ಮನರಂಜನೆ

‘ನಿದ್ರಾದೇವಿ ಬಾ…’ ಎಂದು ಹಾಡಿ ಮಗನನ್ನು ಮಲಗಿಸಿದ ಸುಧಾರಾಣಿ …

ಕನ್ನಡದಲ್ಲಿ ತಾಯಿ-ಮಗನ ಬಾಂಧವ್ಯ ಸಾರುವ ಹಲವು ಹಾಡುಗಳು ಬಂದಿವೆ. ಈ ಸಾಲಿಗೆ ಇದೀಗ ‘ನಿದ್ರಾದೇವಿ Next Door’ ಚಿತ್ರದ ‘ನಿದ್ರಾದೇವಿ ಬಾ …’ ಎಂಬ ಹಾಡು ಸಹ ಸೇರಿಕೊಂಡಿದೆ.

ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ, ಸುರಾಗ್ ನಿರ್ದೇಶನದ ‘ನಿದ್ರಾದೇವಿ next door’ ಚಿತ್ರವು ಸೆಪ್ಟೆಂಬರ್‍ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರವೀರ್ ಹಾಗೂ ರಿಷಿಕಾ ನಾಯಕ – ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕಾಗಿ ಪವನ್ ಭಟ್ ಬರೆದಿರುವ ‘ನಿದ್ರಾದೇವಿ ಬಾ …’ ಎಂಬ ಶೀರ್ಷಿಕೆ ಗೀತೆ ಇತ್ತೀಚೆಗೆ ಬಿಡುಗಡೆಯಾಯಿತು. ನಕುಲ ಅಭಯಂಕರ್ ಸಂಗೀತ ನೀಡಿರುವ ಈ ಹಾಡನ್ನು ಶ್ರೀಲಕ್ಷ್ಮೀ ಬೆಳ್ಮಣ್ಣು ಹಾಡಿದ್ದಾರೆ. ತಾಯಿ – ಮಗನ ಬಾಂಧವ್ಯದ ಈ ಹಾಡಿನಲ್ಲಿ ಹಿರಿಯ ನಟಿ ಸುಧಾರಾಣಿ ಹಾಗೂ ಮಾಸ್ಟರ್ ಸುಜಯ್ ಅಭಿನಯಿಸಿದ್ದಾರೆ.

‘ನಿದ್ರಾದೇವಿ Next Door’ ಚಿತ್ರಕ್ಕೆ ವಿಷ್ಣುವರ್ಧನ್‍ ಅಭಿನಯದ ಜನಪ್ರಿಯ ‘ಜೋ ಜೋ ಲಾಲಿ …’ ಬರುವ ‘ನಿದ್ರಾದೇವಿ ಬಾ …’ ಎಂಬ ಪದಗಳು ಸ್ಫೂರ್ತಿಯಂತೆ. ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸುರಾಗ್, ‘ಸಾಮಾನ್ಯವಾಗಿ ತಂದೆಗೆ ಮಗಳ ಮೇಲೆ, ತಾಯಿಗೆ ಮಗನ ಮೇಲೆ ಪ್ರೀತಿ ಜಾಸ್ತಿ ‌ಎಂಬುವುದು ವಾಡಿಕೆ. ನಮ್ಮ ಚಿತ್ರದಲ್ಲಿ ತಾಯಿ – ಮಗನ ಬಾಂಧವ್ಯ ಸಾರುವ ಹಾಡಿದೆ. ಈ ಹಾಡಿಗೆ ವಿಷ್ಣುವರ್ಧನ್‍ ಅವರ ಚಿತ್ರದ ಹಾಡುಗಳು ಸ್ಫೂರ್ತಿ’ ಎಂದರು.

ಸುಧಾರಾಣಿ ಮಾತನಾಡಿ, ‘ನಿರ್ದೇಶಕ ಸುರಾಗ್ ಅವರು ಈ ಚಿತ್ರದ ಕಥೆ ಹೇಳಿದಾಗ ಪಾತ್ರ ಇಷ್ಟವಾಯಿತು. ಕೆಲವರು ಕಥೆ ಹೇಳಬೇಕಾದರೆ ಆ ಪಾತ್ರ ಒಂದು ರೀತಿ ಇರುತ್ತದೆ, ತೆರೆಯ ಮೇಲೆ ಬಂದಾಗ ಬೇರೆ ರೀತಿಯೇ ಇರುತ್ತದೆ. ಆದರೆ, ಸುರಾಗ್ ಅವರು ಕಥೆ ಹೇಳಿದ ಹಾಗೆಯೇ ಪಾತ್ರವನ್ನು ತೆರೆಯ ಮೇಲೆ ತಂದಿದ್ದಾರೆ. ತಾಯಿ – ಮಗನ ಬಾಂಧವ್ಯದ ಹಾಡು ತುಂಬಾ ಚೆನ್ನಾಗಿದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ’ ಎಂದು ಹಾರೈಸಿದರು.

