ಮನರಂಜನೆ

ಈ ತರಹದ ಘಟನೆ ಯಾವ ಕಲಾವಿದರಿಗೂ ಆಗಬಾರದು: ದರ್ಶನ್‍ ಕುರಿತು ಸುದೀಪ್‍

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧನವಾಗಿರುವ ನಟ ದರ್ಶನ್‍ ಅವರ ಕುರಿತು ಸುದೀಪ್‍ ಕೆಲವು ತಿಂಗಳಗಳ ಹಿಂದೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ದರ್ಶನ್‍ ಅವರನ್ನು ಚಿತ್ರರಂಗದಿಂದ ಬ್ಯಾನ್‍ ಮಾಡಬೇಕು ಎನ್ನುವುದಕ್ಕಿಂತ ನೊಂದಿರುವ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಅವರು ಹೇಳಿದ್ದರು.

ಈಗ ಈ ವಿಷಯವಾಗಿ ಸುದೀಪ್‍ ಇನ್ನಷ್ಟು ಮಾತನಾಡಿದ್ದಾರೆ. ಶನಿವಾರ ಬೆಳಿಗ್ಗೆ ತಮ್ಮ ಹುಟ್ಟುಹಬ್ಬದ ಕುರಿತು ಮಾಹಿತಿ ನೀಡುವ ಸಲುವಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸುದೀಪ್‍, ತಮ್ಮ ಹಾಗೂ ದರ್ಶನ್‍ ಸಂಬಂಧದ ಕುರಿತು ಇನ್ನಷ್ಟು ಹೇಳಿದ್ದಾರೆ.

ತಮಗೆ ಕಾನೂನಿನ ಮೇಲೆ ನಂಬಿಕೆ ಇದೆ ಎಂದು ಹೇಳಿರುವ ಸುದೀಪ್, ‘ನಾನು ದರ್ಶನ್‍ ವಿಚಾರವಾಗಿ ಏನು ಹೇಳಬೇಕಿತ್ತೋ ಅವೆಲ್ಲವನ್ನೂ ಈ ಹಿಂದೆಯೇ ಹೇಳಾಗಿದೆ. ದರ್ಶನ್ ಅವರಿಗೆ ರಾಜ್ಯಾದ್ಯ ಉದ್ಧಗಲಕ್ಕೂ ಅಭಿಮಾನಿಗಳು ಇದ್ದಾರೆ. ಅವರಿಗೆ ಕುಟುಂಬ ಇದೆ. ನಾನು ಮಾತನಾಡುವುದರಿಂದ ಅವರಿಗೆ ನೋವಾಗುವುದು ಬೇಡ. ಈ ದೇಶದಲ್ಲಿ ಇದೀವಿ ಅಂದರೆ ಕಾನೂನಿನ ಮೇಲೆ ನಂಬಿಕೆ ಇರಬೇಕು. ನನಗೆ ಕಾನೂನು, ಸರ್ಕಾರದ ಮೇಲೆ ನಂಬಿಕೆಯಿದೆ. ಆಗಬೇಕಾಗಿರೋದು ಆಗಿಯೇ ಆಗುತ್ತದೆ’ ಎಂದು ಸುದೀಪ್‍ ಹೇಳಿದರು.

ದರ್ಶನ್‍ ಅವರನ್ನು ಭೇಟಿಯಾಗುವುದಕ್ಕೆ ಜೈಲಿಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಅವರ ಜೊತೆಗೆ ಮಾತನಾಡಬೇಕಿದ್ದರೆ ಆಗಲೇ ಮಾತನಾಡಿರುತ್ತಿದ್ದೆ. ಕೆಲವರಿಂದ ನಾವು ಯಾಕೆ ಅಂತರ ಕಾಪಾಡಿಕೊಳ್ಳುತ್ತೇವೆ ಎಂದರೆ, ನಾವು ಸರಿ ಇಲ್ಲಅಥವಾ ಅವರು ಸರಿ ಇಲ್ಲ ಎಂದರ್ಥವಲ್ಲ. ನಾವಿಬ್ಬರೂ ಒಟ್ಟಿಗೆ ಸರಿ ಇಲ್ಲ ಎಂದರ್ಥ. ಸೂರ್ಯ ಬೆಳಿಗ್ಗೆ ಬಂದರೇನೇ ಒಳ್ಳೆಯದು, ಚಂದ್ರ ರಾತ್ರಿ ಬಂದರಷ್ಟೇ ಒಳ್ಳೆಯದು. ಎರಡೂ ಒಟ್ಟಿಗೆ ಸೇರಿದರೆ ಸಮಸ್ಯೆ ಆಗುತ್ತದೆ. ನಾವಿಬ್ಬರೂ ವಿಭಿನ್ನವಾದ ವ್ಯಕ್ತಿಗಳು. ಹಾಗಂತ ಸಹಬಾಳ್ವೆ ನಡೆಸುವುದಕ್ಕೆ ಸಾಧ‍್ಯವಿಲ್ಲವಾ? ನಾಟಕೀಯವಾಗಿ ಇರೋಕೆ ನನಗೆ ಬರುವುದಿಲ್ಲ. ಯಾರೋ ಹೇಳುತ್ತಾರೆ ಎಂದು ನನಗೆ ಸಂಬಂಧ ಬೆಸೆಯೋಕೆ ಇಷ್ಟವಿಲ್ಲ. ಅದು ಹೃದಯದಿಂದ ಬಂದರೆ, ಯಾರೇನಂದುಕೊಂಡರೂ ನಾನು ಹೋಗುತ್ತೀನಿ’ ಎಂದರು.

