ಅಂತಾರಾಷ್ಟ್ರೀಯ

ವಿಸಾ ಇಲ್ಲದೇ ಭಾರತೀಯರಿಗೆ ಪ್ರವೇಶ ಘೋಷಿಸಿದ ಮಲೇಷಿಯಾ; ಏನಿದರ ಹಿಂದಿನ ಉದ್ದೇಶ?

ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣ ಕೈಗೊಳ್ಳಬೇಕೆಂದರೆ ವಿಸಾ ಹೊಂದಿರಬೇಕಾದದ್ದು ಕಡ್ಡಾಯ ನಿಯಮ. ಆದರೆ ಕೆಲ ದೇಶಗಳು ಇತರೆ ದೇಶಗಳಿಗೆ ವಿಸಾ ರಹಿತ ಪ್ರವೇಶವನ್ನು ನೀಡುವುದರ ಮೂಲಕ ಕೆಲ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಕೆಲಸಕ್ಕೆ ಆಗಾಗ ಕೈ ಹಾಕುತ್ತಾ ಇರುತ್ತವೆ. ಕೆಲ ದಿನಗಳ ಹಿಂದೆ ಥೈಲ್ಯಾಂಡ್‌ ಭಾರತೀಯರು ನಮ್ಮ ದೇಶಕ್ಕೆ ವಿಸಾ ಇಲ್ಲದೇ ಪ್ರಯಾಣ ಕೈಗೊಳ್ಳಬಹುದು ಎಂದು ಘೋಷಣೆ ಮಾಡಿದ್ದ ಬೆನ್ನಲ್ಲೇ ಇದೀಗ ಮಲೇಷಿಯಾ ಸಹ ಅದೇ ಹಾದಿಯನ್ನು ತುಳಿದಿದೆ.

ಹೌದು, ಭಾರತ ಹಾಗೂ ಚೀನಾ ದೇಶದ ಪ್ರಜೆಗಳು ಡಿಸೆಂಬರ್‌ 1ರಿಂದ ಡಿಸೆಂಬರ್‌ 31ರವರೆಗೆ ಮಲೇಷಿಯಾ ದೇಶಕ್ಕೆ ಯಾವುದೇ ವಿಸಾ ಇಲ್ಲದೇ ಪ್ರಯಾಣ ಕೈಗೊಳ್ಳಬಹುದು ಎಂದು ಮಲೇಷಿಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ ಘೋಷಿಸಿದ್ದಾರೆ.

ಹೀಗೆ ಮಲೇಷಿಯಾ ಪ್ರಧಾನಿ ಇಂತಹ ನಿರ್ಧಾರ ಕೈಗೊಂಡ ಬೆನ್ನಲ್ಲೇ ಇದರ ಹಿಂದಿನ ಉದ್ದೇಶ ಏನಿರಬಹುದು ಎಂಬ ಚರ್ಚೆಗಳು ಆರಂಭವಾಗಿವೆ. ಡಿಸೆಂಬರ್‌ ತಿಂಗಳಲ್ಲಿ ವಿದೇಶ ಪ್ರಯಾಣ ಕೈಗೊಳ್ಳುವವರ ಸಂಖ್ಯೆ ಹೆಚ್ಚಿರುತ್ತದೆ, ಅದರಲ್ಲಿಯೂ ಹೊಸ ವರ್ಷದ ಆಚರಣೆಗಾಗಿ ಡಿಸೆಂಬರ್‌ ಅಂತ್ಯದಲ್ಲಿ ಭಾರತೀಯರು ವಿದೇಶ ಪ್ರಯಾಣ ಕೈಗೊಳ್ಳುವುದು ಹೆಚ್ಚು.