‘ನಿದ್ರಾದೇವಿ next door’ ಚಿತ್ರದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಶೈನ್ ಶೆಟ್ಟಿ, ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ನೊಂದ ಪುರುಷರ ಹಕ್ಕುಗಳ ರಕ್ಷಣೆಗೆ ಆಯೋಗ ರಚಿಸಿ ; ಎ.ಎಚ್.ವಿಶ್ವನಾಥ್‌

ಮೈಸೂರು : ಸಮಾಜದಲ್ಲಿ ನಾನಾ ಕಾರಣಗಳಿಂದ ನೊಂದ ಪುರುಷರ ಹಕ್ಕುಗಳ ರಕ್ಷಣೆ ಹಾಗೂ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು…

7 hours ago

ಮೈಸೂರು | ಎನ್‌.ಆರ್‌.ಕ್ಷೇತ್ರದಲ್ಲಿ ನಿಯಮಬಾಹಿರ ಎಸ್‌ಐಆರ್‌ : ಸಂಸದ ಯದುವೀರ್ ಆರೋಪ

ಮೈಸೂರು : ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಿಯಮದಂತೆ ನಡೆಯುತ್ತಿಲ್ಲ. ಗುಂಪು ಗುಂಪಾಗಿ ಮತದಾರರ ಪಟ್ಟಿ ಪರಿಷ್ಕರಣೆ…

7 hours ago

‘ಕೊಲೆ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ’

ಎಚ್.ಎಸ್.ದಿನೇಶ್ ಕುಮಾರ್ ನಿತ್ಯಾನಂದ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪಶ್ಚಾತ್ತಾಪದ ಕಣ್ಣೀರು ಮೈಸೂರು: ನಗರದ ಕುವೆಂಪುನಗರದಲ್ಲಿ ಪತ್ನಿಯಿಂದಲೇ ಹತ್ಯೆಯಾದ ನಿತ್ಯಾನಂದ…

13 hours ago

ಕೊಡಗು ಜಿಲ್ಲೆಯಾದ್ಯಂತ ಚುರುಕುಗೊಂಡ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕು ಪಡೆದುಕೊಂಡಿದ್ದು, ಹಾರಂಗಿ ಜಲಾಶಯದ ಒಳಹರಿವಿನಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದೆ. ಹಾರಂಗಿ ಜಲಾಶಯಕ್ಕೆ…

15 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಮಹಾತ್ಮನ ಚಿಂತನೆಯ ಹಾದಿಯಲ್ಲಿ ನಡೆಯಬೇಕಿದೆ ನಾನು ಕಂಡ ಗಾಂಧಿಜಿಯವರಲ್ಲಿ, ಅವರ ಜೀವನದಲ್ಲಿ ನನ್ನನ್ನು ಅತ್ಯಂತ ಹೆಚ್ಚಾಗಿ ಆಕರ್ಷಿಸಿದ ವಿಷಯ ಎಂದರೆ…

16 hours ago

ಮನುಷ್ಯ ಕುಲದ ಪ್ರಜ್ಞಾವಂತಿಕೆ ವಿಕಾಸಕ್ಕೆ ಗಾಂಧೀಜಿ ಕೈಮರ

ಗಾಂಧಿಜಿಯವರ ಜೀವನ ಚರಿತ್ರೆ ದೇಶ, ಖಂಡಗಳ ಗಡಿ ದಾಟಿ ಮನುಷ್ಯರೆಲ್ಲರ ಒಳಿತನ್ನು ಬಯಸುವ ಬಯಕೆಯನ್ನು ಭಾವಿಸಿ, ಜೀವಿಸಿ ತೋರಿಸಿದವರ ಪುಣ್ಯ…

16 hours ago