ಮನರಂಜನೆ

ಪ್ರೇತಾತ್ಮಗಳ ದೈವ ಈ ‘ದೈಜಿ’: ಹುಟ್ಟುಹಬ್ಬದ ಸಂಭ್ರಮದಲ್ಲಿ ರಮೇಶ್‍ ಅರವಿಂದ್‍

ರಮೇಶ್‍ ಅರವಿಂದ್‍, ಬುಧವಾರವಷ್ಟೇ (ಸೆ. 10) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ‘ದೈಜಿ’ ತಂಡ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ರಮೇಶ್‍ ಅರವಿಂದ್‍ಗೆ ಶುಭ ಕೋರಿದ್ದಾರೆ. ರಮೇಶ್‍ ಇಷ್ಟು ವರ್ಷಗಳ ಚಿತ್ರಜೀವನದಲ್ಲಿ ಹಾರರ್ ಚಿತ್ರಗಳಲ್ಲಿ ನಟಿಸಿದ್ದು ವಿರಳ. ಈಗ ಬಹಳ ದಿನಗಳ ನಂತರ ಅವರು ‘ದೈಜಿ’ ಎಂಬ ಹಾರರ್ ಚಿತ್ರದಲ್ಲಿ ನಟಿಸಿದ್ದಾರೆ.

‘ದೈಜಿ’ ಎಂದರೆ ಪ್ರೇತಾತ್ಮಗಳ ದೈವವಂತೆ. ‘ಶಿವಾಜಿ ಸುರತ್ಕಲ್‍’ ಚಿತ್ರಗಳನ್ನು ನಿರ್ದೇಶಿಸಿದ್ದ ಆಕಾಶ್‍ ಶ್ರೀವತ್ಸ ಈ ಚಿತ್ರ ನಿರ್ದೇಶಿಸಿದರೆ, ರವಿ ಕಶ್ಯಪ್‍ ನಿರ್ಮಿಸುತ್ತಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ಆಧರಿಸಿ ಅವರು ಈ ಚಿತ್ರದ ಕಥೆ ಸಹ ರಚಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್‍, ‘ನಾನು ಈ ಚಿತ್ರದಲ್ಲಿ ಸು ಫ್ರಮ್‍ ಸೋ, ರಾಧಿಕಾ ಭೂ ಫ್ರಮ್‍ ಸೋ, ದಿಗಂತ್‍ ಗ ಫ್ರಮ್‍ ಸ ಸೌ ಆಗಿ ನಟಿಸಿದ್ದೇವೆ. ಅಂದರೆ ಸೂರ್ಯ ಫ್ರಮ್‍ ಸೌಥಾಂಪ್ಟನ್‍ ಇಂಗ್ಲೆಂಡ್‍, ಭೂಮಿಕಾ ಫ್ರಮ್‍ ಸೌಥಾಂಪ್ಟನ್‍ ಇಂಗ್ಲೆಂಡ್‍ ಮತ್ತು ಗಗನ್ ಫ್ರಮ್‍ ಸೌತ್‍ ಕೆನರಾ. ನಾವು ಮೂವರು ಈ ಚಿತ್ರದಲ್ಲಿ ಅನಿವಾಸಿ ಭಾರತೀಯರಾಗಿ ಕಾಣಿಸಿಕೊಂಡಿದ್ದೇವೆ. ಇದು ಅವರ ನಡುವೆ ನಡೆಯುವ ಒಂದು ಹಾರರ್ ಕಥೆ. ‘ಪ್ರೇಮದ ಕಾಣಿಕೆ’ ಚಿತ್ರದ ಒಂದು ಹಾಡಿನಲ್ಲಿ ‘ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು …’ ಎಂಬ ಸಾಲು ಬರುತ್ತದೆ. ಹುಟ್ಟು, ಸಾವು ಕೊನೆಯಾದರೆ, ಮಧ್ಯದಲ್ಲಿರುವುದು ಏನು? ಮಧ್ಯದಲ್ಲಿರುವುದು ಒಂದೇ ವಿಷಯ, ಅದು ಪ್ರೀತಿ. ಆ ಪ್ರೀತಿ ಬೇರೆಬೇರೆ ರೀತಿಯದ್ದಾಗಿರುತ್ತದೆ.