ಈ ವಿಷಯವಾಗಿ ಇನ್ನಷ್ಟು ಮಾತನಾಡಿದಾಗ, ‘ದರ್ಶನ್‍ ಅವರಿಗೆ ಅವಮಾನವಾದಾಗ, ಎಲ್ಲರೂ ಟ್ವೀಟ್ ಮಾಡಿ ಖಂಡಿಸಿದಾಗ, ನಾನು ಆ ಬಗ್ಗೆ ದೊಡ್ಡ ಪತ್ರವೇ ಬರೆದಿದ್ದೆ. ಅದನ್ನು ಯಾರನ್ನೋ ಮೆಚ್ಚಿಸುವುದಕ್ಕೆ ಮಾಡಿದ್ದಲ್ಲ. ನನ್ನ ಮನಸ್ಸಿಗೆ ಬಂತು. ಈ ತರಹದ ಘಟನೆ ಯಾವ ಕಲಾವಿದರಿಗೂ ಆಗಬಾರದು. ಎಷ್ಟೇ ಕೋಪವಿದ್ದರೂ ಆ ತರಹದ ಘಟನೆ ನಡೆಯಬಾರದು. ಅದು ನಮ್ಮ ಸಂಸ್ಕೃತಿ ಅಲ್ಲ. ಈ ತರಹದ ಘಟನೆಗಳಿಂದ ನಾಳೆ ಪಬ್ಲಿಕ್‍ನಲ್ಲಿ ಯಾರೂ ನಿಲ್ಲುವುದಕ್ಕೆ ಹೆದರಬಾರದು’ ಎಂದರು.

ಇನ್ನು, ನಾನು ಅವರ ಜೊತೆಗೆ ಇದ್ದಿದ್ದರೆ ಅವರನ್ನು ತಿದ್ದುತ್ತಿದ್ದೆ ಎಂಬುದೆಲ್ಲಾ ಸುಳ‍್ಳು ಎಂದ ಸುದೀಪ್, ‘ಒಬ್ಬ ವ್ಯಕ್ತಿ ಸಮಾಜದಲ್ಲಿ ಅಷ್ಟು ದೊಡ್ಡದಾಗಿ ಬೆಳೆದಿದ್ದಾರೆ ಎಂದರೆ ಅವರಿಗೂ ಒಂದು ಸ್ವಂತಿಕೆ ಇರುತ್ತದೆ. ಇನ್ನೊಬ್ಬರ ತಿದ್ದುವ ಶಕ್ತಿ ನನಗೆಲ್ಲಿಂದ ಬರಬೇಕು. ಅವರೇನಾದರೂ ನನ್ನ ಮಾತು ಕೇಳಿದರೆ ಓಕೆ. ತಿದ್ದುವಷ್ಟು ದೊಡ್ಡವನಲ್ಲ ನಾನು’ ಎಂದರು.

ಭೂಮಿಕಾ

Recent Posts

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

42 mins ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

1 hour ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

1 hour ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

2 hours ago

ಪಶ್ಚಿಮಘಟ್ಟ: 16114 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಮಿತಿ ಸೂಕ್ತ :ಈಶ್ವರ ಖಂಡ್ರೆ

ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಬಗ್ಗೆ ಬಾಧ್ಯಸ್ಥರ ಸಭೆ ಬೆಂಗಳೂರು: ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ…

2 hours ago

ರಾಜ್ಯದಲ್ಲಿ ತುರ್ತು ಪರಿಸ್ಥಿತಿ, ರಾಜ್ಯಪಾಲರ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನ: ಆರ್‌.ಅಶೋಕ

ಕಾಂಗ್ರೆಸ್‌ ಮಾಡುವ ಪಾಪಕ್ಕೆ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ ದೊಡ್ಡಬಳ್ಳಾಪುರ: ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದ್ದು, ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ…

2 hours ago