ಮನರಂಜನೆ

ಮೈಸೂರಿನಲ್ಲಿ ಹಿಂದೆಂದೂ ಕಂಡಿರದ ಅತಿದೊಡ್ಡ ಪಾರ್ಟಿ!

ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ನವೆಂಬರ್‌ 22, 2025ರಂದು CASA BACARDÍ on tourನ ಅಂಗವಾಗಿ ಪ್ರತೀಕ್‌ ಕುಹಾದ್‌ ಅವರ ಸಾರಥ್ಯದಲ್ಲಿ ಅತಿದೊಡ್ಡ ಪಾರ್ಟಿ ನಡೆಯಲಿದೆ. ಸೈಲೆಂಟ್‌ ಶೋರ್ಸ್‌ ರೆಸಾರ್ಟ್‌ನಲ್ಲಿ ನಡೆಯಲಿರುವ ಈ ಕಾನ್ಸರ್ಟ್‌ನಲ್ಲಿ ಪ್ರತೀಕ್‌ ಅವರ ಶೈಲಿಯ ಪ್ರಸಿದ್ಧ ಮೆಲೊಡಿ ಹಾಡುಗಳ ಜೊತೆಗೆ ಜೋಶ್‌ ಹೆಚ್ಚಿಸುವ ಉತ್ಸಾಹಭರಿತ ಹಾಡುಗಳೂ ಇರಲಿದೆ. ಇದು ಮ್ಯೂಸಿಕ್‌ನ ಅತಿದೊಡ್ಡ ಸೆಲೆಬ್ರೇಷನ್!‌

ಕಳೆದ ಐದು ಆವೃತ್ತಿಗಳಲ್ಲಿ CASA BACARDÍ on tour ಭಾರತದ ದ್ವೀತಿಯ ಹಾಗೂ ತೃತೀಯ ಮಟ್ಟದ ಬೃಹತ್‌ ನಗರಗಳಲ್ಲಿ ಅತ್ಯಂತ ಪ್ರಸಿದ್ಧ ಕಾನ್ಸರ್ಟ್‌ ಎನಿಸಿಕೊಂಡಿದೆ. Lucky Ali, Amit Trivedi, Nucleya, Ritviz, Anuv Jain, Talwiinder, KING ಸೇರಿದಂತೆ ಸಾಕಷ್ಟು ಜನರು ಈ ಕಾನ್ಸರ್ಟ್‌ನಲ್ಲಿ ಭಾಗವಹಿಸಿದ್ದಾರೆ. ಲೈವ್‌ ಕಾರ್ನ್ಸರ್ಟ್‌ನ ಮೂಲಕ ಜನರನ್ನು ಹಿಂದೆಂದೂ ಕಾಣದಂತೆ ಮನೋರಂಜಿಸುತ್ತಿರುವ CASA BACARDÍ ಹಲವಾರು ಡಿಜಿಟಲ್‌ ಕ್ಯಾಂಪೇನ್‌ಗಳ ಮೂಲಕ ಕೋಟ್ಯಂತರ ಜನರನ್ನು ತಲುಪುತ್ತಿದೆ.

ಭಾರತದ ಅತ್ಯಂತ ಪ್ರಸಿದ್ಧ ಗಾಯಕ ಹಾಗೂ ಸಾಹಿತ್ಯ ರಚನೆಕಾರ ಪ್ರತೀಕ್‌ ಕುಹಾದ್‌ ತಮ್ಮ ಸಂಗೀತದ ಮೂಲಕ ಮೈಸೂರನ್ನು ಮನರಂಜಿಸಲು ಬರುತ್ತಿದ್ದಾರೆ. Cold/Mess, Kasoor, Dil Beparwah ಸೇರಿದಂತೆ ಇನ್ನೂ ಸಾಕಷ್ಟು ಹಾಡುಗಳ ಮೂಲಕ ಜಗತ್ತಿನಾದ್ಯಂತ ಕೇಳುಗರನ್ನು ಗಳಿಸಿರುವ ಟವರು ವಿವಿಧ ಬ್ರ್ಯಾಂಡ್‌ಗಳೊಂದುಗೆ ಕೆಲಸ ಮಾಡುತ್ತಾ ಸಂಗೀತ ಜಾಗತಿಕ ಭಾಷೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಇದನ್ನು ಓದಿ: ಬಾಲಿವುಡ್‌ ನಟಿ ಕಾಮಿನಿ ಕೌಶಲ್‌ ವಿಧಿವಶ