ಇದನ್ನು ಓದಿ: ಲಾಭದಾಯಕ ಉದ್ಯಮವಾಗುತ್ತಿರುವ ಖಾಸಗಿ ಚಲನಚಿತ್ರ ಪ್ರಶಸ್ತಿ ಪರಂಪರೆಯ ನಡುವೆ 

ಒಂದು ವೇಳೆ ಸಾವು ಎನ್ನುವುದು ಕೊನೆಯಲ್ಲದಿದ್ದರೆ, ಅದರ ಆಚೆ ಇನ್ನೇನಾದರೂ ಇದ್ದರೆ? ಅಲ್ಲಿಗೆ ಹೋದವರು ವರದಿ ತಂದವರಿಲ್ಲ ಎಂದು ಡಿವಿಜಿಯವರು ಹೇಳಿದಂತೆ, ಅಲ್ಲೇನಿದೆ ಎಂದು ಯಾರಿಗೂ ಗೊತ್ತಿಲ್ಲ. ಸಾವಿನ ಆಚೆ ದುಷ್ಟಶಕ್ತಿ ಇದ್ದು, ಪ್ರೀತಿ ಕಿತ್ತುಕೊಳ್ಳುವುದಕ್ಕೆ ಪ್ರಯತ್ನಿಸಿದರೆ ಏನಾಗುತ್ತದೆ ಎಂಬುದು ಎಲ್ಲಾ ಹಾರರ್ ಸಿನಿಮಾಗಳ ಅಡಿಪಾಯ. ನಾನು ಇದುವರೆಗೂ ನೋಡಿರದ ಹಾರರ್ ಸಿನಿಮಾಗಳ ಪೈಕಿ ಯಾವೊಂದೂ ಚಿತ್ರದಲ್ಲಿ ಬರದ ವಿಷಯವನ್ನು ಈ ಚಿತ್ರದಲ್ಲಿ ಆಕಾಶ್ ಶ್ರೀವತ್ಸ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಥಾವಸ್ತು ಬಹಳ ಇಷ್ಟವಾಗಿ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿದೆ’ ಎಂದರು ರಮೇಶ್ ‍ಅರವಿಂದ್‍.

ನಾವು ಭಯಪಡುವಂತದ್ದೇನೂ ಇಲ್ಲ ಎನ್ನುವ ರಮೇಶ್‍, ‘ನಾವು ಅರ್ಥ ಮಾಡಿಕೊಳ್ಳಬೇಕಾದ ಹಲವು ವಿಷಯಗಳಿವೆ. ಅರ್ಥವಾಗುವವರೆಗೂ ಅದರ ಬಗ್ಗೆ ಭಯವಿದ್ದೇ ಇರುತ್ತದೆ. ಅದು ಎಲ್ಲಾ ವಿಷಯಗಳಿಗೂ ಅನ್ವಯವಾಗುತ್ತದೆ. ಸಿನಿಮಾ, ವ್ಯಾಪಾರ ಎಲ್ಲದರ ಬಗ್ಗೆ ಭಯ ಸಹಜ. ದೆವ್ವ, ಭೂತದ ಬಗ್ಗೆ ಭಯವಾದರೆ, ಅದು ನಮಗೆ ಅರ್ಥವಾಗಿಲ್ಲ ಅಷ್ಟೇ. ಅರ್ಥವಾಗದ ಎಲ್ಲಾ ವಿಷಯಗಳಿಗೂ ಉತ್ತರ ದೇವರು ಎಂದು ಡಿವಿಜಿ ಹೇಳುತ್ತಾರೆ. ಅದು ಸತ್ಯ’ ಎಂದರು.