ಹೀಗಾಗಿ ವಿಸಾ ರಹಿತ ಪ್ರವೇಶಕ್ಕೆ ಭಾರತೀಯರಿಗೆ ಅನುಮತಿ ನೀಡಿದರೆ ಟೂರಿಸಂಗೆ ಬೂಸ್ಟ್‌ ಸಿಗಲಿದೆ ಎಂಬ ಉದ್ದೇಶದಿಂದ ಮಲೇಷಿಯಾ ಇಂತಹ ನಿರ್ಧಾರ ಕೈಗೊಂಡಿದೆ. ಥೈಲ್ಯಾಂಡ್‌ ಸಹ ಇಂತಹದ್ದೇ ಉದ್ದೇಶದೊಂದಿಗೆ ಭಾರತೀಯರಿಗೆ ವಿಸಾ ರಹಿತ ಪ್ರವೇಶವನ್ನು ಘೋಷಿಸಿತ್ತು. ನವೆಂಬರ್‌ 10ರಿಂದ 2024ರ ಮೇ 10ರವರೆಗೆ ಭಾರತೀಯರು ನಮ್ಮ ದೇಶಕ್ಕೆ ವಿಸಾ ರಹಿತ ಪ್ರವೇಶ ಪಡೆಯಬಹುದು ಹಾಗೂ 30 ದಿನಗಳ ಕಾಲ ಉಳಿಯಬಹುದು ಎಂದು ಘೋಷಿಸಿತ್ತು.

andolana

Share
Published by
andolana
Tags: malaysia

Recent Posts

ಶೀಘ್ರದಲ್ಲೇ ರಾಜ್ಯದಲ್ಲಿ ಗುಟ್ಕಾ ನಿಷೇಧ ಆದೇಶ ವಾಪಸ್?‌

ಬೆಂಗಳೂರು: ಗುಟ್ಕಾ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ವಾಪಸ್‌ ಪಡೆಯುವ ಸಾಧ್ಯತೆಯಿದೆ. ಆಡಳಿತರೂಢ ಕಾಂಗ್ರೆಸ್‌ ಶಾಸಕರಿಂದಲೇ ಸರ್ಕಾರದ ನಿರ್ಧಾರಕ್ಕೆ…

3 hours ago

6 ದಿನಗಳಾದರೂ ಸಿಗದ ಟೆಕ್ಕಿ ಅದ್ವೈತ್‌ ಸುಳಿವು: ಶಿವಗಂಗೆ ಬೆಟ್ಟದಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್‌ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…

4 hours ago

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.‌ಅಶೋಕ್‌ ಹಾಗೂ ಸಿಎಂ ಡಿ.ಕೆ.ಶಿವಕುಮಾರ್‌…

5 hours ago

ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗಕ್ಕೆ ನುಗ್ಗಿದ ನೀರು: 7 ಮಂದಿ ಕಾರ್ಮಿಕರು ಸಾವು

ಡೆಹ್ರಾಡೂನ್:‌ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…

7 hours ago

ಓದುಗರ ಪತ್ರ: ಸ್ವಾಗತಾರ್ಹ ಸಂಕಲ್ಪ!

ಸ್ವಾಗತಾರ್ಹ ಸಂಕಲ್ಪ! ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು ‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ ಈ ಭ್ರಷ್ಟಾಚಾರ ಎಂಬ…

10 hours ago

ಓದುಗರ ಪತ್ರ: ಸತ್ಪ್ರಜೆಗಳಾಗಿ ಜೀವಿಸುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ನೀಡುವ ಗೌರವ

ಆಗಸ್ಟ್ ಹದಿನೈದು ಬಂತೆಂದರೆ ಸಾಕು, ನಮ್ಮಲ್ಲಿ ದೇಶಪ್ರೇಮದ ರೋಮಾಂಚನ. ಶಾಲೆ-ಕಚೇರಿಗಳಲ್ಲಿ ರಾಷ್ಟ್ರಧ್ವಜರೋಹಣ, ಸಿಹಿತಿಂಡಿ ಹಂಚಿಕೆ, ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳು…

10 hours ago