‘ರಾಮ ರಾಮಾ ರೇ’ ಚಿತ್ರದ ಮೂಲಕ ನಿರ್ದೇಶಕರಾದ ಸತ್ಯಪ್ರಕಾಶ್, ನಂತರ ನಿರ್ಮಾಪಕರಾದರು, ವಿತರಕರೂ ಆದರು. ಇದೀಗ ‘X&Y’ ಚಿತ್ರದ ಮೂಲಕ ಅವರು ಸದ್ದಿಲ್ಲದೆ ಹೀರೋ ಸಹ ಆಗಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುವುದರ ಜೊತೆಗೆ ತಮ್ಮ ಸತ್ಯ ಪಿಕ್ಚರ್ಸ್ ಸಂಸ್ಥೆಯಡಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಷ್ಟೇ ಅಲ್ಲ, ರಾಜ್ಯಾದ್ಯಂತ ತಾವೇ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ‘Go Win The Swamy’ ಹಾಡು ಬಿಡುಗಡೆ ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ಚಿತ್ರದ ಬಗ್ಗೆ ಸತ್ಯಪ್ರಕಾಶ್ ಇದೇ ಮೊದಲ ಬಾರಿಗೆ ಹಲವು ವಿಷಯಗಳನ್ನು ಹಂಚಿಕೊಂಡರು.
‘X&Y’ ಚಿತ್ರದ ಕುರಿತು ಮಾತನಾಡುವ ಸತ್ಯಪ್ರಕಾಶ್, ‘ನಮ್ಮ ಬಳಿ ಒಂದೊಳ್ಳೆಯ ಕಥೆ ಇತ್ತು. ಆದರೆ, ಅದನ್ನು ತೆರೆಯ ಮೇಲೆ ತರುವುದು ಸುಲಭವಾಗಿರಲಿಲ್ಲ. ವಿಷಯವನ್ನು ಮನರಂಜನಾತ್ಮಕವಾಗಿ ಹೇಳುವುದರ ಜೊತೆಗೆ ಸರಳವಾಗಿ ಮತ್ತು ಎಲ್ಲಾ ವರ್ಗದ ಜನರಿಗೆ ಹೇಳಬೇಕಿತ್ತು. ಇದು ಸೈನ್ಸ್ ಫಿಕ್ಷನ್ ಕಥೆಯಲ್ಲ. ಇದೊಂದು ಭವನಾತ್ಮಕ ಕಥೆ. ಅದನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ನಾನು ಈ ಚಿತ್ರದ ಹೀರೋ ಅಲ್ಲ. ಒಬ್ಬ ನಟ ಅಷ್ಟೇ. ಬಹಳಷ್ಟು ಪ್ರತಿಭಾವಂತ ಕಲಾವಿದರಿದ್ದಾರೆ. ಹೂವಿನ ಜೊತೆಗೆ ನಾರು ಸ್ವರ್ಗ ಸೇರುವಂತೆ ನಾನ ನಟಿಸಿದ್ದೇನೆ. ನನ್ನಿಂದ ಒಳ್ಳೆಯ ನಟನೆ ಬಂದಿದ್ದರೆ, ಅದಕ್ಕೆ ಅವರೆಲ್ಲರೂ ಕಾರಣ’ ಎಂದರು.
ಒಂದೊಳ್ಳೆಯ ತಂಡವಿದ್ದರೆ ನಿರ್ಮಾಪಕರೂ ಆಗಬಹುದು, ನಿರ್ದೇಶಕರೂ ಆಗಬಹುದು ಎನ್ನುವ ಸತ್ಯಪ್ರಕಾಶ್, ‘ಇಲ್ಲಿ ತಂಡ ಮುಖ್ಯ. ತಂಡ ಚೆನ್ನಾಗಿ ಇದ್ದರೆ ನಾವು ಏನು ಬೇಕಾದರೂ ಮಾಡಬಹುದು. ಈ ಚಿತ್ರವನ್ನು ನನ್ನದೇ ಸತ್ಯ ಪಿಕ್ಚರ್ಸ್ ಸಂಸ್ಥೆ ನಿರ್ಮಿಸಿದೆಯಾದರೂ, ನನ್ನ ಬಳಿ ದುಡ್ಡಿಲ್ಲ. ನಿರ್ಮಾಪಕರಾಗಿ ಬಹಳಷ್ಟು ಜನ ಇದ್ದಾರೆ. ಇದೊಂದು ಹೊಸ ತರಹದ ಚಿತ್ರ. ಜನ ಬಂದು ಚಿತ್ರ ನೋಡುತ್ತಾರೆ ಎಂಬ ನಂಬಿಕೆ ಇದೆ’ ಎಂದರು.
ಬೃಂದಾ ಆಚಾರ್ಯ ಇಲ್ಲಿ ಕೃಪಾ ಎಂಬ ಯುವತಿಯ ಪಾತ್ರ ಮಾಡಿದ್ದಾರೆ. ‘ಕಥೆ ಕೇಳಿದಾಗ ಬಹಳ ಸವಾಲಿನದ್ದು ಎಂದನಿಸಿತು. ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.
‘X&Y’ ಚಿತ್ರದಲ್ಲಿ ಸತ್ಯಪ್ರಕಾಶ್ ಮತ್ತು ಬೃಂದಾ ಆಚಾರ್ಯ ಜೊತೆಗೆ ಧರ್ಮಣ್ಣ, ಸುಂದರ್ ವೀಣಾ, ಅಥರ್ವ ಪ್ರಕಾಶ್, ಹರಿಣಿ, ಆಯನಾ, ವೀಣಾ ಸುಂದರ್, ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಹರ್ಷ ಕೌಶಿಕ್ ಸಂಗೀತ ಮತ್ತು ಬಿ.ಎಸ್. ಕೆಂಪರಾಜ್ ಸಂಕಲನವಿದೆ.
ಲಕ್ನೋ: ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲರಾದ…
ಬೆಂಗಳೂರು: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಮುಂದಿನ ವಾರದಲ್ಲಿ ತನಿಖಾ ತಂಡ…
ಬೆಂಗಳೂರು: ಕಚೇರಿಯಲ್ಲಿ ಮಹಿಳೆಯರೊಂದಿಗೆ ರಾಮಚಂದ್ರರಾವ್ ಅನುಚಿತ ವರ್ತನೆ ಕುರಿತ ವೈರಲ್ ವಿಡಿಯೋಗಳು ಅಸಲಿ ಎಂದು ತನಿಖಾ ತಂಡ ದೃಢಪಡಿಸಿದೆ. ಸಮವಸ್ತ್ರದಲ್ಲಿಯೇ…
ನವದೆಹಲಿ: ಮಧ್ಯ ಏಷ್ಯಾದಲ್ಲಿ ಬಿಕ್ಕಟ್ಟು ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಜೊತೆ…
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.…
ಬೆಂಗಳೂರು: ಕರ್ನಾಟಕದ ಹಲವೆಡೆ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೀದರ್, ಕಲಬುರ್ಗಿ,…