ಅಂತಾರಾಷ್ಟ್ರೀಯ

ರಷ್ಯಾ ಇಲ್ಲದೆ ಶಾಶ್ವತ, ಸ್ಥಿರ ಜಾಗತಿಕ ಸುವ್ಯವಸ್ಥೆ ಸಾಧ್ಯವಿಲ್ಲ : ಪುಟಿನ್‌

ಮಾಸ್ಕೊ: ಅಮೆರಿಕಾದ ಜಾಗತಿಕ ವ್ಯವಸ್ಥೆ ದುರ್ಬಲಗೊಳ್ಳುತ್ತಾ ಬರುತ್ತಿದೆ. ಆದರೆ, ನಮ್ಮ ದೇಶವು ಈಗ ಹೆಚ್ಚು ಸಮಾನವಾದ ಜಾಗತಿಕ ವ್ಯವಸ್ಥೆಯನ್ನು ರಚಿಸುವಲ್ಲಿ ಮುಂಚೂಣಿಯಲ್ಲಿದೆ. ಸಾರ್ವಭೌಮ, ಬಲಿಷ್ಟ ರಷ್ಯಾ ಇಲ್ಲದೆ ಶಾಶ್ವತ, ಸ್ಥಿರ ಜಾಗತಿಕ ಸುವ್ಯವಸ್ಥೆ ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮರ್‌ ಪುಟಿನ್ ಹೇಳಿದ್ದಾರೆ.

ರಾಜ್ಯ ಉಕೇನ್‌ ಮೇಲೆ ಮಿಲಿಟರಿ ಕಾರ್ಯಾಚರಣೆ ಮಾಡುತ್ತಿರುವುದು ನಮ್ಮ ದೇಶವನ್ನು ನಾಶಮಾಡುವ ಪಾಶ್ಚಿಮಾತ್ಯರ ವಿರುದ್ಧದ ಸಂಘರ್ಷವಾಗಿದೆ. ರಷ್ಯಾವನ್ನು ಬಲಿಷ್ಟ, ಸ್ವತಂತ್ರ ಶಕ್ತಿಯನ್ನಾಗಿ, ನಾಗರಿಕ ದೇಶವನ್ನಾಗಿ ಉಳಿಸುವ ನಮ್ಮ ಉನ್ನತ ಐತಿಹಾಸಿಕ ಹಕ್ಕನ್ನು ರಕ್ಷಿಸುತ್ತಿದ್ದೇವೆ ಎಂದು ಪುಟಿನ್ ಹೇಳಿದ್ದಾರೆ.

ಅಮೆರಿಕ ಮತ್ತು ಅದರ ಮಿತ್ರರಾಷ್ಟಗಳು ರಷ್ಯಾವನ್ನು ಛಿದ್ರಗೊಳಿಸಲು ಮತ್ತು ಲೂಟಿ ಮಾಡಲು ಪ್ರಯತ್ನಿಸುತ್ತಿವೆ. ಆದರೆ ನಾವು ರಷ್ಯಾ ಮಾತ್ರವಲ್ಲದೇ ಇಡೀ ಪ್ರಪಂಚದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ. ಪಾಶ್ಚಿಮಾತ್ಯರಿಗೆ ರುಸೋಫೋಬಿಯಾ(ರಷ್ಯಾ ಕುರಿತು ಭಯ) ಕಾಡುತ್ತಿದೆ.

ನಮ್ಮ ವೈವಿಧ್ಯತೆ ಮತ್ತು ಸಂಸ್ಕೃತಿ, ಸಂಪ್ರದಾಯ, ಭಾಷೆಗಳು, ಜನಾಂಗೀಯ ಗುಂಪುಗಳ ಏಕತೆಯು ಪಾಶ್ಚಿಮಾತ್ಯ ಜನಾಂಗೀಯ ವಾದಿಗಳು ಮತ್ತು ವಸಾಹತುಶಾಹಿಗಳ ನಿಲುವುಗಳನ್ನು ಒಡೆಯುವ ಮತ್ತು ಬೇರ್ಪಡಿಸುವ ಅವರ ನಿಗ್ರಹ ಮತ್ತು ಶೋಷಣೆಯ ಕ್ರೂರ ಯೋಜನೆ ಹೊಂದಿಕೆಯಾಗುವುದಿಲ್ಲ. ಇದರಿಂದಾಗಿ ಕಲಹ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ.