ಮುಂಬರುವ ಕಾನ್ಸರ್ಟ್‌ ಕುರಿತು ಮಾತನಾಡಿದ ಬಕಾರ್ಡಿ ಇಂಡಿಯಾದ ಮಾರ್ಕೆಟಿಂಗ್‌ ಡೈರೆಕ್ಟರ್‌ ಮಹೇಶ್‌ ಕಂಚನ್‌, ʻಪ್ರತೀಕ್‌ನ ಮ್ಯೂಸಿಕ್‌ ಅಂದರೆ ಎಲ್ಲರನ್ನೂ ಮನರಂಜಿಸುವ ಮ್ಯೂಸಿಕ್.‌ ಅದರಲ್ಲೂ ಈಗಿನ ಜೆನ್‌ ಝ಼ೀ ಯುವಜನತೆಗೆ ಇಷ್ಟವಾಗುವ ರೀತಿಯ ಮ್ಯೂಸಿಕ್.‌ ಮೈಸೂರಿನ ಜನ ಈ ಕಾನ್ಸರ್ಟ್‌ ಅನ್ನು ಬಹಳ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆʼ ಎಂದರು.

WMS Entertainmentನ ಸಹಸಂಸ್ಥಾಪಕ ಅಕ್ಷತ್‌ ಕುಮಾರ್‌ ಮಾತನಾಡಿ, ʼನಾನು ಹಲವು ವರ್ಷಗಳಿಂದ CASA BACARDÍ on tourನಲ್ಲಿ ಭಾಗಿಯಾಗಿದ್ದೇನೆ. ಈ ಕಾರ್ಯಕ್ರಮವನ್ನು ಮತ್ತೆ ಆಯೋಜಿಸುತ್ತಿರುವುದು ಖುಷಿಯ ವಿಚಾರ. ಈ ವರ್ಷ ನಾವು ಮತ್ತೊಮ್ಮೆ ಮನೋರಂಜನೆಯ ಮತ್ತೊಂದು ಮಜಲನ್ನು ಜನರಿಗೆ ತೋರಿಸಲಿದ್ದೇವೆ. ಇದು ನಮ್ಮ ಮತ್ತೊಂದು ಮೈಲಿಗಲ್ಲುʼ ಎಂದರು.

ಪ್ರಸ್ತುತ ಐದನೆಯ ಆವೃತ್ತಿಯಲ್ಲಿರುವ CASA BACARDÍ on tour ದೇಶದಾದ್ಯಂತ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರದರ್ಶನ ನೀಡಿದೆ. ಈ ಆವೃತ್ತಿಯಲ್ಲಿ ಮೈಸೂರಿನ ಜನರಿಗೆ ಭರಪೂರ ಎಂಟರ್‌ಟೈನ್‌ಮೆಂಟ್‌ ಸಿಗುವ ಜೊತೆಗೆ ಸಂಗೀತದ ಇನ್ನೊಂದು ಹೊಸ ಅನುಭವ ಸಿಗಲಿದೆ.

ನಿಮ್ಮ ಟಿಕೆಟ್‌ ಬುಕ್‌ ಮಾಡಲು ಈ ಲಿಂಕ್‌ ಕ್ಲಿಕ್‌ ಮಾಡಿ: https://www.district.in/events/casa-bacardi-on-tour-i-mysuru-nov22-2025-buy-tickets?disableSSR=true

ಆಂದೋಲನ ಡೆಸ್ಕ್

Recent Posts

ಹೆಣ್ಣು ಮಗು ಮಾರಾಟ ; ಐವರ ಬಂಧನ

ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…

7 hours ago

ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ : ಗಡಿ ಜಿಲ್ಲೆಯಲ್ಲಿ ಅಮಾನವೀಯ ಘಟನೆ

ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…

8 hours ago

ಹಾಸನದಲ್ಲಿ ಜಾ.ದಳ ಶಕ್ತಿ ಪ್ರದರ್ಶನ : ಚುನಾವಣೆಗೆ ತಯಾರಾಗುವಂತೆ ಕಾರ್ಯಕರ್ತರಿಕೆ ಎಚ್‌ಡಿಕೆ ಕರೆ

ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…

8 hours ago

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ; 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…

8 hours ago

ನಂಜನಗೂಡು | ಶ್ರೀಕಂಠೇಶ್ವರ ದೇವಾಲಯದ ಮುಂದಿನ ಅನಧಿಕೃತ ಅಂಗಡಿ ತೆರವು

ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…

9 hours ago

ಚಿನ್ನ ಕಳ್ಳ ಸಾಗಾಣಿಕೆ ಪತ್ತೆ : 2.89 ಕೋಟಿ ರೂ. ಮೌಲ್ಯದ ಚಿನ್ನ ವಶ

ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…

10 hours ago