ಕೋವಿಡ್ ಕಾಲದಲ್ಲಾದ ನೈಜ ಘಟನೆಗಳನ್ನಿಟ್ಟುಕೊಂಡು ಕೆಲವು ಚಿತ್ರಗಳು ಮತ್ತು ವೆಬ್ಸರನಿಗಳು ಈಗಾಗಲೇ ತಯಾರಾಗಿವೆ. ನಾಳೆ (ನವೆಂಬರ್ ೨೨) ಬಿಡುಗಡೆ ಅಗುತ್ತಿರುವ ಶ್ರೀಧರ್ ಶಾಸ್ತ್ರಿ ನಿರ್ದೇಶನದ ʼಟೆನೆಂಟ್ʼ ಸಹ ಒಂದು.
ʼಟೆನೆಂಟ್ʼ ಕೇವಲ ಐದು ಪಾತ್ರಗಳ ಸುತ್ತ ಸುತ್ತುವ ಚಿತ್ರ. ಈ ಚಿತ್ರವು ಒಂದು ಮನೆ ಮತ್ತು ಕೇವಲ ಐದು ಪಾತ್ರಗಳ ಸುತ್ತ ಸುತ್ತುತ್ತದಂತೆ. ಇದರಲ್ಲಿ ಧರ್ಮ ಕೀರ್ತಿರಾಜ್, ʼಉಗ್ರಂʼ ಮಂಜು, ತಿಲಕ್, ರಾಕೇಶ್ ಮಯ್ಯ ಮತ್ತು ಸೋನು ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಶ್ರೀಧರ್ ಶಾಸ್ತ್ರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಶ್ರೀಧರ್ ಶಾಸ್ತ್ರೀ, ʼಕೋವಿಡ್ ಸಮಯದಲ್ಲಿ ಬದುಕೋದೇ ಕಷ್ಟ ಎನ್ನುವಾಗ, ಇಂಥ ಸಂದರ್ಬವನ್ನೂ ಜನ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡರು. ಆಕ್ಸಿಜನ್ ಸಿಲಿಂಡರ್ಗಳನ್ನು ಬ್ಲಾಕ್ನಲ್ಲಿ ಮಾರಾಟ ಮಾಡಲಾಯಿತು. ಆಂಬ್ಯುಲೆನ್ಸ್ ಸಿಗುವುದು ದುಬಾರಿಯಾಯಿತು. ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಬ್ಲಾಕ್ ಮಾಡುವ ದಂಧೆ ಶುರುವಾದ ಸುದ್ದಿಗಲು ಕೇಳಿ ಬರುತ್ತಿದ್ದವು. ಈ ಸುದ್ದಿಗಳನ್ನು ಕೇಳಿ ಜನಸಾಮಾನ್ಯರಿಗೆ ಆಘಾತ ಅಘಾತವಾಗುವುದರ ಜೊತೆಗೆ ಬೇಸರವೂ ಆಯಿತು. ಹೀಗೆ ಮಾಧ್ಯಮಗಳಲ್ಲಿ ಓದಿದ ಮತ್ತು ಕೇಳಿದ ಹಲವು ಘಟನೆಗಳನ್ನು ಸೇರಿಸಿ ಒಂದು ಕಥೆ ಮಾಡಿಕೊಂಡೆ. ಕೋವಿಡ್ನ ಕರಾಳ ಮುಖಗಳನ್ನು ತೋರಿಸುವ ನಿಟ್ಟಿನಲ್ಲಿ ಕತೆ ತಯಾರಾಯಿತುʼ ಎನ್ನುತ್ತಾರೆ ಶ್ರೀಧರ್.
ಇಲ್ಲಿ ಧರ್ಮ ಕೀರ್ತಿರಾಜ್ ಮನೆ ಬಾಡಿಗೆದಾರನಾಗಿ ಕಾಣಿಸಿಕೊಂಡರೆ, ಪೊಲೀಸ್ ಅಧಿಕಾರಿಯಾಗಿ ತಿಲಕ್ ಕಾಣಿಸಿಕೊಂಡಿದ್ದಾರೆ. ʼಉಗ್ರಂʼ ಮಂಜು ಈ ಚಿತ್ರದಲ್ಲಿ ಆಂಬ್ಯುಲೆನ್ಸ್ ಡ್ರೈವರ್ ಪಾತ್ರದಲ್ಲಿ ನಟಿಸಿದ್ದು, ಮನೆಯ ಮಾಲೀಕರಾಗಿ ರಾಕೇಶ್ ಮಯ್ಯ ಮತ್ತು ಸೋನು ಗೌಡ ನಟಿಸಿದ್ದಾರೆ.
ಮಾಸ್ಟರ್ ಚಾಯ್ಸ್ ಕ್ರಿಯೇಷನ್ಸ್ನಡಿ ನಾಗರಾಜ್ ಟಿ ನಿರ್ಮಿಸಿರುವ ‘ಟೆನೆಂಟ್’ ಚಿತ್ರಕ್ಕೆ ಗಿರೀಶ್ ಹೊತೂರ್ ಸಂಗೀತ, ಉಜ್ವಲ್ ಸಂಕಲನ ಮತ್ತು ಮನೋಹರ್ ಜೋಷಿ ಅವರ ಛಾಯಾಗ್ರಹಣವಿದೆ.
ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…
ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ.…
ತೀರಿಹೋದ ಕನ್ನಡದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಉದ್ದೇಶಿತ ಸ್ಮಾರಕದ…
ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…
ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…