ನಮ್ಮ ದೇಶದ ವಿರುದ್ಧ ನಡೆಯುವ ಆಕ್ರಮಣಕಾರಿ ಭಯೋತ್ಪಾದನೆ ಮತ್ತು ಉಗ್ರವಾದ, ಅಂತರ್ ಧರ್ಮೀಯ ಘರ್ಷಣೆ ಸೇರಿದಂತೆ ಯಾವುದೇ ಬಾಹ್ಯ ಹಸ್ತಕ್ಷೇಪ, ಪ್ರಚೋದನೆಗಳನ್ನು ಒಡ್ಡಿದರು ಅದನ್ನು ನಿಗ್ರಹಿಸುವ ಸಾಮಥ್ಯ ರಷ್ಯಾಗಿದೆ ಎಂದು ಪುಟಿನ್ ಪ್ರತಿಪಾದಿಸಿದ್ದಾರೆ.

andolanait

Share
Published by
andolanait

Recent Posts

ಚಾ. ಬೆಟ್ಟಕ್ಕೆ ಗಂಡಾಂತರ ತರುವ ಕಟ್ಟಡಗಳ ನಿರ್ಮಾಣ ನಿಲ್ಲಿಸಿ

ಮೈಸೂರು: ಚಾಮುಂಡಿಬೆಟ್ಟದ ಸುತ್ತಮುತ್ತ ಇದೀಗ ಬೆಟ್ಟದ ಅಸ್ತಿತ್ವಕ್ಕೆ ಗಂಡಾಂತರ ತರುವ ರೀತಿಯಲ್ಲಿ ಸುಮಾರು ೮ ಅಂತಸ್ತಿನ ಕಾಂಕ್ರೀಟ್ ಕಟ್ಟಡಗಳು ತಲೆ…

3 mins ago

ಚಲನಚಿತ್ರ ವಿಮರ್ಶೆಗಳ ಹೆಸರಿನ ಅನಿಸಿಕೆಗಳೂ ಚಿತ್ರೋದ್ಯಮವೂ

ಇದು ಕಳೆದ ಒಂದು ವರ್ಷದಿಂದೀಚಿನ ಬೆಳವಣಿಗೆ. ಬೇರೆ ರಾಜ್ಯಗಳಲ್ಲಿ ಇದು ನಡೆದಿತ್ತೋ ಏನೋ ಮಾಹಿತಿ ಇಲ್ಲ. ಆದರೆ ಕೇರಳದಲ್ಲಿ ಈ…

27 mins ago

ಜಂಬೂಸವಾರಿ ಮುಗಿದಿದೆ; ʼಅಂಬಾರಿʼಗೆ ಬೇಡಿಕೆ ಏರಿದೆ!

ಮೈಸೂರು: ದಸರಾ ಹಬ್ಬ ಮುಗಿದಿದೆ... ಚಿನ್ನದ ಅಂಬಾರಿ ಹೊತ್ತ ಜಂಬೂಸವಾರಿಯೂ ಸಂಪನ್ನವಾಗಿದೆ. ಆದರೆ, ನಗರದಲ್ಲಿ ಈಗಲೂ ‘ಅಂಬಾರಿ’ಯೊಂದರಲ್ಲಿ ಸಂಚರಿಸಲು ಪ್ರವಾಸಿಗರು…

45 mins ago

ಮಂಡ್ಯ ಟು ಇಂಡಿಯಾ: ಬೃಹತ್‌ ಉದ್ಯೋಗ ಮೇಳ

ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಎಚ್. ಡಿ. ಕುಮಾರಸ್ವಾಮಿ…

2 hours ago

ಮೈಮುಲ್‌: ನಿರೀಕ್ಷೆಗೂ ಮೀರಿ ಕ್ಷೀರಧಾರೆ

ಮೈಸೂರು: ದುಡಿಯಲು ಉದ್ಯೋಗ ಇಲ್ಲದೆ ನಗರ ಪ್ರದೇಶಗಳತ್ತ ಯುವ ಸಮುದಾಯ ವಲಸೆ ಹೋಗುತ್ತಿರುವುದು ಹೆಚ್ಚುತ್ತಿರುವ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ…

2 hours ago

ಮೇಲುಕೋಟೆಯಲ್ಲಿ ಸರಣಿ ಕಳ್ಳತನ

ಬೀಗ ಹಾಕಿದ್ದ ಮನೆಗಳೇ ಕಳ್ಳರ ಟಾರ್ಗೆಟ್, ಲಾಕರ್‌ಗಳನ್ನು ಒಡೆದು ನಗ,ನಾಣ್ಯ ದೋಚಿದ ದುಷ್ಕರ್ಮಿಗಳು ಮೇಲುಕೋಟೆ: ಇಲ್ಲಿನ ಒಕ್ಕಲಿಗರ ಬೀದಿಯ ಸುತ್ತಮುತ್ತಲ…

3 hours ago