಧರ್ಮ, ಸಂಸ್ಕೃತಿಯನ್ನು ಪಾಲನೆ ಮಾಡಲು ಸಂವಿಧಾನವೇ ಮೂಲಕಾರಣ. ಆದ್ದರಿಂದ ಈ ದೇಶದ ನಿಜವಾದ ಧರ್ಮ ಗ್ರಂಥ ಸಂವಿಧಾನವಾಗಿದೆ. ಇಂದಿನ ಪೀಳಿಗೆಗೆ ಬಾಬಾ ಸಾಹೇಬರನ್ನು ಪರಿಚಯಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್. ಮಹದೇವಪ್ಪ ಮಾತನಾಡಿ, ಹಿಮಾಲಯದ ಮಾನಸ ಸರೋವರದಲ್ಲಿ ಹುಟ್ಟಿ, ಹಳ್ಳಕೊಳ್ಳ ಪ್ರದೇಶ, ಗಿರಿಕಂದರಗಳನ್ನು ದಾಟಿ ಬಯಲಾಗಿ ಹರಿಯುವ ಗಂಗಾನದಿಯು ಕೋಟ್ಯಂತರ ಜನರ ಜೀವನಾಡಿಯಾಗಿದೆ. ಅನೇಕ ಸಂಸ್ಕೃತಿ, ಧಾರ್ಮಿಕ ಕೇಂದ್ರಗಳ ಭಕ್ತಿ ಭಾವದ ಸೆಲೆಯಾಗಿ ಹರಿಯುವ ಗಂಗಾನದಿಯಂತೆ ಬಾಬಾಸಾಹೇಬರು ಈ ದೇಶದ ಕೋಟ್ಯಂತರ ಶೋಷಿತ ಜನರ ಧ್ವನಿಯಾಗಿ, ಅವರ ಬದುಕಿನ ದಾರಿದೀಪವಾಗಿದ್ದಾರೆ.
ಸಾವಿರಾರು ಕಿಲೋ ಮೀಟರ್ ದೂರ ಹರಿಯುವ ಗಂಗಾನದಿಯನ್ನು ಪೂಜ್ಯನೀಯ ಭಾವದಿಂದ ಗೌರವಿಸುತ್ತಾರೆ. ಬಾಬಾ ಸಾಹೇಬರು ಕೂಡ ಶೋಷಿತರ ನಡುವೆ ಇಂತಹದ್ದೇ ಸ್ಥಿತಿಯನ್ನು ತಲುಪಿದ್ದಾರೆ. ಹಾಗಾಗಿ ಬಾಬಾಸಾಹೇಬರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಸ್ವೀಕರಿಸಿದ್ದಾಗ ಮಾತ್ರ ನಮ್ಮ ನಡುವೆ ಉಳಿಯುತ್ತಾರೆ ಎಂದರು.
ಇದೇ ವೇಳೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಪ್ರೊ.ಸಿದ್ದಣ್ಣ ಲಂಗೋಟಿ, ಸಮಿತಿಯ ಅಧ್ಯಕ್ಷರಾದ ಪ್ರೊ.ಡಿ.ನಂಜುಂಡಯ್ಯ, ಸಹ ಕಾರ್ಯದರ್ಶಿ ಎಚ್. ಶಿವರಾಜ್, ಎಂ.ಸಾವಕಯ್ಯ , ನಿವೃತ್ತ ಇಂಜಿನಿಯರ್ ಆರ್. ನಟರಾಜ್, ರಾಜು ಹಂಪಾಪುರ, ನಿಸರ್ಗ ಸಿದ್ದರಾಜು, ಕ್ರಾಂತಿರಾಜ್ ಓಡೆಯರ್, ಪುಟ್ಟಸ್ವಾಮಿ, ದಯಾನಂದಮೂರ್ತಿ, ಕೆ. ಮಹಾದೇವಯ್ಯ, ಡಾ.ಸತ್ತಿಗೆಹುಂಡಿ ಮಂಜು, ಶಶಿಕಲಾ, ಮಾ.ನಾಗಯ್ಯ, ಪ್ರೇಮಲತಾ, ಬಿ. ಗಾಯತ್ರಿದೇವಿ, ರಾಜಮ್ಮ, ಪುಟ್ಟಮಾದಯ್ಯ, ಡಾ. ಎಸ್. ಜಯರಾಜು, ಎಚ್. ವಾಸು, ಪಿ.ಮರಿಸ್ವಾಮಿ, ಮಹದೇವಸ್ವಾಮಿ, ಕೆ. ಸಿದ್ದರಾಜು, ಎಸ್. ಆರ್. ಪ್ರಶಾಂತ್, ಸಣ್ಣಯ್ಯ ಲಕ್ಕೂರು, ರೂಪೇಶ್, ವಿಜಯ್ ಕುಮಾರ್, ಸಚಿನ್, ವಿವಿಧ ಸಂಘ -ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
ಮಂಡ್ಯ: ಮುಂದಿನ ಎರಡು ವರ್ಷಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳ ಅಭಿವೃದ್ಧಿಗಿಂತ ಮುಂಚೂಣಿಯಲ್ಲಿರಲಿದ್ದು, ಇದಕ್ಕೆ ಶ್ರಮಿಸುತ್ತಿರುವ ಸ್ಥಳೀಯ…
ಕಲಬುರ್ಗಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರ ವಿದೇಶ ನೀತಿಯಿಂದಾಗಿ ಅಮೇರಿಕಾದ ವಿದೇಶಾಂಗ ಸಚಿವರು ಸೇರಿದಂತೆ…
ನವದೆಹಲಿ: ಇರಾನ್-ಇಸ್ರೇಲ್ ಸಂಘರ್ಷದ ಪರಿಸ್ಥಿತಿಯು ಭಾರತದ ಭಾಸುಮತಿ ಅಕ್ಕಿ ರಫ್ತಿನ ಮೇಲೆ ತೀವ್ರ ಹೊಡೆತ ನೀಡಿದೆ. ದೆಹಲಿಯ ಗೋದಾಮುಗಳಲ್ಲಿ ಸುಮಾರು…
ಚೆನ್ನೈ: ತಮಿಳು ನಟ ದಳಪತಿ ವಿಜಯ್ ವೈಯಕ್ತಿಕ ಜೀವನದಲ್ಲಿನ ಬಿರುಗಾಳಿ ಈಗ ನ್ಯಾಯಾಲಯದ ಅಂಗಳದಲ್ಲಿ ಹೊಸ ತಿರುವು ಪಡೆದುಕೊಂಡಿದೆ. 27…
ಟೆಹರಾನ್: ಇರಾನ್-ಇಸ್ರೇಲ್ ಸಂಘರ್ಷ ಮುಂದುವರಿದಿದ್ದು, ಇಸ್ರೇಲ್ ನಡೆಸಿದ ಹೊಸ ಅಲೆಯ ವೈಮಾನಿಕ ದಾಳಿಗೆ ಟೆಹರಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ…
ಮೈಸೂರು: ಮೈಸೂರು ತಾಲೂಕು ವರುಣಾ ಹೋಬಳಿಯ ಪಿಲ್ಲಹಳ್ಳಿ ಗ್ರಾಮದಲ್ಲಿರುವ ದಂಡಿಮಾರಮ್ಮ ದೇವಾಲಯವನ್ನು ಸಿಎಂ ಸಿದ್ದರಾಮಯ್ಯ ಅವರಿಂದು ಉದ್ಘಾಟಿಸಿದರು. ದೇವಸ್ಥಾನಕ್ಕೆ ತೆರಳಿ…