ಉಡುಪಿ: ಜಿಲ್ಲೆಯ ಬೈಂದೂರಿನ ಕೊಲ್ಲೂರು ಮುಕಾಂಬಿಕಾ ದೇವಾಲಯಕ್ಕೆ ತೆಲುಗಿನ ಖ್ಯಾತ ನಟ ಜೂ. ಎನ್ಟಿಆರ್ ಅವರು ಕುಟುಂಬ ಸಮೇತಾ ಭೇಟಿ ನೀಡಿ ತಾಯಿಯ ದರ್ಶನ ಪಡೆದರು.
ಕುಟುಂಬದೊಂದಿಗೆ ಪ್ರವಾಸದಲ್ಲಿರುವ ತಾರಕ್(ಜೂ. ಎನ್ಟಿಆರ್) ಅವರು ತಮ್ಮ ಎರಡನೇ ದಿನವಾದ ಇಂದು ಮುಕಾಂಬಿಕಾ ದೇವಿಯ ಮಹಾಪೂಜೆಯಲ್ಲಿ ಭಾಗವಹಿಸಿ ದೇವರ ಅನುಗ್ರಹಕ್ಕೆ ತಾರಕ್ ಹಾಗೂ ಕುಟುಂಬ ಪಾತ್ರರಾದರು.
ಕೊಲ್ಲೂರಮ್ಮನ ದರ್ಶನಕ್ಕೆ ಕೇವಲ ತಾರಕ್ ಮತ್ತು ಕುಟುಂಬ ಮಾತ್ರ ಬಂದಿಲ್ಲ. ಇವರಿಗೆ ಜೊತೆಯಾಗಿ ರಿಷಬ್ ಶೆಟ್ಟಿ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್, ಪ್ರಮೋದ್ ಶೆಟ್ಟಿ ಅವರ ಕುಟುಂಬಗಳು ಸಹಾ ದೇವಿಯ ದರ್ಶನ ಪಡೆದರು.
ನಾಲ್ಕು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ತಾರಕ್ ತಾಯಿ ಶಾಲಿನಿ ನಂದಮೂರಿ ಅವರು ತಮ್ಮ ಹುಟ್ಟೂರು ಕರಾವಳಿಗೆ ಆಗಮಿಸಿದ್ದಾರೆ. ಜೊತೆಯಲ್ಲಿ ಪತ್ನಿ ಲಕ್ಷ್ಮೀ ಪ್ರಣತಿ, ತಾರಕ್ ಇದ್ದಾರೆ. ಇವರ ಜೊತೆ ರಿಷಬ್ ಪತ್ನಿ ಪ್ರಗತಿ ರಿಷಬ್, ಪ್ರಶಾಂತ್ ನೀಲ್ ಪತ್ನಿ ಲಿಖಿತಾ ನೀಲ್ ಜೊತೆಯಲ್ಲಿದ್ದರು.
ಟಾಲಿವುಡ್ ಸ್ಟಾರ್ ಕೊಲ್ಲೂರಮ್ಮನ ದರ್ಶನಕ್ಕೆ ಆಗಮಿಸಿದ ವೇಳೆ ದೇವಸ್ಥಾನ ಪ್ರಾಧಿಕಾರ ತಾರಕ್ ಅವರಿಗೆ ಗೌರವ ಸಮರ್ಪಣೆ ಮಾಡಿದರು.
ದೇವರ ದರ್ಶನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ತಾರಕ್, ದೇವಿಯ ದರ್ಶನ ಮಾಡಿಸಿದ ರಿಷಬ್ ಅವರಿಗೆ ಧನ್ಯವಾದಗಳು. ದೇವರ ದರ್ಶನ ಚೆನ್ನಾಗಿ ಆಯಿತು. ನಾನಿಲ್ಲಿ ದೇವರ ದರ್ಶನಕ್ಕಾಗಿ ಬಂದಿದ್ದೇನೆ ಹಾಗಾಗಿ ಯಾವುದೇ ಸಿನಿಮಾ ವಿಚಾರಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ದೇವಸ್ಥಾನದಲ್ಲಿ ದೇಗುಲ ಭೇಟಿ ಬಿಟ್ಟು ಬೇರೆ ವಿಚಾರ ಮಾತಾಡಲ್ಲ ಎಂದರು.
ಇನ್ನು ಕಾಂತಾರ ಸೀಕ್ವೆಲ್ನಲ್ಲಿ ಜೂ.ಎನ್ಟಿಆರ್ ನಟಿಸಲಿದ್ದಾರೆ ಎಂಬ ಗಾಸಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ರಿಷಬ್ ಅವರನ್ನೇ ಕೇಳಬೇಕು. ಅವರೇನೆ ಪ್ಲಾನ್ ಮಾಡಿದರೂ ನಾನ್ ರೆಡಿ ಎಂದರು. ಇನ್ನು ಟಾಲಿವುಡ್ನಲ್ಲಿ ವಾಯ್ಸ್ ಆಫ್ ವುಮನ್ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ನೀಡಲು ತಾರಕ್ ನಿರಾಕರಿಸಿದರು.
ಬಾರಾಮತಿ : ಭಾರತೀಯ ರಾಜಕಾರಣದಲ್ಲಿ ಅನೇಕ ರಾಜಕೀಯ ನಾಯಕರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ವಿಮಾನ ಅಪಘಾತದಲ್ಲಿ ಯಾವೆಲ್ಲಾ…
ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ…
ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ…
ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ…
ಬೆಂಗಳೂರು : ಕೆಎಸ್ಆರ್ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿಅನಂತ್ ಸುಬ್ಬರಾವ್ (85) ಬುಧವಾರ ಸಂಜೆ ನಿಧನರಾಗಿದ್ದಾರೆ.…
ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದೆ. 1987ರಲ್ಲಿ ಜರ್ಮನಿಯಿಂದ…