ರಮೇಶ್‍ ಜೊತೆಗೆ ರಾಧಿಕಾ ನಾರಾಯಣ್‍, ದಿಗಂತ್‍, ಅವಿನಾಶ್‍, ‘ಸಿದ್ಲಿಂಗು’ ಶ್ರೀಧರ್, ಗಿರಿರಾಜ್‍ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಚಿತ್ರದ ಶೇ. 60ರಷ್ಟು ಚಿತ್ರೀಕರಣ ಮುಗಿದಿದೆ. ಈ ಚಿತ್ರದ ಟೀಸರ್ ಬಿಡುಗಡೆ ಮಾಡುವುದರ ಜೊತೆಗೆ ರಮೇಶ್‍ ಅರವಿಂದ್‍ ಅವರ ಹುಟ್ಟುಹಬ್ಬವನ್ನು ಚಿತ್ರತಂಡ ಆಚರಿಸಿತು.

ಆಂದೋಲನ ಡೆಸ್ಕ್

Recent Posts

ಮಂಡ್ಯ: ಕುಡಿಯುವ ನೀರಿನ ಗುಣಮಟ್ಟಕ್ಕೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ.ಕುಮಾರ

ಮಂಡ್ಯ: ಕುಡಿಯುವ ನೀರಿನ ಗುಣಮಟ್ಟವು ನೇರವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಸುರಕ್ಷಿತ, ಶುದ್ಧ ಮತ್ತು ರಾಸಾಯನಿಕ ಮುಕ್ತ ನೀರನ್ನು…

26 mins ago

ನಾಳೆ ಮೈಸೂರಿಗೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಜೆಟ್‌ ಅಧಿವೇಶನದ ನಡುವೆಯೇ ಸಿಎಂ ಸಿದ್ದರಾಮಯ್ಯ ನಾಳೆ ಮೈಸೂರಿಗೆ ಆಗಮಿಸಲಿದ್ದಾರೆ. ನಾಳೆ ಬೆಳಿಗ್ಗೆ 10 ಗಂಟೆಗೆ ಎಚ್‌ಎಎಲ್‌ ವಿಮಾನ…

38 mins ago

ಎಲ್‌ಪಿಜಿ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯ: ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಿಷ್ಟು.!

ಬೆಂಗಳೂರು: ಇರಾನ್‌-ಇಸ್ರೇಲ್‌ ಯುದ್ಧ ಭಾರತದ ಮೇಲೂ ಪರಿಣಾಮ ಬೀರಿದ್ದು, ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಬಗ್ಗೆ ಗೃಹ…

2 hours ago

11ನೇ ದಿನಕ್ಕೆ ಕಾಲಿಟ್ಟ ಇರಾನ್‌-ಇಸ್ರೇಲ್‌ ಸಂಘರ್ಷ

ಟೆಹರಾನ್:‌ ಇರಾನ್ ಸಂಘರ್ಷ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಅಮೇರಿಕಾದ ಶ್ವೇತಭವನದ ಹೇಳಿಕೆಗಳನ್ನು ಗಮನಿಸಿದರೆ, ಈ ಯುದ್ಧದ ಅಂತ್ಯ ಯಾವಾಗ…

2 hours ago

ಪ್ರಾಣಿ ಬಲಿ ಶಿಕ್ಷಾರ್ಹ ಅಪರಾಧ: ದಯಾನಂದ ಸ್ವಾಮೀಜಿ ಪ್ರತಿಪಾದನೆ

ಭೇರ್ಯ ಮಹೇಶ್:‌ ಕೆ.ಆರ್.‌ನಗರ ತಾಲ್ಲೂಕು ವರದಿಗಾರರು ಕೆ.ಆರ್.ನಗರ:  ಧಾರ್ಮಿಕ ಸ್ಥಳಗಳು ಕಟುಕರ ಕೇರಿಗಳಾಗಬಾರದು. ಜೀವ ತೆಗೆಯುವ ಮೃತ್ಯು ಕೂಪವಾಗಬಾರದು, ಪ್ರಾಣಿಹಿಂಸೆ…

2 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಮನೆಮಾಡಿದ ಆತಂಕ

ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಪ್ರಸಿದ್ಧ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಭಕ್ತರಲ್ಲಿ…

3 hours ago